Loading date... | Loading Hijri date... | Loading time...

آل عمران

ಕನ್ನಡ Translation with Arabic Quran Text

ಕನ್ನಡ العربية
1 ಅಲಿಫ್ ಲಾಮ್ ಮೀಮ್. الٓمٓ. ﴿1﴾
2 ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲವನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ٱللَّهُ لَآ إِلَٰهَ إِلَّا هُوَ ٱلْحَىُّ ٱلْقَيُّومُ. ﴿2﴾
3 ಅವನು ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದಾನೆ. ಇದು ಹಿಂದಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅವನು ತೌರಾತ್ ಮತ್ತು ಇಂಜೀಲನ್ನು ಕೂಡ ಅವತೀರ್ಣಗೊಳಿಸಿದ್ದನು. نَزَّلَ عَلَيْكَ ٱلْكِتَٰبَ بِٱلْحَقِّ مُصَدِّقًۭا لِّمَا بَيْنَ يَدَيْهِ وَأَنزَلَ ٱلتَّوْرَىٰةَ وَٱلْإِنجِيلَ. ﴿3﴾
4 ಇದಕ್ಕಿಂತ ಮೊದಲು ಜನರಿಗೆ ಸನ್ಮಾರ್ಗದರ್ಶಿಯಾಗಿ. ಅವನು (ಸತ್ಯಾಸತ್ಯವನ್ನು ಬೇರ್ಪಡಿಸಿ ತೋರಿಸುವ) ಕುರ್‌ಆನನ್ನು ಕೂಡ ಅವತೀರ್ಣಗೊಳಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹನ ವಚನಗಳನ್ನು ನಿಷೇಧಿಸುವವರು ಯಾರೋ—ಅವರಿಗೆ ಕಠಿಣ ಶಿಕ್ಷೆಯಿದೆ. ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ. مِن قَبْلُ هُدًۭى لِّلنَّاسِ وَأَنزَلَ ٱلْفُرْقَانَ ۗ إِنَّ ٱلَّذِينَ كَفَرُوا۟ بِـَٔايَٰتِ ٱللَّهِ لَهُمْ عَذَابٌۭ شَدِيدٌۭ ۗ وَٱللَّهُ عَزِيزٌۭ ذُو ٱنتِقَامٍ. ﴿4﴾
5 ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವ ಯಾವುದೇ ವಸ್ತು ಅಲ್ಲಾಹನಿಂದ ಮರೆಯಾಗಿಲ್ಲ. إِنَّ ٱللَّهَ لَا يَخْفَىٰ عَلَيْهِ شَىْءٌۭ فِى ٱلْأَرْضِ وَلَا فِى ٱلسَّمَآءِ. ﴿5﴾
6 ತಾಯಿಯ ಗರ್ಭದಲ್ಲಿ ಅವನು ಇಚ್ಛಿಸುವ ರೀತಿಯಲ್ಲಿ ನಿಮಗೆ ರೂಪ ಕೊಡುವವನು ಅವನೇ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. هُوَ ٱلَّذِى يُصَوِّرُكُمْ فِى ٱلْأَرْحَامِ كَيْفَ يَشَآءُ ۚ لَآ إِلَٰهَ إِلَّا هُوَ ٱلْعَزِيزُ ٱلْحَكِيمُ. ﴿6﴾
7 ನಿಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ.[1] ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಬೀಳುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: “ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದಾಗಿದೆ.” ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಪಡೆಯುವುದಿಲ್ಲ.
[1] ಸ್ಪಷ್ಟವಚನಗಳು ಅಂದರೆ ಆದೇಶ-ವಿರೋಧಗಳು, ನಿಯಮಗಳು, ಸಮಸ್ಯೆಗಳಿಗೆ ಪರಿಹಾರಗಳು, ಸಮಾಚಾರಗಳು ಮತ್ತು ನಿರೂಪಣೆಗಳಿರುವ ವಚನಗಳು. ಇವುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಿಲ್ಲ. ಹೋಲಿಕೆಯಿರುವ ವಚನಗಳು ಇವುಗಳಿಗೆ ತದ್ವಿರುದ್ಧವಾದದ್ದು. ಅವು ಅಲ್ಲಾಹನ ಅಸ್ತಿತ್ವ, ವಿಧಿ-ನಿರ್ಣಯ, ಸ್ವರ್ಗ-ನರಕ, ದೇವದೂತರು ಮುಂತಾದವುಗಳಿಗೆ ಸಂಬಂಧಿಸಿದ ವಿವರಣೆಗಳಿರುವ ವಚನಗಳು.
هُوَ ٱلَّذِىٓ أَنزَلَ عَلَيْكَ ٱلْكِتَٰبَ مِنْهُ ءَايَٰتٌۭ مُّحْكَمَٰتٌ هُنَّ أُمُّ ٱلْكِتَٰبِ وَأُخَرُ مُتَشَٰبِهَٰتٌۭ ۖ فَأَمَّا ٱلَّذِينَ فِى قُلُوبِهِمْ زَيْغٌۭ فَيَتَّبِعُونَ مَا تَشَٰبَهَ مِنْهُ ٱبْتِغَآءَ ٱلْفِتْنَةِ وَٱبْتِغَآءَ تَأْوِيلِهِۦ ۗ وَمَا يَعْلَمُ تَأْوِيلَهُۥٓ إِلَّا ٱللَّهُ ۗ وَٱلرَّٰسِخُونَ فِى ٱلْعِلْمِ يَقُولُونَ ءَامَنَّا بِهِۦ كُلٌّۭ مِّنْ عِندِ رَبِّنَا ۗ وَمَا يَذَّكَّرُ إِلَّآ أُو۟لُوا۟ ٱلْأَلْبَٰبِ. ﴿7﴾
8 “ಓ ನಮ್ಮ ಪರಿಪಾಲಕನೇ! ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸಬೇಡ. ನಮಗೆ ನಿನ್ನ ಕಡೆಯಿಂದ ದಯೆಯನ್ನು ಸುರಿಸು. ನಿಶ್ಚಯವಾಗಿಯೂ ನೀನು ಅತಿದೊಡ್ಡ ಉದಾರಿಯಾಗಿರುವೆ. رَبَّنَا لَا تُزِغْ قُلُوبَنَا بَعْدَ إِذْ هَدَيْتَنَا وَهَبْ لَنَا مِن لَّدُنكَ رَحْمَةً ۚ إِنَّكَ أَنتَ ٱلْوَهَّابُ. ﴿8﴾
9 ಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ಒಂದು ದಿನ ನೀನು ಎಲ್ಲಾ ಜನರನ್ನೂ ಒಟ್ಟುಗೂಡಿಸುವೆ. ಆ ದಿನ ಬರುವುದರಲ್ಲಿ ಸಂಶಯವೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.” رَبَّنَآ إِنَّكَ جَامِعُ ٱلنَّاسِ لِيَوْمٍۢ لَّا رَيْبَ فِيهِ ۚ إِنَّ ٱللَّهَ لَا يُخْلِفُ ٱلْمِيعَادَ. ﴿9﴾
10 ಸತ್ಯನಿಷೇಧಿಗಳು ಯಾರೋ—ಅವರಿಗೆ ಅವರ ಆಸ್ತಿಗಳು ಅಥವಾ ಮಕ್ಕಳು ಅಲ್ಲಾಹನ ಬಳಿ ಯಾವುದೇ ಉಪಕಾರ ಮಾಡುವುದಿಲ್ಲ. ಅವರೇ ನರಕಾಗ್ನಿಯ ಇಂಧನವಾಗುವವರು. إِنَّ ٱلَّذِينَ كَفَرُوا۟ لَن تُغْنِىَ عَنْهُمْ أَمْوَٰلُهُمْ وَلَآ أَوْلَٰدُهُم مِّنَ ٱللَّهِ شَيْـًۭٔا ۖ وَأُو۟لَٰٓئِكَ هُمْ وَقُودُ ٱلنَّارِ. ﴿10﴾
11 ಫರೋಹನ ಜನರ ಮತ್ತು ಅವರಿಗಿಂತ ಹಿಂದಿನವರ ಸ್ಥಿತಿಯಂತೆ. ಅವರು ನಮ್ಮ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸಿದನು. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ. كَدَأْبِ ءَالِ فِرْعَوْنَ وَٱلَّذِينَ مِن قَبْلِهِمْ ۚ كَذَّبُوا۟ بِـَٔايَٰتِنَا فَأَخَذَهُمُ ٱللَّهُ بِذُنُوبِهِمْ ۗ وَٱللَّهُ شَدِيدُ ٱلْعِقَابِ. ﴿11﴾
12 ಸತ್ಯನಿಷೇಧಿಗಳೊಡನೆ ಹೇಳಿರಿ: “ಸದ್ಯದಲ್ಲೇ ನಿಮ್ಮನ್ನು ಸೋಲಿಸಲಾಗುವುದು ಮತ್ತು ನರಕದ ಕಡೆಗೆ ಒಟ್ಟುಗೂಡಿಸಲಾಗುವುದು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.”[1]
[1] ಇಲ್ಲಿ ಸತ್ಯನಿಷೇಧಿಗಳು ಎಂದರೆ ಯಹೂದಿಗಳು. ಈ ಭವಿಷ್ಯ ನುಡಿಯು ಸ್ವಲ್ಪ ಸಮಯದಲ್ಲೇ ಸತ್ಯವಾಗಿದೆ. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಹಾಗೂ ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು. ನಂತರ ಖೈಬರ್ ಕೋಟೆಯನ್ನು ವಶಪಡಿಸಲಾಯಿತು.
قُل لِّلَّذِينَ كَفَرُوا۟ سَتُغْلَبُونَ وَتُحْشَرُونَ إِلَىٰ جَهَنَّمَ ۚ وَبِئْسَ ٱلْمِهَادُ. ﴿12﴾
13 (ಬದ್ರ್‌ನಲ್ಲಿ) ಮುಖಾಮುಖಿಯಾದ ಆ ಎರಡು ಬಣಗಳಲ್ಲಿ ನಿಶ್ಚಯವಾಗಿಯೂ ನಿಮಗೆ ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು. ಇನ್ನೊಂದು ಬಣವು ಸತ್ಯನಿಷೇಧಿಗಳದ್ದಾಗಿತ್ತು. ಅವರು ತಮ್ಮ ದೃಷ್ಟಿಯಲ್ಲಿ ಸತ್ಯವಿಶ್ವಾಸಿಗಳನ್ನು ತಮಗಿಂತ ಇಮ್ಮಡಿ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಅಲ್ಲಾಹು ತನ್ನ ಸಹಾಯದಿಂದ ತಾನು ಇಚ್ಛಿಸುವವರನ್ನು ಬೆಂಬಲಿಸುತ್ತಾನೆ. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಿಯುಳ್ಳವರಿಗೆ ನೀತಿಪಾಠವಿದೆ. قَدْ كَانَ لَكُمْ ءَايَةٌۭ فِى فِئَتَيْنِ ٱلْتَقَتَا ۖ فِئَةٌۭ تُقَٰتِلُ فِى سَبِيلِ ٱللَّهِ وَأُخْرَىٰ كَافِرَةٌۭ يَرَوْنَهُم مِّثْلَيْهِمْ رَأْىَ ٱلْعَيْنِ ۚ وَٱللَّهُ يُؤَيِّدُ بِنَصْرِهِۦ مَن يَشَآءُ ۗ إِنَّ فِى ذَٰلِكَ لَعِبْرَةًۭ لِّأُو۟لِى ٱلْأَبْصَٰرِ. ﴿13﴾
14 ಮಹಿಳೆಯರು, ಗಂಡುಮಕ್ಕಳು, ಬಂಗಾರ ಮತ್ತು ಬೆಳ್ಳಿಯನ್ನು ಸಂಗ್ರಹಿಸಿಡಲಾದ ಖಜಾನೆಗಳು, ಉತ್ಕೃಷ್ಟ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿಗಳು ಮುಂತಾದ ಜನರು ಮೋಹಿಸುವ ವಸ್ತುಗಳಲ್ಲಿರುವ ಪ್ರೀತಿಯನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಅವು ಇಹಲೋಕ ಜೀವನದ ಆನಂದಗಳಾಗಿವೆ. ಮರಳಿ ತಲುಪಬೇಕಾದ ಅತ್ಯುತ್ತಮ ಸ್ಥಳವು ಅಲ್ಲಾಹನ ಬಳಿಯಿದೆ. زُيِّنَ لِلنَّاسِ حُبُّ ٱلشَّهَوَٰتِ مِنَ ٱلنِّسَآءِ وَٱلْبَنِينَ وَٱلْقَنَٰطِيرِ ٱلْمُقَنطَرَةِ مِنَ ٱلذَّهَبِ وَٱلْفِضَّةِ وَٱلْخَيْلِ ٱلْمُسَوَّمَةِ وَٱلْأَنْعَٰمِ وَٱلْحَرْثِ ۗ ذَٰلِكَ مَتَٰعُ ٱلْحَيَوٰةِ ٱلدُّنْيَا ۖ وَٱللَّهُ عِندَهُۥ حُسْنُ ٱلْمَـَٔابِ. ﴿14﴾
15 ಹೇಳಿರಿ: “ಅದಕ್ಕಿಂತಲೂ ಉತ್ತಮವಾದ ವಸ್ತುವನ್ನು ನಾನು ನಿಮಗೆ ತಿಳಿಸಿಕೊಡಲೇ? ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಪರಿಶುದ್ಧ ಸಂಗಾತಿಗಳಿದ್ದಾರೆ ಮತ್ತು ಅಲ್ಲಾಹನ ಕಡೆಯ ಸಂಪ್ರೀತಿಯೂ ಇದೆ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.” ۞ قُلْ أَؤُنَبِّئُكُم بِخَيْرٍۢ مِّن ذَٰلِكُمْ ۚ لِلَّذِينَ ٱتَّقَوْا۟ عِندَ رَبِّهِمْ جَنَّٰتٌۭ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَا وَأَزْوَٰجٌۭ مُّطَهَّرَةٌۭ وَرِضْوَٰنٌۭ مِّنَ ٱللَّهِ ۗ وَٱللَّهُ بَصِيرٌۢ بِٱلْعِبَادِ. ﴿15﴾
16 ಅವರು (ದೇವಭಯವುಳ್ಳವರು) ಯಾರೆಂದರೆ: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು” ಎಂದು ಹೇಳುವವರು. ٱلَّذِينَ يَقُولُونَ رَبَّنَآ إِنَّنَآ ءَامَنَّا فَٱغْفِرْ لَنَا ذُنُوبَنَا وَقِنَا عَذَابَ ٱلنَّارِ. ﴿16﴾
17 ಅವರು ತಾಳ್ಮೆಯುಳ್ಳವರು, ಸತ್ಯವಂತರು, ವಿಧೇಯರು, ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಮತ್ತು ರಾತ್ರಿಯ ಅಂತ್ಯ ಯಾಮಗಳಲ್ಲಿ ಕ್ಷಮೆಯಾಚಿಸುವವರು. ٱلصَّٰبِرِينَ وَٱلصَّٰدِقِينَ وَٱلْقَٰنِتِينَ وَٱلْمُنفِقِينَ وَٱلْمُسْتَغْفِرِينَ بِٱلْأَسْحَارِ. ﴿17﴾
18 ತನ್ನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂದು ಅಲ್ಲಾಹು ಸಾಕ್ಷಿವಹಿಸಿದ್ದಾನೆ, ಅವನ ದೇವದೂತರುಗಳು ಮತ್ತು ವಿದ್ವಾಂಸರು (ಕೂಡ ಸಾಕ್ಷಿವಹಿಸಿದ್ದಾರೆ). ಅವನು ಸ್ಥಿರವಾಗಿ ನ್ಯಾಯವನ್ನು ಪಾಲಿಸುವವನು. ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. شَهِدَ ٱللَّهُ أَنَّهُۥ لَآ إِلَٰهَ إِلَّا هُوَ وَٱلْمَلَٰٓئِكَةُ وَأُو۟لُوا۟ ٱلْعِلْمِ قَآئِمًۢا بِٱلْقِسْطِ ۚ لَآ إِلَٰهَ إِلَّا هُوَ ٱلْعَزِيزُ ٱلْحَكِيمُ. ﴿18﴾
19 ನಿಶ್ಚಯವಾಗಿಯೂ ಅಲ್ಲಾಹನ ಬಳಿ (ಸ್ವೀಕಾರವಾಗುವ) ಧರ್ಮವು ಇಸ್ಲಾಮ್ ಮಾತ್ರ. ಗ್ರಂಥ ನೀಡಲಾದವರು ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಭಿನ್ನರಾಗಲಿಲ್ಲ. ಅದು ಅವರು ಪರಸ್ಪರ ಹೊಂದಿದ್ದ ವಿದ್ವೇಷ ಮತ್ತು ಅಸೂಯೆಯ ಕಾರಣದಿಂದಾಗಿತ್ತು. ಯಾರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ಅತಿ ಶೀಘ್ರವಾಗಿ ವಿಚಾರಣೆ ಮಾಡುವನು. إِنَّ ٱلدِّينَ عِندَ ٱللَّهِ ٱلْإِسْلَٰمُ ۗ وَمَا ٱخْتَلَفَ ٱلَّذِينَ أُوتُوا۟ ٱلْكِتَٰبَ إِلَّا مِنۢ بَعْدِ مَا جَآءَهُمُ ٱلْعِلْمُ بَغْيًۢا بَيْنَهُمْ ۗ وَمَن يَكْفُرْ بِـَٔايَٰتِ ٱللَّهِ فَإِنَّ ٱللَّهَ سَرِيعُ ٱلْحِسَابِ. ﴿19﴾
20 ಅದರ ನಂತರವೂ ಅವರು ನಿಮ್ಮೊಡನೆ ತರ್ಕ ಮಾಡಿದರೆ ನೀವು ಹೇಳಿರಿ: “ನಾನು ಮತ್ತು ನನ್ನ ಅನುಯಾಯಿಗಳು ನಮ್ಮ ಮುಖಗಳನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗಿಸಿದ್ದೇವೆ.” ಗ್ರಂಥ ನೀಡಲಾದವರೊಂದಿಗೆ ಮತ್ತು ಅನಕ್ಷರಸ್ಥರೊಂದಿಗೆ (ಅರಬ್ ಬಹುದೇವಾರಾಧಕರೊಂದಿಗೆ) ಕೇಳಿರಿ: “ನೀವು ಶರಣಾಗಿದ್ದೀರಾ?” ಅವರು ಶರಣಾದರೆ ಅವರು ಸನ್ಮಾರ್ಗವನ್ನು ಪಡೆಯುತ್ತಾರೆ. ಆದರೆ ಅವರು ಮುಖ ತಿರುಗಿಸಿ ನಡೆದರೆ ನಿಮ್ಮ ಕರ್ತವ್ಯವು ಅವರಿಗೆ ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ. فَإِنْ حَآجُّوكَ فَقُلْ أَسْلَمْتُ وَجْهِىَ لِلَّهِ وَمَنِ ٱتَّبَعَنِ ۗ وَقُل لِّلَّذِينَ أُوتُوا۟ ٱلْكِتَٰبَ وَٱلْأُمِّيِّۦنَ ءَأَسْلَمْتُمْ ۚ فَإِنْ أَسْلَمُوا۟ فَقَدِ ٱهْتَدَوا۟ ۖ وَّإِن تَوَلَّوْا۟ فَإِنَّمَا عَلَيْكَ ٱلْبَلَٰغُ ۗ وَٱللَّهُ بَصِيرٌۢ بِٱلْعِبَادِ. ﴿20﴾
21 ಅಲ್ಲಾಹನ ವಚನಗಳನ್ನು ನಿಷೇಧಿಸುವವರು, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವವರು ಮತ್ತು ನ್ಯಾಯ ಪಾಲಿಸಲು ಆದೇಶಿಸುವ ಜನರನ್ನು ಹತ್ಯೆ ಮಾಡುವವರು ಯಾರೋ—ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ. إِنَّ ٱلَّذِينَ يَكْفُرُونَ بِـَٔايَٰتِ ٱللَّهِ وَيَقْتُلُونَ ٱلنَّبِيِّۦنَ بِغَيْرِ حَقٍّۢ وَيَقْتُلُونَ ٱلَّذِينَ يَأْمُرُونَ بِٱلْقِسْطِ مِنَ ٱلنَّاسِ فَبَشِّرْهُم بِعَذَابٍ أَلِيمٍ. ﴿21﴾
22 ಇಹಲೋಕದಲ್ಲೂ, ಪರಲೋಕದಲ್ಲೂ ಅವರ ಕರ್ಮಗಳು ನಿಷ್ಫಲವಾಗಿವೆ. ಅವರಿಗೆ ಯಾವುದೇ ಸಹಾಯಕರಿಲ್ಲ. أُو۟لَٰٓئِكَ ٱلَّذِينَ حَبِطَتْ أَعْمَٰلُهُمْ فِى ٱلدُّنْيَا وَٱلْءَاخِرَةِ وَمَا لَهُم مِّن نَّٰصِرِينَ. ﴿22﴾
23 ಗ್ರಂಥದಿಂದ ಒಂದು ಪಾಲು ನೀಡಲಾದವರನ್ನು (ಯಹೂದಿಗಳನ್ನು) ನೀವು ನೋಡಿಲ್ಲವೇ? ಅವರ (ಯಹೂದಿಗಳ) ನಡುವೆ ತೀರ್ಪು ನೀಡಲು ಅವರನ್ನು ಅಲ್ಲಾಹನ ಗ್ರಂಥಕ್ಕೆ ಕರೆಯಲಾಗುತ್ತದೆ. ಅದರ ನಂತರವೂ ಅವರಲ್ಲೊಂದು ಗುಂಪು ಮುಖ ತಿರುಗಿಸಿ ವಿಮುಖರಾಗುತ್ತಾರೆ. أَلَمْ تَرَ إِلَى ٱلَّذِينَ أُوتُوا۟ نَصِيبًۭا مِّنَ ٱلْكِتَٰبِ يُدْعَوْنَ إِلَىٰ كِتَٰبِ ٱللَّهِ لِيَحْكُمَ بَيْنَهُمْ ثُمَّ يَتَوَلَّىٰ فَرِيقٌۭ مِّنْهُمْ وَهُم مُّعْرِضُونَ. ﴿23﴾
24 ಅದೇಕೆಂದರೆ ಅವರು ಹೇಳುತ್ತಾರೆ: “ಬೆರಳೆಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಸುಡುವುದಿಲ್ಲ.” ಅವರು ಏನು ಕಲ್ಪಿಸಿ ಹೇಳುತ್ತಿದ್ದಾರೋ ಅದು ಅವರನ್ನು ಅವರ ಧರ್ಮದ ವಿಷಯದಲ್ಲಿ ಮರುಳುಗೊಳಿಸಿದೆ. ذَٰلِكَ بِأَنَّهُمْ قَالُوا۟ لَن تَمَسَّنَا ٱلنَّارُ إِلَّآ أَيَّامًۭا مَّعْدُودَٰتٍۢ ۖ وَغَرَّهُمْ فِى دِينِهِم مَّا كَانُوا۟ يَفْتَرُونَ. ﴿24﴾
25 ಯಾವುದೇ ಸಂಶಯವಿಲ್ಲದ ಒಂದು ದಿನ (ಪುನರುತ್ಥಾನ ದಿನ) ನಾವು ಅವರನ್ನು ಒಟ್ಟುಗೂಡಿಸಿದರೆ (ಅವರ ಸ್ಥಿತಿ) ಹೇಗಿರಬಹುದು? ಅಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. فَكَيْفَ إِذَا جَمَعْنَٰهُمْ لِيَوْمٍۢ لَّا رَيْبَ فِيهِ وَوُفِّيَتْ كُلُّ نَفْسٍۢ مَّا كَسَبَتْ وَهُمْ لَا يُظْلَمُونَ. ﴿25﴾
26 ಹೇಳಿರಿ: “ಓ ಸಾರ್ವಭೌಮತ್ವದ ಒಡೆಯನಾದ ಅಲ್ಲಾಹನೇ! ನೀನು ಇಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನು ಇಚ್ಛಿಸುವವರಿಂದ ಆಧಿಪತ್ಯವನ್ನು ಕಸಿಯುವೆ. ನೀನು ಇಚ್ಛಿಸುವವರಿಗೆ ಪ್ರತಿಷ್ಠೆಯನ್ನು ನೀಡುವೆ ಮತ್ತು ನೀನು ಇಚ್ಛಿಸುವವರನ್ನು ಅವಮಾನಕ್ಕೆ ಗುರಿಯಾಗಿಸುವೆ. ಒಳಿತುಗಳೆಲ್ಲವೂ ನಿನ್ನ ಕೈಯಲ್ಲಿದೆ. ನಿಶ್ಚಯವಾಗಿಯೂ ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ. قُلِ ٱللَّهُمَّ مَٰلِكَ ٱلْمُلْكِ تُؤْتِى ٱلْمُلْكَ مَن تَشَآءُ وَتَنزِعُ ٱلْمُلْكَ مِمَّن تَشَآءُ وَتُعِزُّ مَن تَشَآءُ وَتُذِلُّ مَن تَشَآءُ ۖ بِيَدِكَ ٱلْخَيْرُ ۖ إِنَّكَ عَلَىٰ كُلِّ شَىْءٍۢ قَدِيرٌۭ. ﴿26﴾
27 ನೀನು ರಾತ್ರಿಯನ್ನು ಹಗಲಿನಲ್ಲಿ ತೂರಿಸುವೆ ಮತ್ತು ಹಗಲನ್ನು ರಾತ್ರಿಯಲ್ಲಿ ತೂರಿಸುವೆ. ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನು ಇಚ್ಛಿಸುವವರಿಗೆ ನೀನು ಲೆಕ್ಕವಿಲ್ಲದೆ ನೀಡುವೆ.” تُولِجُ ٱلَّيْلَ فِى ٱلنَّهَارِ وَتُولِجُ ٱلنَّهَارَ فِى ٱلَّيْلِ ۖ وَتُخْرِجُ ٱلْحَىَّ مِنَ ٱلْمَيِّتِ وَتُخْرِجُ ٱلْمَيِّتَ مِنَ ٱلْحَىِّ ۖ وَتَرْزُقُ مَن تَشَآءُ بِغَيْرِ حِسَابٍۢ. ﴿27﴾
28 ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬಾರದು.[1] ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನಿಂದ ಯಾವುದೇ ರಕ್ಷಣೆಯಿಲ್ಲ. ಆದರೆ ಅವರ ಕೆಡುಕಿನಿಂದ ಪಾರಾಗುವ ಉದ್ದೇಶವಿದ್ದರೆ ಹೊರತು.[2] ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. (ಎಲ್ಲರೂ) ಅಲ್ಲಾಹನ ಬಳಿಗೇ ಮರಳಬೇಕಾಗಿದೆ.
[1] ಇಲ್ಲಿ ಸತ್ಯನಿಷೇಧಿಗಳು ಎಂದರೆ ಸತ್ಯವಿಶ್ವಾಸಿಗಳೊಂದಿಗೆ ವೈರ ಮತ್ತು ದ್ವೇಷ ಕಟ್ಟಿಕೊಂಡಿರುವ ಸತ್ಯನಿಷೇಧಿಗಳು. ಆದರೆ ಸತ್ಯವಿಶ್ವಾಸಿಗಳೊಂದಿಗೆ ವೈರತ್ವವಿಲ್ಲದ, ದ್ವೇಷವನ್ನು ಹೊಂದಿಲ್ಲದ ಸತ್ಯನಿಷೇಧಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವುದರಲ್ಲಿ ತೊಂದರೆಯಿಲ್ಲ. [2] ಅಂದರೆ ಸತ್ಯನಿಷೇಧಿಗಳೊಡನೆ ಸ್ನೇಹ ಮಾಡಿಕೊಳ್ಳದ ಹೊರತು ಅವರ ಹಿಂಸೆಯಿಂದ ಪಾರಾಗಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಬಾಹ್ಯವಾಗಿ ಅವರೊಡನೆ ಸ್ನೇಹ ಮಾಡಿಕೊಳ್ಳಬಹುದು. ಇದು ಸಾಮಾನ್ಯವಾಗಿ ಮುಸ್ಲಿಮೇತರ ದೇಶಗಳಲ್ಲಿ ವಾಸಿಸುವ ಮುಸಲ್ಮಾನರಿಗೆ ಸಂಬಂಧಿಸಿದ್ದಾಗಿದೆ.
لَّا يَتَّخِذِ ٱلْمُؤْمِنُونَ ٱلْكَٰفِرِينَ أَوْلِيَآءَ مِن دُونِ ٱلْمُؤْمِنِينَ ۖ وَمَن يَفْعَلْ ذَٰلِكَ فَلَيْسَ مِنَ ٱللَّهِ فِى شَىْءٍ إِلَّآ أَن تَتَّقُوا۟ مِنْهُمْ تُقَىٰةًۭ ۗ وَيُحَذِّرُكُمُ ٱللَّهُ نَفْسَهُۥ ۗ وَإِلَى ٱللَّهِ ٱلْمَصِيرُ. ﴿28﴾
29 ಹೇಳಿರಿ: “ನೀವು ನಿಮ್ಮ ಎದೆಗಳಲ್ಲಿರುವುದನ್ನು ಮುಚ್ಚಿಟ್ಟರೂ ಅಥವಾ ಬಹಿರಂಗಪಡಿಸಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅವನು ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ತಿಳಿಯುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.” قُلْ إِن تُخْفُوا۟ مَا فِى صُدُورِكُمْ أَوْ تُبْدُوهُ يَعْلَمْهُ ٱللَّهُ ۗ وَيَعْلَمُ مَا فِى ٱلسَّمَٰوَٰتِ وَمَا فِى ٱلْأَرْضِ ۗ وَٱللَّهُ عَلَىٰ كُلِّ شَىْءٍۢ قَدِيرٌۭ. ﴿29﴾
30 ಪ್ರತಿಯೊಬ್ಬನೂ ತಾನು ಮಾಡಿದ ಒಳಿತನ್ನು ಮತ್ತು ತಾನು ಮಾಡಿದ ಕೆಡುಕನ್ನು ತನ್ನ ಮುಂದೆ ಪ್ರದರ್ಶಿಸಿಟ್ಟಿರುವುದನ್ನು ನೋಡುವ ದಿನ. ತನ್ನ ಮತ್ತು ಅದರ (ಕೆಡುಕಿನ) ನಡುವೆ ವಿದೂರ ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವನು ಹಾರೈಸುವನು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಾಹನಿಗೆ ದಾಸರ ಮೇಲೆ ಅಪಾರ ಸಹಾನುಭೂತಿಯಿದೆ. يَوْمَ تَجِدُ كُلُّ نَفْسٍۢ مَّا عَمِلَتْ مِنْ خَيْرٍۢ مُّحْضَرًۭا وَمَا عَمِلَتْ مِن سُوٓءٍۢ تَوَدُّ لَوْ أَنَّ بَيْنَهَا وَبَيْنَهُۥٓ أَمَدًۢا بَعِيدًۭا ۗ وَيُحَذِّرُكُمُ ٱللَّهُ نَفْسَهُۥ ۗ وَٱللَّهُ رَءُوفٌۢ بِٱلْعِبَادِ. ﴿30﴾
31 ಹೇಳಿರಿ: “ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.” قُلْ إِن كُنتُمْ تُحِبُّونَ ٱللَّهَ فَٱتَّبِعُونِى يُحْبِبْكُمُ ٱللَّهُ وَيَغْفِرْ لَكُمْ ذُنُوبَكُمْ ۗ وَٱللَّهُ غَفُورٌۭ رَّحِيمٌۭ. ﴿31﴾
32 ಹೇಳಿರಿ: “ನೀವು ಅಲ್ಲಾಹನ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ.” ಅವರೇನಾದರೂ ವಿಮುಖರಾದರೆ—ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಇಷ್ಟಪಡುವುದಿಲ್ಲ. قُلْ أَطِيعُوا۟ ٱللَّهَ وَٱلرَّسُولَ ۖ فَإِن تَوَلَّوْا۟ فَإِنَّ ٱللَّهَ لَا يُحِبُّ ٱلْكَٰفِرِينَ. ﴿32﴾
33 ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕಗಳ ಜನರ ಪೈಕಿ ಆದಮ್, ನೂಹ್‍, ಇಬ್ರಾಹೀಮರ ಕುಟುಂಬ ಮತ್ತು ಇಮ್ರಾನರ[1] ಕುಟುಂಬವನ್ನು ಆರಿಸಿದ್ದಾನೆ.
[1] ಇಮ್ರಾನ್ ಮರ್ಯಮರ ತಂದೆ. ಪ್ರವಾದಿ ಈಸಾರ ಅಜ್ಜ. ಅವರ ಪತ್ನಿಯ ಹೆಸರು ಹನ್ನ.
۞ إِنَّ ٱللَّهَ ٱصْطَفَىٰٓ ءَادَمَ وَنُوحًۭا وَءَالَ إِبْرَٰهِيمَ وَءَالَ عِمْرَٰنَ عَلَى ٱلْعَٰلَمِينَ. ﴿33﴾
34 ಅವರು ಒಬ್ಬರು ಇನ್ನೊಬ್ಬರ ವಂಶದಿಂದ ಬಂದವರು. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. ذُرِّيَّةًۢ بَعْضُهَا مِنۢ بَعْضٍۢ ۗ وَٱللَّهُ سَمِيعٌ عَلِيمٌ. ﴿34﴾
35 ಇಮ್ರಾನರ ಪತ್ನಿ ಹೇಳಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನ ಗರ್ಭದಲ್ಲಿರುವುದನ್ನು ನಾನು ನಿನ್ನ ಹೆಸರಲ್ಲಿ ಸ್ವತಂತ್ರಗೊಳಿಸುವೆನೆಂದು[1] ಹರಕೆ ಹೊತ್ತಿದ್ದೇನೆ. ನೀನು ಅದನ್ನು ನನ್ನಿಂದ ಸ್ವೀಕರಿಸು. ನಿಶ್ಚಯವಾಗಿಯೂ ನೀನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿರುವೆ.”
[1] ಸ್ವತಂತ್ರಗೊಳಿಸುವುದು ಎಂದರೆ ಬೈತುಲ್ ಮುಕದ್ದಿಸ್‌ನ ಸೇವೆ ಮಾಡಲು ಬಿಟ್ಟುಬಿಡುವುದು.
إِذْ قَالَتِ ٱمْرَأَتُ عِمْرَٰنَ رَبِّ إِنِّى نَذَرْتُ لَكَ مَا فِى بَطْنِى مُحَرَّرًۭا فَتَقَبَّلْ مِنِّىٓ ۖ إِنَّكَ أَنتَ ٱلسَّمِيعُ ٱلْعَلِيمُ. ﴿35﴾
36 ನಂತರ ಆಕೆ ಮಗುವಿಗೆ ಜನ್ಮ ನೀಡಿದಾಗ ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ!” ಅವಳು ಯಾರಿಗೆ ಜನ್ಮ ನೀಡಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗಂಡು ಹೆಣ್ಣಿನಂತಲ್ಲ! “ನಾನು ಅವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ; ಅವಳನ್ನು ಮತ್ತು ಅವಳ ಸಂತಾನವನ್ನು ಬಹಿಷ್ಕೃತ ಶೈತಾನನಿಂದ ಕಾಪಾಡಲು ನಿನ್ನ ರಕ್ಷಣೆಗೆ ಒಪ್ಪಿಸುತ್ತೇನೆ.” فَلَمَّا وَضَعَتْهَا قَالَتْ رَبِّ إِنِّى وَضَعْتُهَآ أُنثَىٰ وَٱللَّهُ أَعْلَمُ بِمَا وَضَعَتْ وَلَيْسَ ٱلذَّكَرُ كَٱلْأُنثَىٰ ۖ وَإِنِّى سَمَّيْتُهَا مَرْيَمَ وَإِنِّىٓ أُعِيذُهَا بِكَ وَذُرِّيَّتَهَا مِنَ ٱلشَّيْطَٰنِ ٱلرَّجِيمِ. ﴿36﴾
37 ಅವಳ ಪರಿಪಾಲಕ (ಅಲ್ಲಾಹು) ಅವಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಬೆಳೆಸಿದನು. ಅವಳ ಪಾಲನೆ-ಪೋಷಣೆ ಮಾಡುವ ಹೊಣೆಯನ್ನು ಝಕರಿಯ್ಯಾರಿಗೆ ಒಪ್ಪಿಸಿದನು. ಝಕರಿಯ್ಯಾ ಅವಳ ಕೋಣೆಗೆ ತೆರಳಿದಾಗಲೆಲ್ಲ ಅವಳ ಬಳಿ ಏನಾದರೊಂದು ಆಹಾರವನ್ನು ಕಾಣುತ್ತಿದ್ದರು. ಅವರು ಕೇಳಿದರು: “ಓ ಮರ್ಯಮ್! ಇದು ನಿನಗೆಲ್ಲಿಂದ ದೊರೆಯುತ್ತದೆ?” ಅವಳು ಉತ್ತರಿಸಿದಳು: “ಅದು ಅಲ್ಲಾಹನ ಬಳಿಯಿಂದ. ನಿಶ್ಚಯವಾಗಿಯೂ ಅಲ್ಲಾಹು ಅವನು ಇಚ್ಛಿಸುವವರಿಗೆ ಲೆಕ್ಕವಿಲ್ಲದೆ ದಯಪಾಲಿಸುತ್ತಾನೆ.” فَتَقَبَّلَهَا رَبُّهَا بِقَبُولٍ حَسَنٍۢ وَأَنۢبَتَهَا نَبَاتًا حَسَنًۭا وَكَفَّلَهَا زَكَرِيَّا ۖ كُلَّمَا دَخَلَ عَلَيْهَا زَكَرِيَّا ٱلْمِحْرَابَ وَجَدَ عِندَهَا رِزْقًۭا ۖ قَالَ يَٰمَرْيَمُ أَنَّىٰ لَكِ هَٰذَا ۖ قَالَتْ هُوَ مِنْ عِندِ ٱللَّهِ ۖ إِنَّ ٱللَّهَ يَرْزُقُ مَن يَشَآءُ بِغَيْرِ حِسَابٍ. ﴿37﴾
38 ಅಲ್ಲಿ ಝಕರಿಯ್ಯಾ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನಿನ್ನ ಕಡೆಯಿಂದ ನನಗೊಂದು ಪರಿಶುದ್ಧ ಸಂತಾನವನ್ನು ಕರುಣಿಸು. ನಿಶ್ಚಯವಾಗಿಯೂ ನೀನು ಪ್ರಾರ್ಥನೆಗೆ ಕಿವಿಗೊಡುವವನಾಗಿರುವೆ.” هُنَالِكَ دَعَا زَكَرِيَّا رَبَّهُۥ ۖ قَالَ رَبِّ هَبْ لِى مِن لَّدُنكَ ذُرِّيَّةًۭ طَيِّبَةً ۖ إِنَّكَ سَمِيعُ ٱلدُّعَآءِ. ﴿38﴾
39 ಅವರು ಕೋಣೆಯಲ್ಲಿ ನಿಂತು ನಮಾಝ್ ಮಾಡುತ್ತಿದ್ದಾಗ, ದೇವದೂತರುಗಳು ಅವರನ್ನು ಕರೆದು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಯಹ್ಯಾ (ಎಂಬ ಮಗುವಿ)ನ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರು (ಯಹ್ಯಾ) ಅಲ್ಲಾಹನ ಕಡೆಯ ವಚನವನ್ನು ದೃಢೀಕರಿಸುವವರು, ಸರದಾರರು, ಆತ್ಮಸಂಯಮವುಳ್ಳವರು ಮತ್ತು ನೀತಿವಂತರಲ್ಲಿ ಸೇರಿದ ಪ್ರವಾದಿಯಾಗಿರುವರು.” فَنَادَتْهُ ٱلْمَلَٰٓئِكَةُ وَهُوَ قَآئِمٌۭ يُصَلِّى فِى ٱلْمِحْرَابِ أَنَّ ٱللَّهَ يُبَشِّرُكَ بِيَحْيَىٰ مُصَدِّقًۢا بِكَلِمَةٍۢ مِّنَ ٱللَّهِ وَسَيِّدًۭا وَحَصُورًۭا وَنَبِيًّۭا مِّنَ ٱلصَّٰلِحِينَ. ﴿39﴾
40 ಝಕರಿಯ್ಯಾ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗು ಹುಟ್ಟುವುದು ಹೇಗೆ? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಬಂಜೆಯಾಗಿದ್ದಾಳೆ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಮಾಡುತ್ತಾನೆ.” قَالَ رَبِّ أَنَّىٰ يَكُونُ لِى غُلَٰمٌۭ وَقَدْ بَلَغَنِىَ ٱلْكِبَرُ وَٱمْرَأَتِى عَاقِرٌۭ ۖ قَالَ كَذَٰلِكَ ٱللَّهُ يَفْعَلُ مَا يَشَآءُ. ﴿40﴾
41 ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ಮಾಡಿ ತೋರಿಸು.” ಅಲ್ಲಾಹು ಹೇಳಿದನು: “ನಿಮಗಿರುವ ದೃಷ್ಟಾಂತವೇನೆಂದರೆ, ನೀವು ಮೂರು ದಿನಗಳ ಕಾಲ ಜನರೊಡನೆ ಸನ್ನೆಯ ಮೂಲಕವಲ್ಲದೆ ಮಾತನಾಡುವುದಿಲ್ಲ. ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅತ್ಯಧಿಕವಾಗಿ ಸ್ಮರಿಸಿರಿ ಮತ್ತು ಸಂಜೆ ಹಾಗೂ ಮುಂಜಾನೆಗಳಲ್ಲಿ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.” قَالَ رَبِّ ٱجْعَل لِّىٓ ءَايَةًۭ ۖ قَالَ ءَايَتُكَ أَلَّا تُكَلِّمَ ٱلنَّاسَ ثَلَٰثَةَ أَيَّامٍ إِلَّا رَمْزًۭا ۗ وَٱذْكُر رَّبَّكَ كَثِيرًۭا وَسَبِّحْ بِٱلْعَشِىِّ وَٱلْإِبْكَٰرِ. ﴿41﴾
42 ದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ. ನಿಮಗೆ ಪರಿಶುದ್ಧಿಯನ್ನು ದಯಪಾಲಿಸಿದ್ದಾನೆ ಮತ್ತು ಸರ್ವಲೋಕಗಳ ಮಹಿಳೆಯರಲ್ಲಿ ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ. وَإِذْ قَالَتِ ٱلْمَلَٰٓئِكَةُ يَٰمَرْيَمُ إِنَّ ٱللَّهَ ٱصْطَفَىٰكِ وَطَهَّرَكِ وَٱصْطَفَىٰكِ عَلَىٰ نِسَآءِ ٱلْعَٰلَمِينَ. ﴿42﴾
43 ಓ ಮರ್ಯಮ್! ನೀವು ನಿಮ್ಮ ಪರಿಪಾಲಕನಿಗೆ ವಿಧೇಯರಾಗಿರಿ; ಸಾಷ್ಟಾಂಗ ಮಾಡಿರಿ ಮತ್ತು ತಲೆಬಾಗುವವರೊಂದಿಗೆ ತಲೆಬಾಗಿರಿ.” يَٰمَرْيَمُ ٱقْنُتِى لِرَبِّكِ وَٱسْجُدِى وَٱرْكَعِى مَعَ ٱلرَّٰكِعِينَ. ﴿43﴾
44 ಇವೆಲ್ಲವೂ ಅದೃಶ್ಯ ಸಮಾಚಾರಗಳಾಗಿದ್ದು ನಾವು ನಿಮಗೆ ಇದನ್ನು ದೇವವಾಣಿಯ ಮೂಲಕ ತಿಳಿಸುತ್ತಿದ್ದೇವೆ. ಮರ್ಯಮರ ಪಾಲನೆ-ಪೋಷಣೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು ಎಸೆದ ಸಂದರ್ಭದಲ್ಲಿ ನೀವು ಅವರ ಬಳಿಯಿರಲಿಲ್ಲ. ಅವರು ತರ್ಕಿಸುತ್ತಿರುವಾಗಲೂ ನೀವು ಅವರ ಬಳಿಯಿರಲಿಲ್ಲ. ذَٰلِكَ مِنْ أَنۢبَآءِ ٱلْغَيْبِ نُوحِيهِ إِلَيْكَ ۚ وَمَا كُنتَ لَدَيْهِمْ إِذْ يُلْقُونَ أَقْلَٰمَهُمْ أَيُّهُمْ يَكْفُلُ مَرْيَمَ وَمَا كُنتَ لَدَيْهِمْ إِذْ يَخْتَصِمُونَ. ﴿44﴾
45 ದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ತನ್ನ ಒಂದು ವಚನದ ಬಗ್ಗೆ ನಿಮಗೆ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರ ಹೆಸರು ಮರ್ಯಮರ ಮಗ ಮಸೀಹ್ ಈಸಾ. ಅವರು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಪ್ರತಿಷ್ಠಿತರಾಗಿರುವರು ಮತ್ತು ಅಲ್ಲಾಹನ ಸಾಮೀಪ್ಯ ಗಳಿಸಿದವರಲ್ಲಿ ಸೇರಿದವರಾಗಿರುವರು. إِذْ قَالَتِ ٱلْمَلَٰٓئِكَةُ يَٰمَرْيَمُ إِنَّ ٱللَّهَ يُبَشِّرُكِ بِكَلِمَةٍۢ مِّنْهُ ٱسْمُهُ ٱلْمَسِيحُ عِيسَى ٱبْنُ مَرْيَمَ وَجِيهًۭا فِى ٱلدُّنْيَا وَٱلْءَاخِرَةِ وَمِنَ ٱلْمُقَرَّبِينَ. ﴿45﴾
46 ಅವರು ತೊಟ್ಟಿಲಲ್ಲಿರುವಾಗ ಮತ್ತು ಮಧ್ಯವಯಸ್ಕನಾಗಿರುವಾಗ[1] ಜನರೊಡನೆ ಮಾತನಾಡುವರು. ಅವರು ನೀತಿವಂತರಲ್ಲಿ ಸೇರಿದವರಾಗಿರುವರು.”
[1] ಅಂದರೆ ಮಧ್ಯವಯಸ್ಕನಾಗಿರುವಾಗ ಅವರು ಪ್ರವಾದಿಯಾಗಿ ನೇಮಕಗೊಂಡು ದೇವವಾಣಿಯ ಆಧಾರದಲ್ಲಿ ಮಾತನಾಡುತ್ತಾರೆ.
وَيُكَلِّمُ ٱلنَّاسَ فِى ٱلْمَهْدِ وَكَهْلًۭا وَمِنَ ٱلصَّٰلِحِينَ. ﴿46﴾
47 ಮರ್ಯಮ್ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗುವಾಗುವುದು ಹೇಗೆ? ಯಾವುದೇ ಪುರುಷನು ನನ್ನನ್ನು ಸ್ಪರ್ಶಿಸಿಲ್ಲವಲ್ಲ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ ಅದರೊಡನೆ ಉಂಟಾಗು ಎನ್ನುತ್ತಾನೆ. ಆಗ ಅದು ಉಂಟಾಗುತ್ತದೆ! قَالَتْ رَبِّ أَنَّىٰ يَكُونُ لِى وَلَدٌۭ وَلَمْ يَمْسَسْنِى بَشَرٌۭ ۖ قَالَ كَذَٰلِكِ ٱللَّهُ يَخْلُقُ مَا يَشَآءُ ۚ إِذَا قَضَىٰٓ أَمْرًۭا فَإِنَّمَا يَقُولُ لَهُۥ كُن فَيَكُونُ. ﴿47﴾
48 ಅವನು ಅವರಿಗೆ ಗ್ರಂಥವನ್ನು, ವಿವೇಕವನ್ನು, ತೌರಾತನ್ನು ಮತ್ತು ಇಂಜೀಲನ್ನು ಕಲಿಸಿಕೊಡುವನು. وَيُعَلِّمُهُ ٱلْكِتَٰبَ وَٱلْحِكْمَةَ وَٱلتَّوْرَىٰةَ وَٱلْإِنجِيلَ. ﴿48﴾
49 ಅವರನ್ನು ಇಸ್ರಾಯೇಲ್ ಮಕ್ಕಳ ಬಳಿಗೆ ಸಂದೇಶವಾಹಕರಾಗಿ ಕಳುಹಿಸುವನು. (ಅವರು ಹೇಳುವರು:) “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ವಚನದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ನಾನು ನಿಮಗೆ ಜೇಡಿಮಣ್ಣಿನಿಂದ ಹಕ್ಕಿಯ ಆಕೃತಿಯನ್ನು ರಚಿಸುತ್ತೇನೆ. ನಂತರ ನಾನು ಅದರಲ್ಲಿ ಊದುತ್ತೇನೆ. ಆಗ ಅದು ಅಲ್ಲಾಹನ ಅಪ್ಪಣೆಯಿಂದ ಹಕ್ಕಿಯಾಗಿ ಮಾರ್ಪಡುತ್ತದೆ. ನಾನು ಅಲ್ಲಾಹನ ಅಪ್ಪಣೆಯಿಂದ ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತೇನೆ ಹಾಗೂ ಸತ್ತವರಿಗೆ ಜೀವ ನೀಡುತ್ತೇನೆ. ನೀವು ತಿನ್ನುವುದನ್ನು ಮತ್ತು ನೀವು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಾನು ನಿಮಗೆ ತಿಳಿಸುತ್ತೇನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ಇದರಲ್ಲಿ ನಿಮಗೆ ದೃಷ್ಟಾಂತವಿದೆ. وَرَسُولًا إِلَىٰ بَنِىٓ إِسْرَٰٓءِيلَ أَنِّى قَدْ جِئْتُكُم بِـَٔايَةٍۢ مِّن رَّبِّكُمْ ۖ أَنِّىٓ أَخْلُقُ لَكُم مِّنَ ٱلطِّينِ كَهَيْـَٔةِ ٱلطَّيْرِ فَأَنفُخُ فِيهِ فَيَكُونُ طَيْرًۢا بِإِذْنِ ٱللَّهِ ۖ وَأُبْرِئُ ٱلْأَكْمَهَ وَٱلْأَبْرَصَ وَأُحْىِ ٱلْمَوْتَىٰ بِإِذْنِ ٱللَّهِ ۖ وَأُنَبِّئُكُم بِمَا تَأْكُلُونَ وَمَا تَدَّخِرُونَ فِى بُيُوتِكُمْ ۚ إِنَّ فِى ذَٰلِكَ لَءَايَةًۭ لَّكُمْ إِن كُنتُم مُّؤْمِنِينَ. ﴿49﴾
50 ನಾನು ನನ್ನ ಮುಂದಿರುವ ತೌರಾತನ್ನು ದೃಢೀಕರಿಸುತ್ತೇನೆ. ನಿಮಗೆ ನಿಷೇಧಿಸಲಾಗಿರುವ ಕೆಲವು ವಸ್ತುಗಳನ್ನು ನಾನು ನಿಮಗೆ ಧರ್ಮಸಮ್ಮತಗೊಳಿಸುತ್ತೇನೆ. ನಾನು ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತವನ್ನು ತಂದಿರುದ್ದೇನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. وَمُصَدِّقًۭا لِّمَا بَيْنَ يَدَىَّ مِنَ ٱلتَّوْرَىٰةِ وَلِأُحِلَّ لَكُم بَعْضَ ٱلَّذِى حُرِّمَ عَلَيْكُمْ ۚ وَجِئْتُكُم بِـَٔايَةٍۢ مِّن رَّبِّكُمْ فَٱتَّقُوا۟ ٱللَّهَ وَأَطِيعُونِ. ﴿50﴾
51 ನಿಶ್ಚಯವಾಗಿಯೂ ಅಲ್ಲಾಹು ನನ್ನ ಮತ್ತು ನಿಮ್ಮ ಪರಿಪಾಲಕನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಇದೇ ನೇರವಾದ ಮಾರ್ಗ. إِنَّ ٱللَّهَ رَبِّى وَرَبُّكُمْ فَٱعْبُدُوهُ ۗ هَٰذَا صِرَٰطٌۭ مُّسْتَقِيمٌۭ. ﴿51﴾
52 ನಂತರ ಈಸಾರಿಗೆ ಅವರ ಸತ್ಯನಿಷೇಧದ ಅರಿವಾದಾಗ ಅವರು ಹೇಳಿದರು: “ಅಲ್ಲಾಹನ ಮಾರ್ಗದಲ್ಲಿ ನನಗೆ ಯಾರು ಸಹಾಯ ಮಾಡುತ್ತೀರಿ?” ಹವಾರಿಗಳು[1] ಹೇಳಿದರು: “ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯ ಮಾಡುತ್ತೇವೆ. ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ. ನಾವು (ಅಲ್ಲಾಹನಿಗೆ) ಶರಣಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.”
[1] ಹವಾರಿಗಳು ಎಂದರೆ ಸಹಾಯಕರು.
۞ فَلَمَّآ أَحَسَّ عِيسَىٰ مِنْهُمُ ٱلْكُفْرَ قَالَ مَنْ أَنصَارِىٓ إِلَى ٱللَّهِ ۖ قَالَ ٱلْحَوَارِيُّونَ نَحْنُ أَنصَارُ ٱللَّهِ ءَامَنَّا بِٱللَّهِ وَٱشْهَدْ بِأَنَّا مُسْلِمُونَ. ﴿52﴾
53 “ಓ ನಮ್ಮ ಪರಿಪಾಲಕನೇ! ನೀನು ಅವತೀರ್ಣಗೊಳಿಸಿದ ಸಂದೇಶದಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ. ನಾವು ನಿನ್ನ ಸಂದೇಶವಾಹಕರನ್ನು ಅನುಸರಿಸಿದ್ದೇವೆ. ಆದ್ದರಿಂದ ನಮ್ಮನ್ನು ಸಾಕ್ಷಿಗಳಲ್ಲಿ ದಾಖಲಿಸು.” رَبَّنَآ ءَامَنَّا بِمَآ أَنزَلْتَ وَٱتَّبَعْنَا ٱلرَّسُولَ فَٱكْتُبْنَا مَعَ ٱلشَّٰهِدِينَ. ﴿53﴾
54 ಅವರು (ಸತ್ಯನಿಷೇಧಿಗಳು) ತಂತ್ರಗಾರಿಕೆ ಮಾಡಿದರು. ಅಲ್ಲಾಹು ಕೂಡ ತಂತ್ರಗಾರಿಕೆ ಮಾಡಿದನು. ಅಲ್ಲಾಹು ತಂತ್ರಗಾರಿಕೆ ಮಾಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ. وَمَكَرُوا۟ وَمَكَرَ ٱللَّهُ ۖ وَٱللَّهُ خَيْرُ ٱلْمَٰكِرِينَ. ﴿54﴾
55 ಅಲ್ಲಾಹು ಹೇಳಿದ ಸಂದರ್ಭ: “ಓ ಈಸಾ! ನಿಶ್ಚಯವಾಗಿಯೂ ನಾನು ನಿಮ್ಮನ್ನು ಪೂರ್ಣವಾಗಿ ವಹಿಸಿಕೊಳ್ಳುವೆನು, ನಿಮ್ಮನ್ನು ನನ್ನ ಬಳಿಗೆ ಎತ್ತಿಕೊಳ್ಳುವೆನು ಮತ್ತು ಸತ್ಯನಿಷೇಧಿಗಳಿಂದ ನಿಮ್ಮನ್ನು ಪರಿಶುದ್ಧಗೊಳಿಸುವೆನು. ನಿಮ್ಮ ಅನುಯಾಯಿಗಳನ್ನು ಪುನರುತ್ಥಾನ ದಿನದವರೆಗೂ ಸತ್ಯನಿಷೇಧಿಗಳ ಮೇಲೆ ಪ್ರಬಲರನ್ನಾಗಿ ಮಾಡುವೆನು. ನಂತರ ನೀವು ನನ್ನ ಬಳಿಗೆ ಮರಳುವಿರಿ. ಆಗ ನೀವು ಭಿನ್ನಾಭಿಪ್ರಾಯ ತಳೆದ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಪು ನೀಡುವೆನು. إِذْ قَالَ ٱللَّهُ يَٰعِيسَىٰٓ إِنِّى مُتَوَفِّيكَ وَرَافِعُكَ إِلَىَّ وَمُطَهِّرُكَ مِنَ ٱلَّذِينَ كَفَرُوا۟ وَجَاعِلُ ٱلَّذِينَ ٱتَّبَعُوكَ فَوْقَ ٱلَّذِينَ كَفَرُوٓا۟ إِلَىٰ يَوْمِ ٱلْقِيَٰمَةِ ۖ ثُمَّ إِلَىَّ مَرْجِعُكُمْ فَأَحْكُمُ بَيْنَكُمْ فِيمَا كُنتُمْ فِيهِ تَخْتَلِفُونَ. ﴿55﴾
56 ಸತ್ಯನಿಷೇಧಿಗಳು ಯಾರೋ—ಅವರಿಗೆ ನಾನು ಇಹಲೋಕದಲ್ಲೂ, ಪರಲೋಕದಲ್ಲೂ ಕಠೋರ ಶಿಕ್ಷೆಯನ್ನು ನೀಡುವೆನು. ಅವರಿಗೆ ಯಾವುದೇ ಸಹಾಯಕರಿಲ್ಲ.” فَأَمَّا ٱلَّذِينَ كَفَرُوا۟ فَأُعَذِّبُهُمْ عَذَابًۭا شَدِيدًۭا فِى ٱلدُّنْيَا وَٱلْءَاخِرَةِ وَمَا لَهُم مِّن نَّٰصِرِينَ. ﴿56﴾
57 ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಅಲ್ಲಾಹು ಅವರ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಅಲ್ಲಾಹು ಅಕ್ರಮವೆಸಗುವವರನ್ನು ಇಷ್ಟಪಡುವುದಿಲ್ಲ. وَأَمَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ فَيُوَفِّيهِمْ أُجُورَهُمْ ۗ وَٱللَّهُ لَا يُحِبُّ ٱلظَّٰلِمِينَ. ﴿57﴾
58 ನಾವು ನಿಮಗೆ ಓದಿಕೊಡುತ್ತಿರುವ ಈ ವಿಷಯಗಳು ಅಲ್ಲಾಹನ ವಚನಗಳಲ್ಲಿ ಮತ್ತು ವಿವೇಕಪೂರ್ಣ ಉಪದೇಶಗಳಲ್ಲಿ ಸೇರಿದ್ದಾಗಿವೆ. ذَٰلِكَ نَتْلُوهُ عَلَيْكَ مِنَ ٱلْءَايَٰتِ وَٱلذِّكْرِ ٱلْحَكِيمِ. ﴿58﴾
59 ಅಲ್ಲಾಹನ ದೃಷ್ಟಿಯಲ್ಲಿ ಈಸಾರ ಉದಾಹರಣೆಯು ಆದಮರಂತೆ. ಅವನು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ನಂತರ ಅವರೊಡನೆ ಉಂಟಾಗು ಎಂದನು. ಆಗ ಅವರು ಉಂಟಾದರು. إِنَّ مَثَلَ عِيسَىٰ عِندَ ٱللَّهِ كَمَثَلِ ءَادَمَ ۖ خَلَقَهُۥ مِن تُرَابٍۢ ثُمَّ قَالَ لَهُۥ كُن فَيَكُونُ. ﴿59﴾
60 ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಲೇಬೇಡಿ. ٱلْحَقُّ مِن رَّبِّكَ فَلَا تَكُن مِّنَ ٱلْمُمْتَرِينَ. ﴿60﴾
61 ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ಅವರ (ಈಸಾರ) ವಿಷಯದಲ್ಲಿ ಯಾರಾದರೂ ನಿಮ್ಮೊಂದಿಗೆ ತರ್ಕಿಸಿದರೆ ನೀವು ಹೇಳಿರಿ: “ಬನ್ನಿ! ನಾವು ನಮ್ಮ ಮಕ್ಕಳನ್ನು ಮತ್ತು ನಿಮ್ಮ ಮಕ್ಕಳನ್ನು, ನಮ್ಮ ಮಹಿಳೆಯರನ್ನು ಮತ್ತು ನಿಮ್ಮ ಮಹಿಳೆಯರನ್ನು, ನಮ್ಮನ್ನು ಮತ್ತು ನಿಮ್ಮನ್ನು (ಎಲ್ಲರನ್ನೂ) ಕರೆದು ಒಟ್ಟುಗೂಡೋಣ. ನಂತರ ಮನಸಾರೆ ಪ್ರಾರ್ಥಿಸಿ ಸುಳ್ಳು ಹೇಳುವವರ ಮೇಲೆ ಅಲ್ಲಾಹನ ಶಾಪವವಿರಲೆಂದು ಬೇಡಿಕೊಳ್ಳೋಣ.”[1]
[1] ಈ ವಚನವನ್ನು ಆಯತುಲ್ ಮುಬಾಹಲ (ಶಾಪಪ್ರಾರ್ಥನೆಯ ವಚನ) ಎಂದು ಕರೆಯಲಾಗುತ್ತದೆ. ಎರಡು ಗುಂಪುಗಳ ನಡುವೆ ಭಿನ್ನಮತವಿರುವ ಒಂದು ವಿಷಯವು ಮಾತುಕತೆಯಿಂದ ಅಥವಾ ಇತರ ವಿಧಾನಗಳಿಂದ ಪರಿಹಾರವಾಗದೆ, ಎರಡು ಗುಂಪುಗಳೂ ನಾವೇ ಸತ್ಯದಲ್ಲಿರುವವರು ಎಂದು ಹಟ ಹಿಡಿದರೆ, ಆ ಎರಡು ಗುಂಪುಗಳು ಸೇರಿ ಅಸತ್ಯದಲ್ಲಿರುವ ಗುಂಪಿನ ಮೇಲೆ ಅಲ್ಲಾಹನ ಶಾಪವಿರಲಿ ಎಂದು ಅಲ್ಲಾಹನಲ್ಲಿ ಮನಸಾರೆ ಪ್ರಾರ್ಥಿಸುವುದನ್ನು ಶಾಪ ಪ್ರಾರ್ಥನೆ ಎನ್ನಲಾಗುತ್ತದೆ.
فَمَنْ حَآجَّكَ فِيهِ مِنۢ بَعْدِ مَا جَآءَكَ مِنَ ٱلْعِلْمِ فَقُلْ تَعَالَوْا۟ نَدْعُ أَبْنَآءَنَا وَأَبْنَآءَكُمْ وَنِسَآءَنَا وَنِسَآءَكُمْ وَأَنفُسَنَا وَأَنفُسَكُمْ ثُمَّ نَبْتَهِلْ فَنَجْعَل لَّعْنَتَ ٱللَّهِ عَلَى ٱلْكَٰذِبِينَ. ﴿61﴾
62 ನಿಶ್ಚಯವಾಗಿಯೂ ಇದು ಸತ್ಯ ನಿರೂಪಣೆಯಾಗಿದೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. إِنَّ هَٰذَا لَهُوَ ٱلْقَصَصُ ٱلْحَقُّ ۚ وَمَا مِنْ إِلَٰهٍ إِلَّا ٱللَّهُ ۚ وَإِنَّ ٱللَّهَ لَهُوَ ٱلْعَزِيزُ ٱلْحَكِيمُ. ﴿62﴾
63 ಅದರ ಬಳಿಕವೂ ಅವರು ವಿಮುಖರಾದರೆ—ನಿಶ್ಚಯವಾಗಿಯೂ ಅಲ್ಲಾಹು ಕಿಡಿಗೇಡಿಗಳ ಬಗ್ಗೆ ತಿಳಿದವನಾಗಿದ್ದಾನೆ. فَإِن تَوَلَّوْا۟ فَإِنَّ ٱللَّهَ عَلِيمٌۢ بِٱلْمُفْسِدِينَ. ﴿63﴾
64 ಹೇಳಿರಿ: “ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ವಚನದ ಕಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು (ಇನ್ನಾರನ್ನೂ) ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ನಮ್ಮಲ್ಲಿ ಒಬ್ಬರು ಇನ್ನೊಬ್ಬರನ್ನು ಅಲ್ಲಾಹನ ಹೊರತಾಗಿರುವ ಪರಿಪಾಲಕರನ್ನಾಗಿ ಮಾಡದಿರೋಣ.” ಅದರ ಬಳಿಕವೂ ಅವರು ವಿಮುಖರಾದರೆ (ಅವರೊಡನೆ) ಹೇಳಿರಿ: “ನಾವು ಮುಸ್ಲಿಮರಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಗಳಾಗಿರಿ.” قُلْ يَٰٓأَهْلَ ٱلْكِتَٰبِ تَعَالَوْا۟ إِلَىٰ كَلِمَةٍۢ سَوَآءٍۭ بَيْنَنَا وَبَيْنَكُمْ أَلَّا نَعْبُدَ إِلَّا ٱللَّهَ وَلَا نُشْرِكَ بِهِۦ شَيْـًۭٔا وَلَا يَتَّخِذَ بَعْضُنَا بَعْضًا أَرْبَابًۭا مِّن دُونِ ٱللَّهِ ۚ فَإِن تَوَلَّوْا۟ فَقُولُوا۟ ٱشْهَدُوا۟ بِأَنَّا مُسْلِمُونَ. ﴿64﴾
65 ಓ ಗ್ರಂಥದವರೇ! ನೀವು ಇಬ್ರಾಹೀಮರ ವಿಷಯದಲ್ಲಿ ಏಕೆ ತರ್ಕಿಸುತ್ತೀರಿ?[1] ತೌರಾತ್ ಮತ್ತು ಇಂಜೀಲ್ ಅವತೀರ್ಣವಾದದ್ದು ಅವರ ನಂತರವಲ್ಲವೇ! ನೀವು ಆಲೋಚಿಸುವುದಿಲ್ಲವೇ?
[1] ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ಯಹೂದಿಯಾಗಿದ್ದರು ಎಂದು ಯಹೂದಿಗಳು ಹೇಳುತ್ತಿದ್ದರು ಮತ್ತು ಅವರು ಕ್ರೈಸ್ತರಾಗಿದ್ದರು ಎಂದು ಕ್ರೈಸ್ತರು ಹೇಳುತ್ತಿದ್ದರು. ವಾಸ್ತವವಾಗಿ ಯಹೂದಿಗಳು ನಂಬುವ ತೌರಾತ್ (ತೋರಾ) ಮತ್ತು ಕ್ರೈಸ್ತರು ನಂಬುವ ಇಂಜೀಲ್ (ಸುವಾರ್ತೆ) ಅವತೀರ್ಣವಾಗುವುದಕ್ಕೆ ಎಷ್ಟೋ ವರ್ಷಗಳ ಮೊದಲು ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ಜೀವಿಸಿದ್ದರು. ಹಾಗಿರುವಾಗ ಅವರು ಯಹೂದಿ ಅಥವಾ ಕ್ರೈಸ್ತರಾಗಲು ಹೇಗೆ ಸಾಧ್ಯ?
يَٰٓأَهْلَ ٱلْكِتَٰبِ لِمَ تُحَآجُّونَ فِىٓ إِبْرَٰهِيمَ وَمَآ أُنزِلَتِ ٱلتَّوْرَىٰةُ وَٱلْإِنجِيلُ إِلَّا مِنۢ بَعْدِهِۦٓ ۚ أَفَلَا تَعْقِلُونَ. ﴿65﴾
66 ನಿಮಗೆ ಜ್ಞಾನವಿರುವ ವಿಷಯದಲ್ಲಿ ನೀವು ತರ್ಕಿಸಿದ್ದೀರಿ. ಆದರೆ ಈಗ ನಿಮಗೆ ಜ್ಞಾನವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತೀರಿ? ಅಲ್ಲಾಹು ತಿಳಿದಿದ್ದಾನೆ. ಆದರೆ ನೀವು ತಿಳಿದಿಲ್ಲ. هَٰٓأَنتُمْ هَٰٓؤُلَآءِ حَٰجَجْتُمْ فِيمَا لَكُم بِهِۦ عِلْمٌۭ فَلِمَ تُحَآجُّونَ فِيمَا لَيْسَ لَكُم بِهِۦ عِلْمٌۭ ۚ وَٱللَّهُ يَعْلَمُ وَأَنتُمْ لَا تَعْلَمُونَ. ﴿66﴾
67 ಇಬ್ರಾಹೀಮರು ಯಹೂದಿ ಅಥವಾ ಕ್ರಿಶ್ಚಿಯನ್ ಆಗಿರಲಿಲ್ಲ; ಆದರೆ ಅವರು ಏಕನಿಷ್ಠರು ಮತ್ತು ಮುಸ್ಲಿಮರಾಗಿದ್ದರು.[1] ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.
[1] ಮುಸ್ಲಿಮ್ ಎಂದರೆ ಅಲ್ಲಾಹನಿಗೆ ಸಂಪೂರ್ಣ ಶರಣಾದವನು. ಎಲ್ಲಾ ಪ್ರವಾದಿಗಳು ಮುಸ್ಲಿಮರಾಗಿದ್ದರು ಮತ್ತು ಅವರ ಧರ್ಮ ಇಸ್ಲಾಂ ಆಗಿತ್ತು.
مَا كَانَ إِبْرَٰهِيمُ يَهُودِيًّۭا وَلَا نَصْرَانِيًّۭا وَلَٰكِن كَانَ حَنِيفًۭا مُّسْلِمًۭا وَمَا كَانَ مِنَ ٱلْمُشْرِكِينَ. ﴿67﴾
68 ನಿಶ್ಚಯವಾಗಿಯೂ ಜನರಲ್ಲಿ ಇಬ್ರಾಹೀಮರಿಗೆ ಹೆಚ್ಚು ಆಪ್ತರು ಯಾರೆಂದರೆ ಅವರನ್ನು ಅನುಸರಿಸಿದವರು; ಮತ್ತು ಈ ಪ್ರವಾದಿ ಹಾಗೂ (ಈ ಪ್ರವಾದಿಯಲ್ಲಿ) ವಿಶ್ವಾಸವಿಟ್ಟವರು. ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿದ್ದಾನೆ. إِنَّ أَوْلَى ٱلنَّاسِ بِإِبْرَٰهِيمَ لَلَّذِينَ ٱتَّبَعُوهُ وَهَٰذَا ٱلنَّبِىُّ وَٱلَّذِينَ ءَامَنُوا۟ ۗ وَٱللَّهُ وَلِىُّ ٱلْمُؤْمِنِينَ. ﴿68﴾
69 ಗ್ರಂಥದವರ ಒಂದು ಪಂಗಡವು ನಿಮ್ಮನ್ನು ದಾರಿತಪ್ಪಿಸಲು ಬಯಸುತ್ತಿದೆ. ಆದರೆ (ವಾಸ್ತವವಾಗಿ) ಅವರು ಅವರನ್ನೇ ದಾರಿತಪ್ಪಿಸುತ್ತಿದ್ದಾರೆ. ಅವರು ಅದನ್ನು ತಿಳಿಯುವುದಿಲ್ಲ. وَدَّت طَّآئِفَةٌۭ مِّنْ أَهْلِ ٱلْكِتَٰبِ لَوْ يُضِلُّونَكُمْ وَمَا يُضِلُّونَ إِلَّآ أَنفُسَهُمْ وَمَا يَشْعُرُونَ. ﴿69﴾
70 ಓ ಗ್ರಂಥದವರೇ! ನೀವು ಸಾಕ್ಷಿಗಳಾಗಿದ್ದೂ ಕೂಡ ನೀವೇಕೆ ಅಲ್ಲಾಹನ ವಚನಗಳನ್ನು ನಿಷೇಧಿಸುತ್ತೀರಿ? يَٰٓأَهْلَ ٱلْكِتَٰبِ لِمَ تَكْفُرُونَ بِـَٔايَٰتِ ٱللَّهِ وَأَنتُمْ تَشْهَدُونَ. ﴿70﴾
71 ಓ ಗ್ರಂಥದವರೇ! ನೀವು ಸತ್ಯವನ್ನು ಅಸತ್ಯದೊಂದಿಗೆ ಏಕೆ ಬೆರೆಸುತ್ತೀರಿ ಮತ್ತು ತಿಳಿದೂ ಕೂಡ ಸತ್ಯವನ್ನೇಕೆ ಮುಚ್ಚಿಡುತ್ತೀರಿ? يَٰٓأَهْلَ ٱلْكِتَٰبِ لِمَ تَلْبِسُونَ ٱلْحَقَّ بِٱلْبَٰطِلِ وَتَكْتُمُونَ ٱلْحَقَّ وَأَنتُمْ تَعْلَمُونَ. ﴿71﴾
72 ಗ್ರಂಥದವರ ಒಂದು ಪಂಗಡವು (ಪರಸ್ಪರ) ಹೇಳುತ್ತಾರೆ: “ಹಗಲಿನ ಆರಂಭದಲ್ಲಿ (ಬೆಳಗ್ಗೆ) ಸತ್ಯವಿಶ್ವಾಸಿಗಳಿಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಡಿ ಮತ್ತು ಹಗಲಿನ ಕೊನೆಯಲ್ಲಿ (ಸಂಜೆಯಾಗುವಾಗ) ನಿಷೇಧಿಸಿ ಬಿಡಿ. ಆಗ ಅವರು ಮರಳಿಬರಲೂಬಹುದು.”[1]
[1] ಇದು ಯಹೂದಿಗಳ ಒಂದು ಕುತಂತ್ರ. ಇದರಿಂದ ಅವರು ಮುಸಲ್ಮಾನರನ್ನು ದಾರಿತಪ್ಪಿಸಲು ಬಯಸುತ್ತಿದ್ದರು. ಅವರಲ್ಲೊಬ್ಬರು ಬೆಳಗ್ಗೆ ಇಸ್ಲಾಂ ಸ್ವೀಕರಿಸಿ ಮುಸಲ್ಮಾನರಾಗುತ್ತಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಪುನಃ ಯಹೂದಿ ಧರ್ಮಕ್ಕೆ ಮರಳುತ್ತಿದ್ದರು. ಬೆಳಗ್ಗೆ ಮುಸಲ್ಮಾನರಾದವರು ಸಂಜೆ ಇಸ್ಲಾಂನಿಂದ ಹೊರಹೋಗಬೇಕಾದರೆ ಇಸ್ಲಾಂ ಧರ್ಮದಲ್ಲಿ ನಾವು ತಿಳಿಯದ ಏನೋ ಕೊರತೆಯಿದೆ ಎಂದು ಮುಸಲ್ಮಾನರು ಭಾವಿಸುವಂತಾಗಲು ಅವರು ಹೀಗೆ ಮಾಡುತ್ತಿದ್ದರು.
وَقَالَت طَّآئِفَةٌۭ مِّنْ أَهْلِ ٱلْكِتَٰبِ ءَامِنُوا۟ بِٱلَّذِىٓ أُنزِلَ عَلَى ٱلَّذِينَ ءَامَنُوا۟ وَجْهَ ٱلنَّهَارِ وَٱكْفُرُوٓا۟ ءَاخِرَهُۥ لَعَلَّهُمْ يَرْجِعُونَ. ﴿72﴾
73 (ಅವರು ಪರಸ್ಪರ ಹೇಳುತ್ತಾರೆ:) “ನಿಮ್ಮ ಧರ್ಮದ ಅನುಯಾಯಿಗಳನ್ನು ಬಿಟ್ಟು ಬೇರೆ ಯಾರನ್ನೂ ನೀವು ನಂಬಬೇಡಿ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ.” (ಅವರು ಪರಸ್ಪರ ಹೇಳುತ್ತಾರೆ): “ನಿಮಗೆ ನೀಡಲಾದಂತಹ (ಗ್ರಂಥವನ್ನು) ಬೇರೆ ಯಾರಿಗಾದರೂ ನೀಡಲಾಗಬಹುದು; ಅಥವಾ ಅವರು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಿಮ್ಮೊಡನೆ ತರ್ಕಿಸುವರು ಎಂದು (ನೀವು ನಂಬಲೇಬೇಡಿ).” ಹೇಳಿರಿ: “ನಿಶ್ಚಯವಾಗಿಯೂ ಔದಾರ್ಯವಿರುವುದು ಅಲ್ಲಾಹನ ಕೈಯಲ್ಲಿ. ಅವನು ಇಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.” وَلَا تُؤْمِنُوٓا۟ إِلَّا لِمَن تَبِعَ دِينَكُمْ قُلْ إِنَّ ٱلْهُدَىٰ هُدَى ٱللَّهِ أَن يُؤْتَىٰٓ أَحَدٌۭ مِّثْلَ مَآ أُوتِيتُمْ أَوْ يُحَآجُّوكُمْ عِندَ رَبِّكُمْ ۗ قُلْ إِنَّ ٱلْفَضْلَ بِيَدِ ٱللَّهِ يُؤْتِيهِ مَن يَشَآءُ ۗ وَٱللَّهُ وَٰسِعٌ عَلِيمٌۭ. ﴿73﴾
74 ಅವನು ತನ್ನ ದಯೆಯಿಂದ ಅವನು ಇಚ್ಛಿಸುವವರನ್ನು ವಿಶೇಷವಾಗಿ ಅನುಗ್ರಹಿಸುತ್ತಾನೆ. ಅಲ್ಲಾಹು ಮಹಾ ಔದಾರ್ಯದ ಒಡೆಯನಾಗಿದ್ದಾನೆ. يَخْتَصُّ بِرَحْمَتِهِۦ مَن يَشَآءُ ۗ وَٱللَّهُ ذُو ٱلْفَضْلِ ٱلْعَظِيمِ. ﴿74﴾
75 ಗ್ರಂಥದವರಲ್ಲಿ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಬಂಗಾರದ ರಾಶಿಯನ್ನು ತೆಗೆದಿಡಲು ಕೊಟ್ಟರೂ (ನೀವು ಕೇಳುವಾಗ) ಅವರು ಅದನ್ನು ನಿಮಗೆ ಹಿಂದಿರುಗಿಸುತ್ತಾರೆ. ಆದರೆ ಅವರಲ್ಲಿ ಬೇರೆ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಒಂದು ಬಂಗಾರದ ನಾಣ್ಯವನ್ನು ತೆಗೆದಿಡಲು ಕೊಟ್ಟರೆ, ಪದೇ ಪದೇ ಕೇಳದೆ ಅವರು ಅದನ್ನು ನಿಮಗೆ ಹಿಂದಿರುಗಿಸುವುದಿಲ್ಲ. ಅದೇಕೆಂದರೆ ಅವರು ಹೇಳುತ್ತಾರೆ: “ಆ ಅನಕ್ಷರಸ್ಥರಿಗೆ (ಯಹೂದಿಗಳಲ್ಲದವರಿಗೆ) ಸಂಬಂಧಿಸಿದ ಯಾವುದೇ ವಿಷಯದಲ್ಲೂ ನಮಗೆ ಶಿಕ್ಷೆಯಿಲ್ಲ.” ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ. ۞ وَمِنْ أَهْلِ ٱلْكِتَٰبِ مَنْ إِن تَأْمَنْهُ بِقِنطَارٍۢ يُؤَدِّهِۦٓ إِلَيْكَ وَمِنْهُم مَّنْ إِن تَأْمَنْهُ بِدِينَارٍۢ لَّا يُؤَدِّهِۦٓ إِلَيْكَ إِلَّا مَا دُمْتَ عَلَيْهِ قَآئِمًۭا ۗ ذَٰلِكَ بِأَنَّهُمْ قَالُوا۟ لَيْسَ عَلَيْنَا فِى ٱلْأُمِّيِّۦنَ سَبِيلٌۭ وَيَقُولُونَ عَلَى ٱللَّهِ ٱلْكَذِبَ وَهُمْ يَعْلَمُونَ. ﴿75﴾
76 ಹೌದು (ಅವರಿಗೆ ಶಿಕ್ಷೆಯಿದೆ). ಯಾರು ತನ್ನ ಕರಾರನ್ನು ನೆರವೇರಿಸುತ್ತಾರೋ ಮತ್ತು ಅಲ್ಲಾಹನನ್ನು ಭಯಪಡುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ. بَلَىٰ مَنْ أَوْفَىٰ بِعَهْدِهِۦ وَٱتَّقَىٰ فَإِنَّ ٱللَّهَ يُحِبُّ ٱلْمُتَّقِينَ. ﴿76﴾
77 ನಿಶ್ಚಯವಾಗಿಯೂ ಅಲ್ಲಾಹನ ಕರಾರನ್ನು ಮತ್ತು ತಮ್ಮ ಆಣೆಗಳನ್ನು ಕೀಳು ದರಕ್ಕೆ ಮಾರಾಟ ಮಾಡುವವರು ಯಾರೋ—ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಡನೆ ಮಾತನಾಡುವುದಿಲ್ಲ, ಅವರ ಕಡೆಗೆ ದೃಷ್ಟಿ ಬೀರುವುದಿಲ್ಲ ಮತ್ತು ಅವರನ್ನು ಶುದ್ಧೀಕರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. إِنَّ ٱلَّذِينَ يَشْتَرُونَ بِعَهْدِ ٱللَّهِ وَأَيْمَٰنِهِمْ ثَمَنًۭا قَلِيلًا أُو۟لَٰٓئِكَ لَا خَلَٰقَ لَهُمْ فِى ٱلْءَاخِرَةِ وَلَا يُكَلِّمُهُمُ ٱللَّهُ وَلَا يَنظُرُ إِلَيْهِمْ يَوْمَ ٱلْقِيَٰمَةِ وَلَا يُزَكِّيهِمْ وَلَهُمْ عَذَابٌ أَلِيمٌۭ. ﴿77﴾
78 ನಿಶ್ಚಯವಾಗಿಯೂ ಅವರಲ್ಲೊಂದು ಪಂಗಡವು ಗ್ರಂಥವನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚುತ್ತಾರೆ. ಅದು ಗ್ರಂಥದ ಭಾಗವೆಂದು ನೀವು ಭಾವಿಸುವುದಕ್ಕಾಗಿ. ಆದರೆ ಅದು ಗ್ರಂಥದ ಭಾಗವಲ್ಲ. ಅವರು ಹೇಳುತ್ತಾರೆ: “ಅದು ಅಲ್ಲಾಹನ ಕಡೆಯಿಂದ ಬಂದಿದೆ.” ಆದರೆ ಅದು ಅಲ್ಲಾಹನ ಕಡೆಯಿಂದ ಬಂದಿಲ್ಲ. ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.[1]
[1] ಯಹೂದಿಗಳು ಅವರ ಧರ್ಮಗ್ರಂಥವನ್ನು ತಿದ್ದುಪಡಿ ಮಾಡಿದ್ದು ಮಾತ್ರವಲ್ಲದೆ, ಜನಸಾಮಾನ್ಯರ ಮುಂದೆ ಅದನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚಿ ಜನರು ಬೇರೆ ಅರ್ಥವನ್ನು ಭಾವಿಸುವಂತೆ ಮಾಡುತ್ತಿದ್ದರು. ಅದೇ ರೀತಿ ಅವರು ತಮ್ಮ ಕೆಲವು ಮಾತುಗಳನ್ನು ಅಲ್ಲಾಹನ ವಚನಗಳೆಂದು ಸುಳ್ಳು ಹೇಳುತ್ತಿದ್ದರು.
وَإِنَّ مِنْهُمْ لَفَرِيقًۭا يَلْوُۥنَ أَلْسِنَتَهُم بِٱلْكِتَٰبِ لِتَحْسَبُوهُ مِنَ ٱلْكِتَٰبِ وَمَا هُوَ مِنَ ٱلْكِتَٰبِ وَيَقُولُونَ هُوَ مِنْ عِندِ ٱللَّهِ وَمَا هُوَ مِنْ عِندِ ٱللَّهِ وَيَقُولُونَ عَلَى ٱللَّهِ ٱلْكَذِبَ وَهُمْ يَعْلَمُونَ. ﴿78﴾
79 ಅಲ್ಲಾಹು ಒಬ್ಬ ಮನುಷ್ಯನಿಗೆ (ಪ್ರವಾದಿಗೆ) ಗ್ರಂಥ, ವಿವೇಕ ಮತ್ತು ಪ್ರವಾದಿತ್ವವನ್ನು ನೀಡಿ, ನಂತರ ಅವರು ಜನರೊಡನೆ, “ನೀವು ಅಲ್ಲಾಹನನ್ನು ಬಿಟ್ಟು ನನ್ನ ದಾಸರಾಗಿರಿ” ಎಂದು ಹೇಳುವುದು ಉಂಟಾಗಲಾರದು. ಬದಲಿಗೆ, (ಅವರು ಹೇಳುವುದೇನೆಂದರೆ): “ನೀವು ಗ್ರಂಥವನ್ನು ಕಲಿಸುತ್ತಿರುವುದರಿಂದ ಮತ್ತು ನೀವು ಸ್ವತಃ ಅದನ್ನು ಕಲಿಯುತ್ತಿರುವುದರಿಂದ ನೀವು ಅಲ್ಲಾಹನ ದಾಸರಾಗಿರಿ.” مَا كَانَ لِبَشَرٍ أَن يُؤْتِيَهُ ٱللَّهُ ٱلْكِتَٰبَ وَٱلْحُكْمَ وَٱلنُّبُوَّةَ ثُمَّ يَقُولَ لِلنَّاسِ كُونُوا۟ عِبَادًۭا لِّى مِن دُونِ ٱللَّهِ وَلَٰكِن كُونُوا۟ رَبَّٰنِيِّۦنَ بِمَا كُنتُمْ تُعَلِّمُونَ ٱلْكِتَٰبَ وَبِمَا كُنتُمْ تَدْرُسُونَ. ﴿79﴾
80 ನೀವು ದೇವದೂತರುಗಳನ್ನು ಮತ್ತು ಪ್ರವಾದಿಗಳನ್ನು ದೇವರುಗಳನ್ನಾಗಿ ಮಾಡಿಕೊಳ್ಳಿರಿ ಎಂದು ಅವರು (ಪ್ರವಾದಿ) ನಿಮಗೆ ಆದೇಶಿಸುವುದಿಲ್ಲ. ನೀವು ಮುಸ್ಲಿಮರಾದ ಬಳಿಕ ಅವರು ನಿಮಗೆ ಸತ್ಯನಿಷೇಧಿಗಳಾಗಲು ಆದೇಶಿಸುವರೇ? وَلَا يَأْمُرَكُمْ أَن تَتَّخِذُوا۟ ٱلْمَلَٰٓئِكَةَ وَٱلنَّبِيِّۦنَ أَرْبَابًا ۗ أَيَأْمُرُكُم بِٱلْكُفْرِ بَعْدَ إِذْ أَنتُم مُّسْلِمُونَ. ﴿80﴾
81 ಅಲ್ಲಾಹು ಪ್ರವಾದಿಗಳಿಂದ ಕರಾರನ್ನು ಪಡೆದ ಸಂದರ್ಭ: “ನಾನು ನಿಮಗೆ ಗ್ರಂಥ ಮತ್ತು ವಿವೇಕವನ್ನು ನೀಡಿ, ನಂತರ ನಿಮ್ಮ ಬಳಿಯಿರುವುದನ್ನು ದೃಢೀಕರಿಸುವ ಒಬ್ಬ ಸಂದೇಶವಾಹಕರು ನಿಮ್ಮ ಬಳಿಗೆ ಬಂದರೆ, ನೀವು ಅವರಲ್ಲಿ ವಿಶ್ವಾಸವಿಡಲೇಬೇಕು ಮತ್ತು ಅವರಿಗೆ ಸಹಾಯ ಮಾಡಲೇಬೇಕು.” ಅಲ್ಲಾಹು ಕೇಳಿದನು: “ಇದನ್ನು ಒಪ್ಪಿಕೊಂಡು ಈ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ನಿಭಾಯಿಸುವಿರಾ?” ಅವರು ಉತ್ತರಿಸಿದರು: “ನಾವು ಒಪ್ಪಿಕೊಂಡಿದ್ದೇವೆ.” ಅಲ್ಲಾಹು ಹೇಳಿದನು: “ಹಾಗಾದರೆ ನೀವು ಅದಕ್ಕೆ ಸಾಕ್ಷಿಗಳಾಗಿರಿ. ನಾನೂ ನಿಮ್ಮೊಂದಿಗೆ ಸಾಕ್ಷಿಯಾಗಿರುವೆನು.”[1]
[1] ಅಲ್ಲಾಹು ಪ್ರತಿಯೊಬ್ಬ ಪ್ರವಾದಿಯಿಂದಲೂ ಈ ಕರಾರನ್ನು ಪಡೆದಿದ್ದನು. ಈ ಕರಾರಿನ ಪ್ರಕಾರ ಒಬ್ಬ ಪ್ರವಾದಿ ಅಸ್ತಿತ್ವದಲ್ಲಿರುವಾಗ, ಅಥವಾ ಅವರ ಬೋಧನೆಯು ಅಸ್ತಿತ್ವದಲ್ಲಿರುವಾಗ, ಹೊಸ ಪ್ರವಾದಿಯ ಆಗಮನವಾದರೆ ಆ ಪ್ರವಾದಿ ತನ್ನ ಬೋಧನೆಯನ್ನು ನಿಲ್ಲಿಸಿ ಆ ಹೊಸ ಪ್ರವಾದಿಯನ್ನು ಅನುಸರಿಸಬೇಕು. ಒಬ್ಬ ಪ್ರವಾದಿಗೆ ತನ್ನ ನಂತರ ಬರುವ ಹೊಸ ಪ್ರವಾದಿಯನ್ನು ಅನುಸರಿಸುವುದು ಕಡ್ಡಾಯವಾದರೆ ಅವರ ಅನುಯಾಯಿಗಳಿಗೂ ಅದು ಕಡ್ಡಾಯವಾಗಿದೆಯೆಂದು ಬೇರೆಯೇ ಹೇಳಬೇಕಾಗಿಲ್ಲ. ಆದ್ದರಿಂದ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಆಗಮನದ ನಂತರ ಹಿಂದಿನ ಪ್ರವಾದಿಗಳ ಬೋಧನೆಗಳೆಲ್ಲವೂ ಅನೂರ್ಜಿತವಾಗುತ್ತವೆ ಮತ್ತು ಆ ಎಲ್ಲಾ ಪ್ರವಾದಿಗಳು ಮತ್ತು ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಬೋಧನೆಗಳನ್ನು ಅನುಸರಿಸಬೇಕಾಗುತ್ತದೆ.
وَإِذْ أَخَذَ ٱللَّهُ مِيثَٰقَ ٱلنَّبِيِّۦنَ لَمَآ ءَاتَيْتُكُم مِّن كِتَٰبٍۢ وَحِكْمَةٍۢ ثُمَّ جَآءَكُمْ رَسُولٌۭ مُّصَدِّقٌۭ لِّمَا مَعَكُمْ لَتُؤْمِنُنَّ بِهِۦ وَلَتَنصُرُنَّهُۥ ۚ قَالَ ءَأَقْرَرْتُمْ وَأَخَذْتُمْ عَلَىٰ ذَٰلِكُمْ إِصْرِى ۖ قَالُوٓا۟ أَقْرَرْنَا ۚ قَالَ فَٱشْهَدُوا۟ وَأَنَا۠ مَعَكُم مِّنَ ٱلشَّٰهِدِينَ. ﴿81﴾
82 ಅದರ ನಂತರವೂ ಯಾರಾದರೂ ವಿಮುಖರಾದರೆ ಅವರೇ ದುಷ್ಕರ್ಮಿಗಳು. فَمَن تَوَلَّىٰ بَعْدَ ذَٰلِكَ فَأُو۟لَٰٓئِكَ هُمُ ٱلْفَٰسِقُونَ. ﴿82﴾
83 ಅವರು ಅಲ್ಲಾಹನದ್ದಲ್ಲದ ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? (ವಾಸ್ತವವಾಗಿ) ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಸ್ವಯಂಪ್ರೇರಿತವಾಗಿ ಅಥವಾ ಬಲವಂತವಾಗಿ ಅವನಿಗೆ ಶರಣಾಗಿದ್ದಾರೆ. ಅವರೆಲ್ಲರೂ ಅವನ ಬಳಿಗೇ ಮರಳಿಹೋಗುವರು. أَفَغَيْرَ دِينِ ٱللَّهِ يَبْغُونَ وَلَهُۥٓ أَسْلَمَ مَن فِى ٱلسَّمَٰوَٰتِ وَٱلْأَرْضِ طَوْعًۭا وَكَرْهًۭا وَإِلَيْهِ يُرْجَعُونَ. ﴿83﴾
84 ಹೇಳಿರಿ: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್‍ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ಸಂಪೂರ್ಣ ಶರಣಾಗಿದ್ದೇವೆ.” قُلْ ءَامَنَّا بِٱللَّهِ وَمَآ أُنزِلَ عَلَيْنَا وَمَآ أُنزِلَ عَلَىٰٓ إِبْرَٰهِيمَ وَإِسْمَٰعِيلَ وَإِسْحَٰقَ وَيَعْقُوبَ وَٱلْأَسْبَاطِ وَمَآ أُوتِىَ مُوسَىٰ وَعِيسَىٰ وَٱلنَّبِيُّونَ مِن رَّبِّهِمْ لَا نُفَرِّقُ بَيْنَ أَحَدٍۢ مِّنْهُمْ وَنَحْنُ لَهُۥ مُسْلِمُونَ. ﴿84﴾
85 ಯಾರು ಇಸ್ಲಾಂ ಅಲ್ಲದ ಬೇರೊಂದು ಧರ್ಮವನ್ನು ಹುಡುಕುತ್ತಾನೋ—ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರಲ್ಲಿ ಸೇರುವನು. وَمَن يَبْتَغِ غَيْرَ ٱلْإِسْلَٰمِ دِينًۭا فَلَن يُقْبَلَ مِنْهُ وَهُوَ فِى ٱلْءَاخِرَةِ مِنَ ٱلْخَٰسِرِينَ. ﴿85﴾
86 ಸತ್ಯವಿಶ್ವಾಸವನ್ನು ಸ್ವೀಕರಿಸಿ, ಸಂದೇಶವಾಹಕರನ್ನು ಸತ್ಯವೆಂದು ಸಾಕ್ಷ್ಯವಹಿಸಿ, ನಂತರ ತಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಾದರೂ ಹೇಗೆ? ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. كَيْفَ يَهْدِى ٱللَّهُ قَوْمًۭا كَفَرُوا۟ بَعْدَ إِيمَٰنِهِمْ وَشَهِدُوٓا۟ أَنَّ ٱلرَّسُولَ حَقٌّۭ وَجَآءَهُمُ ٱلْبَيِّنَٰتُ ۚ وَٱللَّهُ لَا يَهْدِى ٱلْقَوْمَ ٱلظَّٰلِمِينَ. ﴿86﴾
87 ಅವರ ಮೇಲೆ ಅಲ್ಲಾಹನ, ದೇವದೂತರ ಮತ್ತು ಜನರೆಲ್ಲರ ಶಾಪವಿರುವುದೇ ಅವರಿಗಿರುವ ಪ್ರತಿಫಲವಾಗಿದೆ. أُو۟لَٰٓئِكَ جَزَآؤُهُمْ أَنَّ عَلَيْهِمْ لَعْنَةَ ٱللَّهِ وَٱلْمَلَٰٓئِكَةِ وَٱلنَّاسِ أَجْمَعِينَ. ﴿87﴾
88 ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿಯಿಲ್ಲ ಮತ್ತು ಅವರಿಗೆ ವಿರಾಮವನ್ನೂ ನೀಡಲಾಗುವುದಿಲ್ಲ. خَٰلِدِينَ فِيهَا لَا يُخَفَّفُ عَنْهُمُ ٱلْعَذَابُ وَلَا هُمْ يُنظَرُونَ. ﴿88﴾
89 ಆದರೆ ಯಾರು ಅದರ ಬಳಿಕ ಪಶ್ಚಾತ್ತಾಪಪಟ್ಟು, ಸ್ವಯಂ ತಿದ್ದಿಕೊಳ್ಳುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. إِلَّا ٱلَّذِينَ تَابُوا۟ مِنۢ بَعْدِ ذَٰلِكَ وَأَصْلَحُوا۟ فَإِنَّ ٱللَّهَ غَفُورٌۭ رَّحِيمٌ. ﴿89﴾
90 ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾದವರು ಮತ್ತು ತಮ್ಮ ಸತ್ಯನಿಷೇಧವನ್ನು ಹೆಚ್ಚಿಸುತ್ತಲೇ ಇರುವವರು ಯಾರೋ—ಅವರ ಪಶ್ಚಾತ್ತಾಪವು ಎಂದಿಗೂ ಸ್ವೀಕಾರವಾಗುವುದಿಲ್ಲ. ಅವರೇ ದಾರಿತಪ್ಪಿದವರು. إِنَّ ٱلَّذِينَ كَفَرُوا۟ بَعْدَ إِيمَٰنِهِمْ ثُمَّ ٱزْدَادُوا۟ كُفْرًۭا لَّن تُقْبَلَ تَوْبَتُهُمْ وَأُو۟لَٰٓئِكَ هُمُ ٱلضَّآلُّونَ. ﴿90﴾
91 ಸತ್ಯನಿಷೇಧಿಗಳು ಮತ್ತು ಸತ್ಯನಿಷೇಧಿಗಳಾಗಿಯೇ ಸಾಯುವವರು ಯಾರೋ—ಅವರಲ್ಲೊಬ್ಬನು ಭೂಮಿ ತುಂಬಾ ಬಂಗಾರವನ್ನು ಪರಿಹಾರವಾಗಿ ನೀಡಿದರೂ ಸಹ ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. ಅವರಿಗೆ ಯಾವುದೇ ಸಹಾಯಕರಿಲ್ಲ. إِنَّ ٱلَّذِينَ كَفَرُوا۟ وَمَاتُوا۟ وَهُمْ كُفَّارٌۭ فَلَن يُقْبَلَ مِنْ أَحَدِهِم مِّلْءُ ٱلْأَرْضِ ذَهَبًۭا وَلَوِ ٱفْتَدَىٰ بِهِۦٓ ۗ أُو۟لَٰٓئِكَ لَهُمْ عَذَابٌ أَلِيمٌۭ وَمَا لَهُم مِّن نَّٰصِرِينَ. ﴿91﴾
92 ನೀವು ಇಷ್ಟಪಡುವ ವಸ್ತುಗಳಿಂದ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ತನಕ ನೀವೆಂದೂ ಒಳಿತನ್ನು ಗಳಿಸುವುದಿಲ್ಲ. ನೀವು ಯಾವುದೇ ವಸ್ತುವನ್ನು ಖರ್ಚು (ದಾನ) ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ. لَن تَنَالُوا۟ ٱلْبِرَّ حَتَّىٰ تُنفِقُوا۟ مِمَّا تُحِبُّونَ ۚ وَمَا تُنفِقُوا۟ مِن شَىْءٍۢ فَإِنَّ ٱللَّهَ بِهِۦ عَلِيمٌۭ. ﴿92﴾
93 ಇಸ್ರಾಯೇಲ್ ಮಕ್ಕಳಿಗೆ ಎಲ್ಲಾ ಆಹಾರಗಳೂ ಧರ್ಮಸಮ್ಮತವಾಗಿದ್ದವು—ತೌರಾತ್ ಅವತೀರ್ಣವಾಗುವ ಮುನ್ನ ಇಸ್ರಾಈಲರು (ಯಾಕೂಬರು) ಸ್ವಯಂ ನಿಷೇಧಿಸಿದವುಗಳ ಹೊರತು. ಹೇಳಿರಿ: “ನೀವು ತೌರಾತನ್ನು ತಂದು ಅದನ್ನು ಪಠಿಸಿರಿ; ನೀವು ಸತ್ಯವಂತರಾಗಿದ್ದರೆ.” ۞ كُلُّ ٱلطَّعَامِ كَانَ حِلًّۭا لِّبَنِىٓ إِسْرَٰٓءِيلَ إِلَّا مَا حَرَّمَ إِسْرَٰٓءِيلُ عَلَىٰ نَفْسِهِۦ مِن قَبْلِ أَن تُنَزَّلَ ٱلتَّوْرَىٰةُ ۗ قُلْ فَأْتُوا۟ بِٱلتَّوْرَىٰةِ فَٱتْلُوهَآ إِن كُنتُمْ صَٰدِقِينَ. ﴿93﴾
94 ಅದರ ಬಳಿಕವೂ ಯಾರು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಾರೋ—ಅವರೇ ಅಕ್ರಮಿಗಳು. فَمَنِ ٱفْتَرَىٰ عَلَى ٱللَّهِ ٱلْكَذِبَ مِنۢ بَعْدِ ذَٰلِكَ فَأُو۟لَٰٓئِكَ هُمُ ٱلظَّٰلِمُونَ. ﴿94﴾
95 ಹೇಳಿರಿ: “ಅಲ್ಲಾಹು ಸತ್ಯವನ್ನೇ ಹೇಳಿದ್ದಾನೆ. ಆದ್ದರಿಂದ, ನೀವು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸಿರಿ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.” قُلْ صَدَقَ ٱللَّهُ ۗ فَٱتَّبِعُوا۟ مِلَّةَ إِبْرَٰهِيمَ حَنِيفًۭا وَمَا كَانَ مِنَ ٱلْمُشْرِكِينَ. ﴿95﴾
96 ನಿಶ್ಚಯವಾಗಿಯೂ ಮಕ್ಕಾದಲ್ಲಿರುವ ಭವನವು ಮನುಷ್ಯರಿಗಾಗಿ ಸ್ಥಾಪಿಸಲಾದ ಮೊಟ್ಟಮೊದಲ ಆರಾಧನಾಲಯವಾಗಿದೆ. ಅದು ಸಮೃದ್ಧವೂ ಸರ್ವಲೋಕದವರಿಗೆ ಮಾರ್ಗದರ್ಶಿಯೂ ಆಗಿದೆ. إِنَّ أَوَّلَ بَيْتٍۢ وُضِعَ لِلنَّاسِ لَلَّذِى بِبَكَّةَ مُبَارَكًۭا وَهُدًۭى لِّلْعَٰلَمِينَ. ﴿96﴾
97 ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. (ಅದರಲ್ಲಿ) ಇಬ್ರಾಹೀಮರು ನಿಂತ ಸ್ಥಳವಿದೆ. ಅದನ್ನು ಪ್ರವೇಶಿಸಿದವನು ನಿರ್ಭಯನಾಗುತ್ತಾನೆ. ಆ ಭವನಕ್ಕೆ ತಲುಪಲು ಸಾಧ್ಯವಿರುವ ಜನರು ಅಲ್ಲಿಗೆ ತೆರಳಿ ಹಜ್ಜ್ ನಿರ್ವಹಿಸುವುದನ್ನು ಅಲ್ಲಾಹು ಕಡ್ಡಾಯಗೊಳಿಸಿದ್ದಾನೆ. ಆದರೆ ಯಾರಾದರೂ ಅದನ್ನು ನಿಷೇಧಿಸಿದರೆ—ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕದವರಿಂದ ಸಂಪೂರ್ಣ ನಿರಪೇಕ್ಷನಾಗಿದ್ದಾನೆ. فِيهِ ءَايَٰتٌۢ بَيِّنَٰتٌۭ مَّقَامُ إِبْرَٰهِيمَ ۖ وَمَن دَخَلَهُۥ كَانَ ءَامِنًۭا ۗ وَلِلَّهِ عَلَى ٱلنَّاسِ حِجُّ ٱلْبَيْتِ مَنِ ٱسْتَطَاعَ إِلَيْهِ سَبِيلًۭا ۚ وَمَن كَفَرَ فَإِنَّ ٱللَّهَ غَنِىٌّ عَنِ ٱلْعَٰلَمِينَ. ﴿97﴾
98 ಹೇಳಿರಿ: “ಓ ಗ್ರಂಥದವರೇ! ನೀವು ಅಲ್ಲಾಹನ ವಚನಗಳನ್ನು ಏಕೆ ನಿಷೇಧಿಸುತ್ತೀರಿ? ನೀವು ಮಾಡುವ ಎಲ್ಲಾ ಕಾರ್ಯಗಳಿಗೂ ಅಲ್ಲಾಹು ಸಾಕ್ಷಿಯಲ್ಲವೇ?” قُلْ يَٰٓأَهْلَ ٱلْكِتَٰبِ لِمَ تَكْفُرُونَ بِـَٔايَٰتِ ٱللَّهِ وَٱللَّهُ شَهِيدٌ عَلَىٰ مَا تَعْمَلُونَ. ﴿98﴾
99 ಹೇಳಿರಿ: “ಓ ಗ್ರಂಥದವರೇ! ಸತ್ಯವಿಶ್ವಾಸ ಸ್ವೀಕರಿಸಿದವರನ್ನು ನೀವು ಅಲ್ಲಾಹನ ಮಾರ್ಗದಿಂದ ಏಕೆ ತಡೆಯುತ್ತೀರಿ ಮತ್ತು ಅದರಲ್ಲಿ ವಕ್ರತೆಯನ್ನು ಏಕೆ ಹುಡುಕುತ್ತೀರಿ? (ಅದು ನೇರವಾಗಿದೆ ಎಂಬುದಕ್ಕೆ) ನೀವೇ ಸಾಕ್ಷಿಗಳಾಗಿದ್ದೀರಿ. ನೀವು ಮಾಡುತ್ತಿರುವುದರ ಕುರಿತು ಅಲ್ಲಾಹು ತಿಳಿಯದವನಲ್ಲ.” قُلْ يَٰٓأَهْلَ ٱلْكِتَٰبِ لِمَ تَصُدُّونَ عَن سَبِيلِ ٱللَّهِ مَنْ ءَامَنَ تَبْغُونَهَا عِوَجًۭا وَأَنتُمْ شُهَدَآءُ ۗ وَمَا ٱللَّهُ بِغَٰفِلٍ عَمَّا تَعْمَلُونَ. ﴿99﴾
100 ಓ ಸತ್ಯವಿಶ್ವಾಸಿಗಳೇ! ನೀವು ಗ್ರಂಥ ನೀಡಲಾದವರಲ್ಲಿ ಸೇರಿದ ಪಂಗಡವನ್ನು ಅನುಸರಿಸಿದರೆ, ನೀವು ಸತ್ಯವಿಶ್ವಾಸಿಗಳಾದ ಬಳಿಕವೂ ಅವರು ನಿಮ್ಮನ್ನು ಸತ್ಯನಿಷೇಧಿಗಳನ್ನಾಗಿ ಮಾಡುವರು. يَٰٓأَيُّهَا ٱلَّذِينَ ءَامَنُوٓا۟ إِن تُطِيعُوا۟ فَرِيقًۭا مِّنَ ٱلَّذِينَ أُوتُوا۟ ٱلْكِتَٰبَ يَرُدُّوكُم بَعْدَ إِيمَٰنِكُمْ كَٰفِرِينَ. ﴿100﴾
101 ನೀವು ಹೇಗೆ ಸತ್ಯನಿಷೇಧಿಗಳಾಗುವಿರಿ? ನಿಮಗೆ ಅಲ್ಲಾಹನ ವಚನಗಳನ್ನು ಓದಿಕೊಡಲಾಗುತ್ತಿದೆ ಮತ್ತು ನಿಮ್ಮ ನಡುವೆ ಅವನ ಸಂದೇಶವಾಹಕರಿದ್ದಾರೆ. ಯಾರು ಅಲ್ಲಾಹನನ್ನು (ಇಸ್ಲಾಂ ಧರ್ಮವನ್ನು) ಬಿಗಿಯಾಗಿ ಹಿಡಿಯುತ್ತಾನೋ ಅವನನ್ನು ನೇರಮಾರ್ಗಕ್ಕೆ ಮುನ್ನಡೆಸಲಾಗಿದೆ. وَكَيْفَ تَكْفُرُونَ وَأَنتُمْ تُتْلَىٰ عَلَيْكُمْ ءَايَٰتُ ٱللَّهِ وَفِيكُمْ رَسُولُهُۥ ۗ وَمَن يَعْتَصِم بِٱللَّهِ فَقَدْ هُدِىَ إِلَىٰ صِرَٰطٍۢ مُّسْتَقِيمٍۢ. ﴿101﴾
102 ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಭಯಪಡಬೇಕಾದಂತೆಯೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಇಹಲೋಕ ತ್ಯಜಿಸಬೇಡಿ. يَٰٓأَيُّهَا ٱلَّذِينَ ءَامَنُوا۟ ٱتَّقُوا۟ ٱللَّهَ حَقَّ تُقَاتِهِۦ وَلَا تَمُوتُنَّ إِلَّا وَأَنتُم مُّسْلِمُونَ. ﴿102﴾
103 ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಹಗ್ಗವನ್ನು ಬಿಗಿಯಾಗಿ ಹಿಡಿಯಿರಿ. ವಿಭಿನ್ನ ಪಂಗಡಗಳಾಗಿ ಬೇರ್ಪಡಬೇಡಿ. ನೀವು ವೈರಿಗಳಾಗಿದ್ದಾಗ ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅವನು ನಿಮ್ಮ ಹೃದಯಗಳನ್ನು ಬೆಸೆದು, ಅವನ ಅನುಗ್ರಹದ ನಿಮಿತ್ತ ನೀವು ಪರಸ್ಪರ ಸಹೋದರರಾದಿರಿ. ನೀವು ಅಗ್ನಿಕುಂಡದ ಅಂಚಿನಲ್ಲಿದ್ದಿರಿ. ಆಗ ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ಈ ರೀತಿ ಅಲ್ಲಾಹು ಅವನ ದೃಷ್ಟಾಂತಗಳನ್ನು ನಿಮಗೆ ವಿವರಿಸಿಕೊಡುತ್ತಾನೆ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ. وَٱعْتَصِمُوا۟ بِحَبْلِ ٱللَّهِ جَمِيعًۭا وَلَا تَفَرَّقُوا۟ ۚ وَٱذْكُرُوا۟ نِعْمَتَ ٱللَّهِ عَلَيْكُمْ إِذْ كُنتُمْ أَعْدَآءًۭ فَأَلَّفَ بَيْنَ قُلُوبِكُمْ فَأَصْبَحْتُم بِنِعْمَتِهِۦٓ إِخْوَٰنًۭا وَكُنتُمْ عَلَىٰ شَفَا حُفْرَةٍۢ مِّنَ ٱلنَّارِ فَأَنقَذَكُم مِّنْهَا ۗ كَذَٰلِكَ يُبَيِّنُ ٱللَّهُ لَكُمْ ءَايَٰتِهِۦ لَعَلَّكُمْ تَهْتَدُونَ. ﴿103﴾
104 ನಿಮ್ಮಲ್ಲಿ ಒಳಿತಿಗೆ ಆಮಂತ್ರಿಸುವ, ಒಳಿತನ್ನು ಆದೇಶಿಸುವ ಮತ್ತು ಕೆಡುಕನ್ನು ವಿರೋಧಿಸುವ ಒಂದು ಸಮುದಾಯವು ಉಂಟಾಗಲಿ. ಅವರೇ ಯಶಸ್ವಿಯಾದವರು. وَلْتَكُن مِّنكُمْ أُمَّةٌۭ يَدْعُونَ إِلَى ٱلْخَيْرِ وَيَأْمُرُونَ بِٱلْمَعْرُوفِ وَيَنْهَوْنَ عَنِ ٱلْمُنكَرِ ۚ وَأُو۟لَٰٓئِكَ هُمُ ٱلْمُفْلِحُونَ. ﴿104﴾
105 ತಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಪಂಗಡಗಳಾಗಿ ಬೇರ್ಪಟ್ಟು ಭಿನ್ನಮತ ತಳೆದವರಂತೆ ನೀವಾಗಬೇಡಿ. ಅವರಿಗೆ ಭಯಾನಕ ಶಿಕ್ಷೆಯಿದೆ. وَلَا تَكُونُوا۟ كَٱلَّذِينَ تَفَرَّقُوا۟ وَٱخْتَلَفُوا۟ مِنۢ بَعْدِ مَا جَآءَهُمُ ٱلْبَيِّنَٰتُ ۚ وَأُو۟لَٰٓئِكَ لَهُمْ عَذَابٌ عَظِيمٌۭ. ﴿105﴾
106 ಕೆಲವು ಮುಖಗಳು ಬೆಳ್ಳಗಾಗುವ ಮತ್ತು ಕೆಲವು ಮುಖಗಳು ಕರ್‍ರಗಾಗುವ ದಿನ! ಮುಖಗಳು ಕರ್‍ರಗಾದವರೊಡನೆ ಕೇಳಲಾಗುವುದು: “ನೀವು ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾಗಿ ಬಿಟ್ಟಿರಾ? ನೀವು ಸತ್ಯನಿಷೇಧಿಗಳಾದ ಕಾರಣ ಶಿಕ್ಷೆಯ ರುಚಿಯನ್ನು ಸವಿಯಿರಿ.” يَوْمَ تَبْيَضُّ وُجُوهٌۭ وَتَسْوَدُّ وُجُوهٌۭ ۚ فَأَمَّا ٱلَّذِينَ ٱسْوَدَّتْ وُجُوهُهُمْ أَكَفَرْتُم بَعْدَ إِيمَٰنِكُمْ فَذُوقُوا۟ ٱلْعَذَابَ بِمَا كُنتُمْ تَكْفُرُونَ. ﴿106﴾
107 ಮುಖಗಳು ಬೆಳ್ಳಗಾದವರು ಯಾರೋ—ಅವರು ಅಲ್ಲಾಹನ ದಯೆಯಲ್ಲಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. وَأَمَّا ٱلَّذِينَ ٱبْيَضَّتْ وُجُوهُهُمْ فَفِى رَحْمَةِ ٱللَّهِ هُمْ فِيهَا خَٰلِدُونَ. ﴿107﴾
108 ಇವು ಅಲ್ಲಾಹನ ವಚನಗಳಾಗಿವೆ. ನಾವು ಇವುಗಳನ್ನು ನಿಮಗೆ ಸತ್ಯವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಸರ್ವಲೋಕದವರಿಗೆ ಅನ್ಯಾಯ ಮಾಡುವ ಇರಾದೆಯನ್ನು ಹೊಂದಿಲ್ಲ. تِلْكَ ءَايَٰتُ ٱللَّهِ نَتْلُوهَا عَلَيْكَ بِٱلْحَقِّ ۗ وَمَا ٱللَّهُ يُرِيدُ ظُلْمًۭا لِّلْعَٰلَمِينَ. ﴿108﴾
109 ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಎಲ್ಲಾ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ. وَلِلَّهِ مَا فِى ٱلسَّمَٰوَٰتِ وَمَا فِى ٱلْأَرْضِ ۚ وَإِلَى ٱللَّهِ تُرْجَعُ ٱلْأُمُورُ. ﴿109﴾
110 ನೀವು ಮನುಷ್ಯರಿಗಾಗಿ ಹೊರತರಲಾದ ಉತ್ತಮ ಸಮುದಾಯವಾಗಿದ್ದೀರಿ. ನೀವು ಒಳಿತನ್ನು ಆದೇಶಿಸುತ್ತೀರಿ, ಕೆಡುಕನ್ನು ವಿರೋಧಿಸುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ಸತ್ಯವಿಶ್ವಾಸಿಗಳಾಗುತ್ತಿದ್ದರೆ ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಸತ್ಯವಿಶ್ವಾಸಿಗಳಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ. كُنتُمْ خَيْرَ أُمَّةٍ أُخْرِجَتْ لِلنَّاسِ تَأْمُرُونَ بِٱلْمَعْرُوفِ وَتَنْهَوْنَ عَنِ ٱلْمُنكَرِ وَتُؤْمِنُونَ بِٱللَّهِ ۗ وَلَوْ ءَامَنَ أَهْلُ ٱلْكِتَٰبِ لَكَانَ خَيْرًۭا لَّهُم ۚ مِّنْهُمُ ٱلْمُؤْمِنُونَ وَأَكْثَرُهُمُ ٱلْفَٰسِقُونَ. ﴿110﴾
111 ಕೆಲವು ಕೀಟಲೆಗಳನ್ನು ಬಿಟ್ಟರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಬೆನ್ನು ತಿರುಗಿಸಿ ಓಡುವರು. ನಂತರ ಅವರಿಗೆ ಯಾವುದೇ ಸಹಾಯವು ದೊರೆಯುವುದಿಲ್ಲ. لَن يَضُرُّوكُمْ إِلَّآ أَذًۭى ۖ وَإِن يُقَٰتِلُوكُمْ يُوَلُّوكُمُ ٱلْأَدْبَارَ ثُمَّ لَا يُنصَرُونَ. ﴿111﴾
112 ಅವರು ಎಲ್ಲೇ ಇದ್ದರೂ ಅವರ ಮೇಲೆ ಅವಮಾನವನ್ನು ಹೇರಲಾಗಿದೆ. ಅಲ್ಲಾಹನ ಹಗ್ಗದ (ಕರಾರಿನ) ಅಥವಾ ಜನರ ಹಗ್ಗದ (ಕರಾರಿನ) ಆಶ್ರಯದಲ್ಲಿರುವವರ ಹೊರತು. ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾಗಿದ್ದಾರೆ. ಅವರ ಮೇಲೆ ದರಿದ್ರತೆಯನ್ನು ಹೇರಲಾಗಿದೆ. ಅದೇಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದರು. ಅದೇಕೆಂದರೆ ಅವರು ಅವಿಧೇಯತೆ ತೋರುತ್ತಿದ್ದರು ಮತ್ತು ಅತಿರೇಕವೆಸಗುತ್ತಿದ್ದರು. ضُرِبَتْ عَلَيْهِمُ ٱلذِّلَّةُ أَيْنَ مَا ثُقِفُوٓا۟ إِلَّا بِحَبْلٍۢ مِّنَ ٱللَّهِ وَحَبْلٍۢ مِّنَ ٱلنَّاسِ وَبَآءُو بِغَضَبٍۢ مِّنَ ٱللَّهِ وَضُرِبَتْ عَلَيْهِمُ ٱلْمَسْكَنَةُ ۚ ذَٰلِكَ بِأَنَّهُمْ كَانُوا۟ يَكْفُرُونَ بِـَٔايَٰتِ ٱللَّهِ وَيَقْتُلُونَ ٱلْأَنۢبِيَآءَ بِغَيْرِ حَقٍّۢ ۚ ذَٰلِكَ بِمَا عَصَوا۟ وَّكَانُوا۟ يَعْتَدُونَ. ﴿112﴾
113 ಅವರೆಲ್ಲರೂ ಒಂದೇ ರೀತಿಯಲ್ಲ. ರಾತ್ರಿ ವೇಳೆಯಲ್ಲಿ ಅಲ್ಲಾಹನ ವಚನಗಳನ್ನು ಪಠಿಸುತ್ತಾ ಮತ್ತು ಸಾಷ್ಟಾಂಗ ಮಾಡುತ್ತಾ (ಸತ್ಯದಲ್ಲಿ) ದೃಢವಾಗಿ ನಿಂತ ಒಂದು ಗುಂಪು ಗ್ರಂಥದವರಲ್ಲಿದೆ. ۞ لَيْسُوا۟ سَوَآءًۭ ۗ مِّنْ أَهْلِ ٱلْكِتَٰبِ أُمَّةٌۭ قَآئِمَةٌۭ يَتْلُونَ ءَايَٰتِ ٱللَّهِ ءَانَآءَ ٱلَّيْلِ وَهُمْ يَسْجُدُونَ. ﴿113﴾
114 ಅವರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ, ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ ಹಾಗೂ ಸತ್ಕಾರ್ಯಗಳಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುತ್ತಾರೆ. ಅವರೇ ನೀತಿವಂತರಲ್ಲಿ ಸೇರಿದವರು. يُؤْمِنُونَ بِٱللَّهِ وَٱلْيَوْمِ ٱلْءَاخِرِ وَيَأْمُرُونَ بِٱلْمَعْرُوفِ وَيَنْهَوْنَ عَنِ ٱلْمُنكَرِ وَيُسَٰرِعُونَ فِى ٱلْخَيْرَٰتِ وَأُو۟لَٰٓئِكَ مِنَ ٱلصَّٰلِحِينَ. ﴿114﴾
115 ಅವರು ಯಾವುದೇ ಒಳಿತು ಮಾಡಿದರೂ ಅದು ತಿರಸ್ಕರಿಸಲ್ಪಡುವುದಿಲ್ಲ. ಅಲ್ಲಾಹು ದೇವಭಯವುಳ್ಳವರನ್ನು ಬಹಳ ಚೆನ್ನಾಗಿ ತಿಳಿದಿದ್ದಾನೆ. وَمَا يَفْعَلُوا۟ مِنْ خَيْرٍۢ فَلَن يُكْفَرُوهُ ۗ وَٱللَّهُ عَلِيمٌۢ بِٱلْمُتَّقِينَ. ﴿115﴾
116 ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಾರೋ—ಅವರಿಗೆ ಅವರ ಆಸ್ತಿಗಳು ಮತ್ತು ಮಕ್ಕಳು ಅಲ್ಲಾಹನ ಬಳಿ ಯಾವುದೇ ಉಪಕಾರ ಮಾಡುವುದಿಲ್ಲ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. إِنَّ ٱلَّذِينَ كَفَرُوا۟ لَن تُغْنِىَ عَنْهُمْ أَمْوَٰلُهُمْ وَلَآ أَوْلَٰدُهُم مِّنَ ٱللَّهِ شَيْـًۭٔا ۖ وَأُو۟لَٰٓئِكَ أَصْحَٰبُ ٱلنَّارِ ۚ هُمْ فِيهَا خَٰلِدُونَ. ﴿116﴾
117 ಈ ಇಹಲೋಕ ಜೀವನದಲ್ಲಿ ಅವರು ಖರ್ಚು ಮಾಡುವುದನ್ನು ಸ್ಯಯಂ ಅಕ್ರಮವೆಸಗಿದ ಜನರ ಹೊಲದಲ್ಲಿ ಬಲವಾಗಿ ಬೀಸಿ, ನಂತರ ಅದನ್ನು ಸರ್ವನಾಶ ಮಾಡಿದ ಒಂದು ಶೀತಲ ಮಾರುತಕ್ಕೆ ಹೋಲಿಸಬಹುದು. ಅಲ್ಲಾಹು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರು ಸ್ವಯಂ ಅನ್ಯಾಯವೆಸಗುತ್ತಿದ್ದಾರೆ. مَثَلُ مَا يُنفِقُونَ فِى هَٰذِهِ ٱلْحَيَوٰةِ ٱلدُّنْيَا كَمَثَلِ رِيحٍۢ فِيهَا صِرٌّ أَصَابَتْ حَرْثَ قَوْمٍۢ ظَلَمُوٓا۟ أَنفُسَهُمْ فَأَهْلَكَتْهُ ۚ وَمَا ظَلَمَهُمُ ٱللَّهُ وَلَٰكِنْ أَنفُسَهُمْ يَظْلِمُونَ. ﴿117﴾
118 ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮವರನ್ನೇ ಹೊರತು ಬೇರೆ ಯಾರನ್ನೂ ಆಪ್ತಮಿತ್ರರನ್ನಾಗಿ ಸ್ವೀಕರಿಸಬೇಡಿ. ನಿಮಗೆ ತೊಂದರೆ ಕೊಡಲು ಅವರು ಸ್ವಲ್ಪವೂ ಹಿಂಜರಿಯುವುದಿಲ್ಲ. ನೀವು ತೊಂದರೆಗೊಳಗಾಗಬೇಕೆಂದೇ ಅವರು ಆಶಿಸುತ್ತಾರೆ. ಅವರ ಬಾಯಿಯಿಂದ ದ್ವೇಷವು ಈಗಾಗಲೇ ಪ್ರಕಟವಾಗಿದೆ. ಅವರ ಹೃದಯಗಳಲ್ಲಿ ಅದಕ್ಕಿಂತಲೂ ದೊಡ್ಡ ದ್ವೇಷವು ಅಡಗಿಕೊಂಡಿದೆ. ನಾವು ನಿಮಗೆ ವಚನಗಳನ್ನು ಸ್ಪಷ್ಟವಾಗಿ ವಿವರಿಸಿಕೊಟ್ಟಿದ್ದೇವೆ. ನೀವು ಬುದ್ಧಿವಂತರಾಗಿದ್ದರೆ (ಇದರ ಬಗ್ಗೆ ಗಮನ ಹರಿಸಿ). يَٰٓأَيُّهَا ٱلَّذِينَ ءَامَنُوا۟ لَا تَتَّخِذُوا۟ بِطَانَةًۭ مِّن دُونِكُمْ لَا يَأْلُونَكُمْ خَبَالًۭا وَدُّوا۟ مَا عَنِتُّمْ قَدْ بَدَتِ ٱلْبَغْضَآءُ مِنْ أَفْوَٰهِهِمْ وَمَا تُخْفِى صُدُورُهُمْ أَكْبَرُ ۚ قَدْ بَيَّنَّا لَكُمُ ٱلْءَايَٰتِ ۖ إِن كُنتُمْ تَعْقِلُونَ. ﴿118﴾
119 ನೀವು ಅವರನ್ನು ಪ್ರೀತಿಸುತ್ತೀರಿ. ಆದರೆ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲೂ ವಿಶ್ವಾಸವಿಡುತ್ತೀರಿ. ನಿಮ್ಮನ್ನು ಭೇಟಿಯಾಗುವಾಗ, “ನಾವು ವಿಶ್ವಾಸವಿಟ್ಟಿದ್ದೇವೆ” ಎಂದು ಅವರು ಹೇಳುತ್ತಾರೆ. ಆದರೆ ಅವರು ಏಕಾಂತದಲ್ಲಿರುವಾಗ ನಿಮ್ಮ ಮೇಲಿನ ಕೋಪದಿಂದ ಬೆರಳುಗಳನ್ನು ಕಚ್ಚುತ್ತಾರೆ. ಹೇಳಿರಿ: “ನಿಮ್ಮ ಕೋಪದೊಂದಿಗೇ ನೀವು ಪ್ರಾಣವನ್ನು ತ್ಯಜಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.” هَٰٓأَنتُمْ أُو۟لَآءِ تُحِبُّونَهُمْ وَلَا يُحِبُّونَكُمْ وَتُؤْمِنُونَ بِٱلْكِتَٰبِ كُلِّهِۦ وَإِذَا لَقُوكُمْ قَالُوٓا۟ ءَامَنَّا وَإِذَا خَلَوْا۟ عَضُّوا۟ عَلَيْكُمُ ٱلْأَنَامِلَ مِنَ ٱلْغَيْظِ ۚ قُلْ مُوتُوا۟ بِغَيْظِكُمْ ۗ إِنَّ ٱللَّهَ عَلِيمٌۢ بِذَاتِ ٱلصُّدُورِ. ﴿119﴾
120 ನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕುಂಟಾದರೆ ಅವರು ಸಂತೋಷಪಡುತ್ತಾರೆ. ನೀವು ತಾಳ್ಮೆ ವಹಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟು ಜೀವಿಸಿದರೆ, ಅವರ ಕುತಂತ್ರವು ನಿಮಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವರು ಮಾಡುತ್ತಿರುವ ಕರ್ಮಗಳನ್ನು ಆವರಿಸಿಕೊಂಡಿದ್ದಾನೆ. إِن تَمْسَسْكُمْ حَسَنَةٌۭ تَسُؤْهُمْ وَإِن تُصِبْكُمْ سَيِّئَةٌۭ يَفْرَحُوا۟ بِهَا ۖ وَإِن تَصْبِرُوا۟ وَتَتَّقُوا۟ لَا يَضُرُّكُمْ كَيْدُهُمْ شَيْـًٔا ۗ إِنَّ ٱللَّهَ بِمَا يَعْمَلُونَ مُحِيطٌۭ. ﴿120﴾
121 (ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳನ್ನು ಯುದ್ಧದ ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಲು ನೀವು ನಸುಕಿನಲ್ಲೇ ಮನೆಯಿಂದ ಹೊರಟ ಸಂದರ್ಭ(ವನ್ನು ಸ್ಮರಿಸಿ). ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. وَإِذْ غَدَوْتَ مِنْ أَهْلِكَ تُبَوِّئُ ٱلْمُؤْمِنِينَ مَقَٰعِدَ لِلْقِتَالِ ۗ وَٱللَّهُ سَمِيعٌ عَلِيمٌ. ﴿121﴾
122 ನಿಮ್ಮಲ್ಲಿನ ಎರಡು ಗುಂಪುಗಳು ಹೇಡಿಗಳಾಗಲು ಮುಂದಾದ ಸಂದರ್ಭ.[1] ಅಲ್ಲಾಹು ಆ ಎರಡು ಪಂಗಡಗಳ ರಕ್ಷಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
[1] ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಾಳುಪಡೆ, ಅಶ್ವಸೇನೆ ಮತ್ತು ಬಿಲ್ಲುಗಾರರನ್ನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿದ್ದರು. ಯುದ್ಧ ತಂತ್ರದ ಪ್ರಮುಖ ಭಾಗವಾಗಿ ಒಂದು ಗುಡ್ಡೆಯ ಮೇಲೆ ಕಾವಲು ನಿಲ್ಲಿಸಲಾಗಿದ್ದ ಬಿಲ್ಲುಗಾರರು ತಮ್ಮ ಕಾರ್ಯನಿರ್ವಹಣೆಯಲ್ಲಿ ತಪ್ಪೆಸಗಿದ ಕಾರಣ ಉಹುದ್ ಯುದ್ಧದಲ್ಲಿ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಯುದ್ಧದಲ್ಲಿ ಹೋರಾಡುತ್ತಿದ್ದ ಎರಡು ಗೋತ್ರದ ಜನರು ದಿಗಿಲುಗೊಂಡು ಯುದ್ಧದಿಂದ ಪಲಾಯನ ಮಾಡಬೇಕೆಂದು ಒಂದು ಕ್ಷಣ ಯೋಚಿಸಿದರು. ಆದರೆ ಅಲ್ಲಾಹು ಅವರ ಮನಸ್ಸಿಗೆ ದೃಢತೆಯನ್ನು ನೀಡಿ ಅವರನ್ನು ನಿಲ್ಲಿಸಿದನು.
إِذْ هَمَّت طَّآئِفَتَانِ مِنكُمْ أَن تَفْشَلَا وَٱللَّهُ وَلِيُّهُمَا ۗ وَعَلَى ٱللَّهِ فَلْيَتَوَكَّلِ ٱلْمُؤْمِنُونَ. ﴿122﴾
123 ಬದ್ರ್‌ನಲ್ಲಿ ನೀವು ಅತ್ಯಂತ ದುರ್ಬಲರಾಗಿದ್ದಾಗ, ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಞರಾಗುವುದಕ್ಕಾಗಿ. وَلَقَدْ نَصَرَكُمُ ٱللَّهُ بِبَدْرٍۢ وَأَنتُمْ أَذِلَّةٌۭ ۖ فَٱتَّقُوا۟ ٱللَّهَ لَعَلَّكُمْ تَشْكُرُونَ. ﴿123﴾
124 “ನಿಮ್ಮ ಪರಿಪಾಲಕನು (ಅಲ್ಲಾಹು) ಮೂರು ಸಾವಿರ ದೇವದೂತರುಗಳನ್ನು ಇಳಿಸಿ ನಿಮಗೆ ಸಹಾಯ ಮಾಡಿದರೆ ಸಾಕಾಗದೇ?” ಎಂದು ನೀವು ಸತ್ಯವಿಶ್ವಾಸಿಗಳೊಡನೆ ಕೇಳಿದ ಸಂದರ್ಭ(ವನ್ನು ಸ್ಮರಿಸಿ). إِذْ تَقُولُ لِلْمُؤْمِنِينَ أَلَن يَكْفِيَكُمْ أَن يُمِدَّكُمْ رَبُّكُم بِثَلَٰثَةِ ءَالَٰفٍۢ مِّنَ ٱلْمَلَٰٓئِكَةِ مُنزَلِينَ. ﴿124﴾
125 ಹೌದು! ನೀವು ತಾಳ್ಮೆಯಿಂದಿದ್ದರೆ ಮತ್ತು ಅಲ್ಲಾಹನನ್ನು ಭಯಪಟ್ಟರೆ ನಿಮ್ಮ ಬಳಿಗೆ ಶತ್ರುಗಳು ಯಾವ ಕ್ಷಣದಲ್ಲಿ ಬಂದರೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶೇಷ ಗುರುತುಗಳಿರುವ ಐದು ಸಾವಿರ ದೇವದೂತರುಗಳ ಮೂಲಕ ನಿಮಗೆ ಸಹಾಯ ಮಾಡುವನು. بَلَىٰٓ ۚ إِن تَصْبِرُوا۟ وَتَتَّقُوا۟ وَيَأْتُوكُم مِّن فَوْرِهِمْ هَٰذَا يُمْدِدْكُمْ رَبُّكُم بِخَمْسَةِ ءَالَٰفٍۢ مِّنَ ٱلْمَلَٰٓئِكَةِ مُسَوِّمِينَ. ﴿125﴾
126 ಅಲ್ಲಾಹು ಇದನ್ನು (ಸಹಾಯವನ್ನು) ಮಾಡಿದ್ದು ನಿಮಗೊಂದು ಸುವಾರ್ತೆಯಾಗಿ ಮತ್ತು ನಿಮ್ಮ ಹೃದಯಗಳು ಶಾಂತವಾಗಲಿಕ್ಕಾಗಿ ಮಾತ್ರ. ಸಹಾಯವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದಲೇ ಆಗಿದೆ. وَمَا جَعَلَهُ ٱللَّهُ إِلَّا بُشْرَىٰ لَكُمْ وَلِتَطْمَئِنَّ قُلُوبُكُم بِهِۦ ۗ وَمَا ٱلنَّصْرُ إِلَّا مِنْ عِندِ ٱللَّهِ ٱلْعَزِيزِ ٱلْحَكِيمِ. ﴿126﴾
127 ಇದು (ಈ ಸಹಾಯವು ಬಂದಿರುವುದು) ಅಲ್ಲಾಹು ಸತ್ಯನಿಷೇಧಿಗಳ ಒಂದು ಭಾಗವನ್ನು ಕತ್ತರಿಸುವುದಕ್ಕಾಗಿ ಅಥವಾ ಅವರನ್ನು ಸಂಪೂರ್ಣ ದಮನ ಮಾಡುವುದಕ್ಕಾಗಿ. ಅವರೆಲ್ಲರೂ ಹತಾಶರಾಗಿ ಮರಳಿ ಹೋಗಲೆಂದು. لِيَقْطَعَ طَرَفًۭا مِّنَ ٱلَّذِينَ كَفَرُوٓا۟ أَوْ يَكْبِتَهُمْ فَيَنقَلِبُوا۟ خَآئِبِينَ. ﴿127﴾
128 (ಓ ಪ್ರವಾದಿಯವರೇ!) ತೀರ್ಮಾನದಲ್ಲಿ ನಿಮಗೆ ಯಾವುದೇ ಅಧಿಕಾರವಿಲ್ಲ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ, ನಿಶ್ಚಯವಾಗಿಯೂ ಅವರು ಅಕ್ರಮಿಗಳಾಗಿದ್ದಾರೆ.[1]
[1] ಉಹುದ್ ಯುದ್ಧದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದಿನ ಹಲ್ಲು ತುಂಡಾಗಿ ಮುಖಕ್ಕೆ ಗಾಯವಾದಾಗ ಅವರು ಬೇಸರದಿಂದ ಹೇಳಿದರು: “ತಮ್ಮ ಪ್ರವಾದಿಯನ್ನು ಗಾಯಗೊಳಿಸಿದ ಜನರು ಯಶಸ್ವಿಯಾಗುವುದಾದರೂ ಹೇಗೆ?” ಆಗ ಅಲ್ಲಾಹು ಅವರ ಮಾತನ್ನು ತಿದ್ದುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು. ಅಂದರೆ ಯಾರಿಗೆ ಸನ್ಮಾರ್ಗ ತೋರಿಸಬೇಕು ಯಾರಿಗೆ ತೋರಿಸಬಾರದು? ಯಾರನ್ನು ಶಿಕ್ಷೆ ನೀಡಬೇಕು ಮತ್ತು ಯಾರಿಗೆ ಕ್ಷಮೆ ನೀಡಬೇಕು? ಎಂಬುದನ್ನು ಅಲ್ಲಾಹು ತೀರ್ಮಾನಿಸುತ್ತಾನೆ. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ತೀರ್ಮಾನಿಸುವ ಯಾವುದೇ ಹಕ್ಕಿಲ್ಲ.
لَيْسَ لَكَ مِنَ ٱلْأَمْرِ شَىْءٌ أَوْ يَتُوبَ عَلَيْهِمْ أَوْ يُعَذِّبَهُمْ فَإِنَّهُمْ ظَٰلِمُونَ. ﴿128﴾
129 ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳೂ ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. وَلِلَّهِ مَا فِى ٱلسَّمَٰوَٰتِ وَمَا فِى ٱلْأَرْضِ ۚ يَغْفِرُ لِمَن يَشَآءُ وَيُعَذِّبُ مَن يَشَآءُ ۚ وَٱللَّهُ غَفُورٌۭ رَّحِيمٌۭ. ﴿129﴾
130 ಓ ಸತ್ಯವಿಶ್ವಾಸಿಗಳೇ! ನೀವು ಇಮ್ಮಡಿ ಮುಮ್ಮಡಿಯಾಗಿ ಬಡ್ಡಿಯನ್ನು ತಿನ್ನಬೇಡಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ. يَٰٓأَيُّهَا ٱلَّذِينَ ءَامَنُوا۟ لَا تَأْكُلُوا۟ ٱلرِّبَوٰٓا۟ أَضْعَٰفًۭا مُّضَٰعَفَةًۭ ۖ وَٱتَّقُوا۟ ٱللَّهَ لَعَلَّكُمْ تُفْلِحُونَ. ﴿130﴾
131 ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾದ ನರಕಾಗ್ನಿಯನ್ನು ಭಯಪಡಿರಿ. وَٱتَّقُوا۟ ٱلنَّارَ ٱلَّتِىٓ أُعِدَّتْ لِلْكَٰفِرِينَ. ﴿131﴾
132 ಅಲ್ಲಾಹನ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ. وَأَطِيعُوا۟ ٱللَّهَ وَٱلرَّسُولَ لَعَلَّكُمْ تُرْحَمُونَ. ﴿132﴾
133 ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಗಾಗಿ ಮತ್ತು ಭೂಮ್ಯಾಕಾಶಗಳಷ್ಟು ವಿಶಾಲವಾದ ಸ್ವರ್ಗಕ್ಕಾಗಿ ತ್ವರೆಯಿಂದ ಮುನ್ನುಗ್ಗಿರಿ. ಅದನ್ನು ದೇವಭಯವುಳ್ಳವರಿಗಾಗಿ ಸಿದ್ಧಗೊಳಿಸಲಾಗಿದೆ. ۞ وَسَارِعُوٓا۟ إِلَىٰ مَغْفِرَةٍۢ مِّن رَّبِّكُمْ وَجَنَّةٍ عَرْضُهَا ٱلسَّمَٰوَٰتُ وَٱلْأَرْضُ أُعِدَّتْ لِلْمُتَّقِينَ. ﴿133﴾
134 ಅವರು (ದೇವಭಯವುಳ್ಳವರು) ಯಾರೆಂದರೆ, ಸುಖದಲ್ಲೂ ಕಷ್ಟದಲ್ಲೂ ದಾನ ಮಾಡುವವರು, ಕೋಪವನ್ನು ನಿಗ್ರಹಿಸುವವರು ಮತ್ತು ಜನರಿಗೆ ಮನ್ನಿಸುವವರು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ. ٱلَّذِينَ يُنفِقُونَ فِى ٱلسَّرَّآءِ وَٱلضَّرَّآءِ وَٱلْكَٰظِمِينَ ٱلْغَيْظَ وَٱلْعَافِينَ عَنِ ٱلنَّاسِ ۗ وَٱللَّهُ يُحِبُّ ٱلْمُحْسِنِينَ. ﴿134﴾
135 ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು? ಅವರು ತಿಳಿದೂ ಸಹ (ಕೆಟ್ಟ) ಕಾರ್ಯಗಳಲ್ಲಿ ಹಟ ಹಿಡಿದು ಮುಂದುವರಿಯುವುದಿಲ್ಲ. وَٱلَّذِينَ إِذَا فَعَلُوا۟ فَٰحِشَةً أَوْ ظَلَمُوٓا۟ أَنفُسَهُمْ ذَكَرُوا۟ ٱللَّهَ فَٱسْتَغْفَرُوا۟ لِذُنُوبِهِمْ وَمَن يَغْفِرُ ٱلذُّنُوبَ إِلَّا ٱللَّهُ وَلَمْ يُصِرُّوا۟ عَلَىٰ مَا فَعَلُوا۟ وَهُمْ يَعْلَمُونَ. ﴿135﴾
136 ಅವರಿಗಿರುವ ಪ್ರತಿಫಲವು ಅವರ ಪರಿಪಾಲಕನ ಕಡೆಯ ಕ್ಷಮೆ ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಸತ್ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲವು ಬಹಳ ಉತ್ತಮವಾಗಿದೆ! أُو۟لَٰٓئِكَ جَزَآؤُهُم مَّغْفِرَةٌۭ مِّن رَّبِّهِمْ وَجَنَّٰتٌۭ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَا ۚ وَنِعْمَ أَجْرُ ٱلْعَٰمِلِينَ. ﴿136﴾
137 ನಿಮಗಿಂತ ಮುಂಚೆಯೂ ಇಂತಹ ಘಟನೆಗಳು ಗತಿಸಿ ಹೋಗಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿರಿ.[1]
[1] ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ಲಾ ಬಿನ್ ಜುಬೈರ್ ರವರ ನಾಯಕತ್ವದಲ್ಲಿ ಬಿಲ್ಲುಗಾರರ ಸೇನೆಯನ್ನು ಒಂದು ಗುಡ್ಡದ ಮೇಲೆ ನಿಲ್ಲಿಸಿದ್ದರು. ಯುದ್ಧದಲ್ಲಿ ಗೆದ್ದರೂ ಸೋತರೂ ನೀವು ಗುಡ್ಡದಿಂದ ಇಳಿದು ಬರಬಾರದೆಂದು ಅವರಿಗೆ ಕಟ್ಟಾಜ್ಞೆ ನೀಡಿದ್ದರು. ಆದರೆ ಯುದ್ಧದ ಆರಂಭದಲ್ಲಿ ಮುಸಲ್ಮಾನರು ವೈರಿಗಳನ್ನು ಹಿಮ್ಮೆಟ್ಟಿಸುವದರಲ್ಲಿ ಯಶಸ್ವಿಯಾಗಿ ಅವರು ಬಿಟ್ಟು ಹೋದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಲು ತೊಡಗಿದಾಗ ಗುಡ್ಡ ಮೇಲಿದ್ದ ಬಿಲ್ಲುಗಾರರಲ್ಲಿ ಭಿನ್ನಮತ ಉಂಟಾಯಿತು. ಕೆಲವರು ಹೇಳಿದರು: ಯುದ್ಧದಲ್ಲಿ ಗೆಲ್ಲುವವರೆಗೆ ಮಾತ್ರ ಇಲ್ಲಿ ನಿಲ್ಲಲು ನಮಗೆ ಆಜ್ಞಾಪಿಸಲಾಗಿದೆ. ನಾವು ಈಗ ಗೆದ್ದಿದ್ದೇವೆ ಮತ್ತು ವೈರಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಆದ್ದರಿಂದ ನಾವು ಇನ್ನು ಇಲ್ಲಿ ನಿಲ್ಲಬೇಕಾಗಿಲ್ಲ. ಕೇವಲ ಹತ್ತು ಜನರ ಹೊರತು ಉಳಿದವರೆಲ್ಲರೂ ಗುಡ್ಡದಿಂದ ಇಳಿದು ಹೋದರು. ಗುಡ್ಡದಲ್ಲಿ ಬಿಲ್ಲುಗಾರರು ಇಲ್ಲದಿರುವುದನ್ನು ನೋಡಿದ ವೈರಿಗಳನ್ನು ಆ ಅವಕಾಶವನ್ನು ಚೆನ್ನಾಗಿ ಬಳಸಿ ಅಶ್ವಸೇನೆಯ ಮೂಲಕ ಹಿಂಬದಿಯಿಂದ ಆಕ್ರಮಣ ಮಾಡಿದರು. ಈ ಅನಿರೀಕ್ಷಿತ ಆಕ್ರಮಣದಿಂದ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಈ ವಚನದಲ್ಲಿ ಹೇಳುವುದೇನೆಂದರೆ, ಸತ್ಯನಿಷೇಧಿಗಳಿಗೆ ಕೆಲವೊಮ್ಮೆ ಗೆಲುವು ಸಿಗಬಹುದು. ಆದರೆ ಅದರಿಂದ ನೀವು ಧೃತಿಗೆಡಬಾರದು. ಏಕೆಂದರೆ ಅಂತಿಮ ವಿಜಯವು ಸತ್ಯವಿಶ್ವಾಸಿಗಳಿಗೇ ಆಗಿದೆ.
قَدْ خَلَتْ مِن قَبْلِكُمْ سُنَنٌۭ فَسِيرُوا۟ فِى ٱلْأَرْضِ فَٱنظُرُوا۟ كَيْفَ كَانَ عَٰقِبَةُ ٱلْمُكَذِّبِينَ. ﴿137﴾
138 ಇದು (ಕುರ್‌ಆನ್) ಮನುಷ್ಯರಿಗೆ ಒಂದು ಸ್ಪಷ್ಟ ವಿವರಣೆಯಾಗಿದೆ. ದೇವಭಯವುಳ್ಳವರಿಗೆ ಸನ್ಮಾರ್ಗ ಮತ್ತು ಹಿತೋಪದೇಶವಾಗಿದೆ. هَٰذَا بَيَانٌۭ لِّلنَّاسِ وَهُدًۭى وَمَوْعِظَةٌۭ لِّلْمُتَّقِينَ. ﴿138﴾
139 ನೀವು ದುರ್ಬಲರಾಗಬೇಡಿ ಮತ್ತು ದುಃಖಿಸಬೇಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನೀವೇ ಅತಿಶ್ರೇಷ್ಠರು. وَلَا تَهِنُوا۟ وَلَا تَحْزَنُوا۟ وَأَنتُمُ ٱلْأَعْلَوْنَ إِن كُنتُم مُّؤْمِنِينَ. ﴿139﴾
140 ನಿಮಗೆ ಗಾಯಗಳಾಗಿದ್ದರೆ, ಆ ಜನರಿಗೂ (ಎದುರಾಳಿಗಳಿಗೂ) ಗಾಯಗಳಾಗಿದ್ದವು. ಸತ್ಯವಿಶ್ವಾಸಿಗಳು ಯಾರೆಂದು ಅಲ್ಲಾಹು ತಿಳಿಯುವುದಕ್ಕಾಗಿ ಮತ್ತು ನಿಮ್ಮಲ್ಲಿ ಕೆಲವರನ್ನು ಅವನು ಹುತಾತ್ಮರಾಗಿ ಸ್ವೀಕರಿಸುವುದಕ್ಕಾಗಿ, ನಾವು ಆ ದಿನಗಳನ್ನು (ಸೋಲು-ಗೆಲುವುಗಳನ್ನು) ಜನರ ನಡುವೆ ಬದಲಾಯಿಸುತ್ತೇವೆ. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ. إِن يَمْسَسْكُمْ قَرْحٌۭ فَقَدْ مَسَّ ٱلْقَوْمَ قَرْحٌۭ مِّثْلُهُۥ ۚ وَتِلْكَ ٱلْأَيَّامُ نُدَاوِلُهَا بَيْنَ ٱلنَّاسِ وَلِيَعْلَمَ ٱللَّهُ ٱلَّذِينَ ءَامَنُوا۟ وَيَتَّخِذَ مِنكُمْ شُهَدَآءَ ۗ وَٱللَّهُ لَا يُحِبُّ ٱلظَّٰلِمِينَ. ﴿140﴾
141 ಅಲ್ಲಾಹು ಸತ್ಯವಿಶ್ವಾಸಿಗಳನ್ನು ಶುದ್ಧೀಕರಿಸುವುದಕ್ಕಾಗಿ ಮತ್ತು ಸತ್ಯನಿಷೇಧಿಗಳನ್ನು ನಾಶ ಮಾಡುವುದಕ್ಕಾಗಿ. وَلِيُمَحِّصَ ٱللَّهُ ٱلَّذِينَ ءَامَنُوا۟ وَيَمْحَقَ ٱلْكَٰفِرِينَ. ﴿141﴾
142 ನಿಮ್ಮಲ್ಲಿ ಯುದ್ಧ ಮಾಡಿದವರು ಯಾರು ಮತ್ತು ಸ್ಥೈರ್ಯವಂತರು ಯಾರೆಂದು ಅಲ್ಲಾಹು ತಿಳಿಯದೆ (ನಿರಾಯಾಸವಾಗಿ) ಸ್ವರ್ಗಕ್ಕೆ ಹೋಗಬಹುದೆಂದು ನೀವು ಭಾವಿಸಿದ್ದೀರಾ? أَمْ حَسِبْتُمْ أَن تَدْخُلُوا۟ ٱلْجَنَّةَ وَلَمَّا يَعْلَمِ ٱللَّهُ ٱلَّذِينَ جَٰهَدُوا۟ مِنكُمْ وَيَعْلَمَ ٱلصَّٰبِرِينَ. ﴿142﴾
143 ನೀವು ಸಾವನ್ನು ನೇರವಾಗಿ ನೋಡುವುದಕ್ಕೆ ಮೊದಲು ಅದನ್ನು (ಹುತಾತ್ಮತೆಯನ್ನು) ಬಯಸುತ್ತಿದ್ದಿರಿ. ಈಗ ನೀವು ಅದನ್ನು ನಿಮ್ಮ ಕಣ್ಣುಗಳ ಮುಂದೆ ಕಣ್ಣಾರೆ ನೋಡಿದ್ದೀರಿ. وَلَقَدْ كُنتُمْ تَمَنَّوْنَ ٱلْمَوْتَ مِن قَبْلِ أَن تَلْقَوْهُ فَقَدْ رَأَيْتُمُوهُ وَأَنتُمْ تَنظُرُونَ. ﴿143﴾
144 ಮುಹಮ್ಮದ್ ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರುಗಳು ಬಂದು ಹೋಗಿದ್ದಾರೆ. ಅವರೇನಾದರೂ ಅಸುನೀಗಿದರೆ ಅಥವಾ ಕೊಲೆಯಾದರೆ, ನೀವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳುವಿರಾ? ಯಾರು ಹಿಂದಕ್ಕೆ ಮರಳುತ್ತಾನೋ ಅವನು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುವನು.[1]
[1] ಉಹುದ್ ಯುದ್ಧದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಲೆಯಾದರೆಂದು ವೈರಿಗಳನ್ನು ವದಂತಿ ಹಬ್ಬಿಸಿದರು. ಮುಸ್ಲಿಮರಲ್ಲಿ ಕೆಲವರು ಈ ವದಂತಿಯನ್ನು ನಂಬಿ ಸಂಪೂರ್ಣ ನಿರಾಶರಾಗಿ ಯುದ್ಧದಿಂದ ಹಿಂದೆ ಸರಿದರು. ಇವರ ಬಗ್ಗೆ ಈ ವಚನವು ಅವತೀರ್ಣವಾಯಿತು. ಪ್ರವಾದಿಗಳು ಮರಣಹೊಂದುವುದು ಅಥವಾ ವೈರಿಗಳು ಪ್ರವಾದಿಗಳನ್ನು ಕೊಲೆ ಮಾಡುವುದು ಹೊಸದೇನಲ್ಲ. ಹಿಂದೆಯೂ ಅನೇಕ ಪ್ರವಾದಿಗಳು ವೈರಿಗಳ ಕೈಯಿಂದ ಕೊಲೆಯಾಗಿದ್ದಾರೆ. ಅದೇ ರೀತಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಸುನೀಗಿದರೆ ಅಥವಾ ಕೊಲೆಯಾದರೆ ನೀವು ನಿಮ್ಮ ಧರ್ಮದಿಂದ ಹಿಂದೆ ಸರಿಯುತ್ತೀರಾ? ಯಾರಾದರೂ ಹಿಂದೆ ಸರಿದರೆ ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ.
وَمَا مُحَمَّدٌ إِلَّا رَسُولٌۭ قَدْ خَلَتْ مِن قَبْلِهِ ٱلرُّسُلُ ۚ أَفَإِي۟ن مَّاتَ أَوْ قُتِلَ ٱنقَلَبْتُمْ عَلَىٰٓ أَعْقَٰبِكُمْ ۚ وَمَن يَنقَلِبْ عَلَىٰ عَقِبَيْهِ فَلَن يَضُرَّ ٱللَّهَ شَيْـًۭٔا ۗ وَسَيَجْزِى ٱللَّهُ ٱلشَّٰكِرِينَ. ﴿144﴾
145 ಅಲ್ಲಾಹನ ಅಪ್ಪಣೆಯಿಲ್ಲದೆ ಯಾವುದೇ ವ್ಯಕ್ತಿಗೂ ಸಾಯಲು ಸಾಧ್ಯವಿಲ್ಲ. ಅದು ನಿಶ್ಚಯಿಸಲಾದ ಒಂದು ಅವಧಿಯಾಗಿದೆ. ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದನ್ನು ನೀಡುತ್ತೇವೆ. ಯಾರು ಪರಲೋಕದ ಪ್ರತಿಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದನ್ನು ನೀಡುತ್ತೇವೆ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುತ್ತಾನೆ. وَمَا كَانَ لِنَفْسٍ أَن تَمُوتَ إِلَّا بِإِذْنِ ٱللَّهِ كِتَٰبًۭا مُّؤَجَّلًۭا ۗ وَمَن يُرِدْ ثَوَابَ ٱلدُّنْيَا نُؤْتِهِۦ مِنْهَا وَمَن يُرِدْ ثَوَابَ ٱلْءَاخِرَةِ نُؤْتِهِۦ مِنْهَا ۚ وَسَنَجْزِى ٱلشَّٰكِرِينَ. ﴿145﴾
146 ಎಷ್ಟೋ ಪ್ರವಾದಿಗಳಿಗೆ ಜೊತೆಯಾಗಿ ನಿಂತು ಅಲ್ಲಾಹನ ಎಷ್ಟೋ ದಾಸರು ಯುದ್ಧ ಮಾಡಿದ್ದಾರೆ. ಅಲ್ಲಾಹನ ಮಾರ್ಗದಲ್ಲಿ ಎದುರಿಸಬೇಕಾಗಿ ಬಂದ ತೊಂದರೆಗಳಿಂದ ಅವರು ಧೃತಿಗೆಡಲಿಲ್ಲ, ದುರ್ಬಲರಾಗಲಿಲ್ಲ ಮತ್ತು ಮಣಿಯಲಿಲ್ಲ. ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ. وَكَأَيِّن مِّن نَّبِىٍّۢ قَٰتَلَ مَعَهُۥ رِبِّيُّونَ كَثِيرٌۭ فَمَا وَهَنُوا۟ لِمَآ أَصَابَهُمْ فِى سَبِيلِ ٱللَّهِ وَمَا ضَعُفُوا۟ وَمَا ٱسْتَكَانُوا۟ ۗ وَٱللَّهُ يُحِبُّ ٱلصَّٰبِرِينَ. ﴿146﴾
147 ಅವರ ಮಾತುಗಳು ಇದಲ್ಲದೆ ಬೇರೇನೂ ಆಗಿರಲಿಲ್ಲ: “ಓ ನಮ್ಮ ಪರಿಪಾಲಕನೇ! ನಮ್ಮ ಪಾಪಗಳನ್ನು ಮತ್ತು ನಮ್ಮ ಕಾರ್ಯಗಳಲ್ಲಿ ಸಂಭವಿಸಿದ ಅತಿರೇಕಗಳನ್ನು ಕ್ಷಮಿಸು, ನಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು.” وَمَا كَانَ قَوْلَهُمْ إِلَّآ أَن قَالُوا۟ رَبَّنَا ٱغْفِرْ لَنَا ذُنُوبَنَا وَإِسْرَافَنَا فِىٓ أَمْرِنَا وَثَبِّتْ أَقْدَامَنَا وَٱنصُرْنَا عَلَى ٱلْقَوْمِ ٱلْكَٰفِرِينَ. ﴿147﴾
148 ಆದ್ದರಿಂದ ಅಲ್ಲಾಹು ಅವರಿಗೆ ಇಹಲೋಕದ ಪ್ರತಿಫಲವನ್ನು ಮತ್ತು ಪರಲೋಕದ ಅತ್ಯುತ್ತಮ ಪ್ರತಿಫಲವನ್ನು ನೀಡಿದನು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ. فَـَٔاتَىٰهُمُ ٱللَّهُ ثَوَابَ ٱلدُّنْيَا وَحُسْنَ ثَوَابِ ٱلْءَاخِرَةِ ۗ وَٱللَّهُ يُحِبُّ ٱلْمُحْسِنِينَ. ﴿148﴾
149 ಓ ಸತ್ಯವಿಶ್ವಾಸಿಗಳೇ! ನೀವು ಸತ್ಯನಿಷೇಧಿಗಳನ್ನು ಅನುಸರಿಸಿದರೆ, ಅವರು ನಿಮ್ಮನ್ನು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿಸುತ್ತಾರೆ. ನಂತರ ನೀವು ನಷ್ಟಹೊಂದಿದವರಾಗಿ ಬಿಡುವಿರಿ. يَٰٓأَيُّهَا ٱلَّذِينَ ءَامَنُوٓا۟ إِن تُطِيعُوا۟ ٱلَّذِينَ كَفَرُوا۟ يَرُدُّوكُمْ عَلَىٰٓ أَعْقَٰبِكُمْ فَتَنقَلِبُوا۟ خَٰسِرِينَ. ﴿149﴾
150 ಅಲ್ಲ, ವಾಸ್ತವವಾಗಿ ಅಲ್ಲಾಹನೇ ನಿಮ್ಮ ರಕ್ಷಕನು. ಅವನು ಸಹಾಯ ಮಾಡುವವರಲ್ಲಿ ಅತ್ಯುತ್ತಮನು. بَلِ ٱللَّهُ مَوْلَىٰكُمْ ۖ وَهُوَ خَيْرُ ٱلنَّٰصِرِينَ. ﴿150﴾
151 ಅಲ್ಲಾಹು ಯಾವುದೇ ಸಾಕ್ಷ್ಯಾಧಾರಗಳನ್ನು ಅವತೀರ್ಣಗೊಳಿಸದ ವಸ್ತುಗಳನ್ನು ಅವನಿಗೆ ಸಹಭಾಗಿಗಳನ್ನಾಗಿ ಮಾಡಿದ ಕಾರಣ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸುವೆವು. ಅವರ ವಾಸಸ್ಥಳವು ನರಕವಾಗಿದೆ. ಅಕ್ರಮಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ! سَنُلْقِى فِى قُلُوبِ ٱلَّذِينَ كَفَرُوا۟ ٱلرُّعْبَ بِمَآ أَشْرَكُوا۟ بِٱللَّهِ مَا لَمْ يُنَزِّلْ بِهِۦ سُلْطَٰنًۭا ۖ وَمَأْوَىٰهُمُ ٱلنَّارُ ۚ وَبِئْسَ مَثْوَى ٱلظَّٰلِمِينَ. ﴿151﴾
152 ಅಲ್ಲಾಹನ ಅಪ್ಪಣೆಯಿಂದ ನೀವು ಅವರನ್ನು ಕೊಲ್ಲುತ್ತಿರುವಾಗ ಅಲ್ಲಾಹು ನಿಮಗೆ ನೀಡಿದ ವಾಗ್ದಾನವನ್ನು ಖಂಡಿತ ನೆರವೇರಿಸಿದ್ದನು. ಎಲ್ಲಿಯವರೆಗೆಂದರೆ, ನೀವು ನಿಮ್ಮ ಕೆಲಸದಲ್ಲಿ ವಿಫಲರಾಗಿ ಪರಸ್ಪರ ತರ್ಕಿಸುವ ಮತ್ತು ನೀವು ಇಷ್ಟಪಡುವುದನ್ನು ಅಲ್ಲಾಹು ನಿಮಗೆ ತೋರಿಸಿದ ಬಳಿಕವೂ ನೀವು ಆಜ್ಞೋಲ್ಲಂಘನೆ ಮಾಡುವ ತನಕ. ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಇತರ ಕೆಲವರು ಪರಲೋಕವನ್ನು ಬಯಸುತ್ತಿದ್ದರು. ನಂತರ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಅಲ್ಲಾಹು ನಿಮ್ಮನ್ನು ಅವರಿಂದ (ವೈರಿಗಳಿಂದ) ತಿರುಗಿಸಿದನು. ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದಾರ್ಯವುಳ್ಳವನಾಗಿದ್ದಾನೆ. وَلَقَدْ صَدَقَكُمُ ٱللَّهُ وَعْدَهُۥٓ إِذْ تَحُسُّونَهُم بِإِذْنِهِۦ ۖ حَتَّىٰٓ إِذَا فَشِلْتُمْ وَتَنَٰزَعْتُمْ فِى ٱلْأَمْرِ وَعَصَيْتُم مِّنۢ بَعْدِ مَآ أَرَىٰكُم مَّا تُحِبُّونَ ۚ مِنكُم مَّن يُرِيدُ ٱلدُّنْيَا وَمِنكُم مَّن يُرِيدُ ٱلْءَاخِرَةَ ۚ ثُمَّ صَرَفَكُمْ عَنْهُمْ لِيَبْتَلِيَكُمْ ۖ وَلَقَدْ عَفَا عَنكُمْ ۗ وَٱللَّهُ ذُو فَضْلٍ عَلَى ٱلْمُؤْمِنِينَ. ﴿152﴾
153 ನೀವು (ಪರ್ವತವನ್ನು) ಏರುತ್ತಾ ಯಾರನ್ನೂ ತಿರುಗಿ ನೋಡದೆ (ಪಲಾಯನ ಮಾಡುತ್ತಿದ್ದ) ಸಂದರ್ಭ. ಸಂದೇಶವಾಹಕರು ಹಿಂದಿನಿಂದ ನಿಮ್ಮನ್ನು ಕೂಗಿ ಕರೆಯುತ್ತಿದ್ದರು. ಆಗ ಅಲ್ಲಾಹು ನಿಮಗೆ ಬಳಲಿಕೆಯ ಮೇಲೆ ಬಳಲಿಕೆಯನ್ನು ಬಳುವಳಿಯಾಗಿ ನೀಡಿದನು. ನಿಮಗೆ ಕೈತಪ್ಪಿ ಹೋದ ವಿಜಯದ ಬಗ್ಗೆ ಮತ್ತು ನಿಮಗೆ ಸಂಭವಿಸಿದ ಅನಾಹುತದ ಬಗ್ಗೆ ನೀವು ಸಂಕಟಪಡದಿರುವುದಕ್ಕಾಗಿ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ಸೂಕ್ಷ್ಮವಾಗಿ ತಿಳಿಯುತ್ತಾನೆ. ۞ إِذْ تُصْعِدُونَ وَلَا تَلْوُۥنَ عَلَىٰٓ أَحَدٍۢ وَٱلرَّسُولُ يَدْعُوكُمْ فِىٓ أُخْرَىٰكُمْ فَأَثَٰبَكُمْ غَمًّۢا بِغَمٍّۢ لِّكَيْلَا تَحْزَنُوا۟ عَلَىٰ مَا فَاتَكُمْ وَلَا مَآ أَصَٰبَكُمْ ۗ وَٱللَّهُ خَبِيرٌۢ بِمَا تَعْمَلُونَ. ﴿153﴾
154 ಅನಂತರ, ಆ ಬಳಲಿಕೆಯ ನಂತರ ಅಲ್ಲಾಹು ನಿಮಗೆ ನಿರ್ಭಯತೆಯ ತೂಕಡಿಕೆಯನ್ನು ನೀಡಿದನು. ಅದು ನಿಮ್ಮಲ್ಲಿ ಒಂದು ಗುಂಪನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ಸ್ವಯಂ ಅವರ ಬಗ್ಗೆಯೇ ಚಿಂತಿತರಾಗಿದ್ದರು. ಅವರು ಅಲ್ಲಾಹನ ಬಗ್ಗೆ ಸತ್ಯಕ್ಕೆ ದೂರವಾದ ಅಜ್ಞಾನಕಾಲದ ಭಾವನೆಗಳನ್ನು ಇಟ್ಟುಕೊಂಡಿದ್ದರು.[1] ಅವರು ಕೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೆ ಯಾವುದೇ ಪಾಲಿಲ್ಲವೇ?” ಹೇಳಿರಿ: “ನಿಶ್ಚಯವಾಗಿಯೂ ಆಜ್ಞೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿದೆ.” ನಿಮ್ಮ ಮುಂದೆ ಬಹಿರಂಗಪಡಿಸದ ಬೇರೇನೋ ವಿಚಾರಗಳನ್ನು ಅವರು ತಮ್ಮ ಮನದಲ್ಲಿ ಬಚ್ಚಿಡುತ್ತಿದ್ದರು. ಅವರು ಹೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೇನಾದರೂ ಪಾಲಿರುತ್ತಿದ್ದರೆ ನಾವಿಲ್ಲಿ ಹತ್ಯೆಯಾಗಿ ಬೀಳುತ್ತಿರಲಿಲ್ಲ.” ಹೇಳಿರಿ: “ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಕೊಲೆಯಾಗಬೇಕೆಂಬ ವಿಧಿಯಿರುವವರು ಅವರು ಕೊಲೆಯಾಗಿ ಬೀಳುವ ಸ್ಥಳಗಳಿಗೆ ಸ್ವಯಂ ಹೊರಟು ಬರುತ್ತಿದ್ದರು.” ಇದು ನಿಮ್ಮ ಎದೆಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವುದಕ್ಕಾಗಿದೆ ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವುದಕ್ಕಾಗಿದೆ. ಅಲ್ಲಾಹು ಎದೆಗಳೊಳಗಿರುವುದನ್ನು ತಿಳಿಯುತ್ತಾನೆ.
[1] ಉಹುದ್ ಯುದ್ಧದ ನಂತರ ಅಲ್ಲಾಹು ಮುಸಲ್ಮಾನರ ಮೇಲೆ ದಯೆ ತೋರಿ ಅವರಿಗೆ ಸುಖವಾದ ನಿದ್ದೆಯನ್ನು ಕರುಣಿಸಿದನು. ಇನ್ನೊಂದು ಕಡೆ ಕಪಟವಿಶ್ವಾಸಿಗಳು ಅವರ ಬಗ್ಗೆಯೇ ಚಿಂತಿತರಾಗಿದ್ದರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ನಿರ್ಣಯಗಳು ಸರಿಯಿಲ್ಲ; ಅವರು ಯಾವ ಧರ್ಮದ ಕಡೆಗೆ ಜನರನ್ನು ಕರೆಯುತ್ತಿದ್ದಾರೋ ಆ ಧರ್ಮಕ್ಕೆ ಭವಿಷ್ಯವಿಲ್ಲ. ಅವರಿಗೆ ಅಲ್ಲಾಹನ ಕಡೆಯ ಸಹಾಯವಿಲ್ಲ ಎಂದು ಅವರು ಹೇಳುತ್ತಿದ್ದರು.
ثُمَّ أَنزَلَ عَلَيْكُم مِّنۢ بَعْدِ ٱلْغَمِّ أَمَنَةًۭ نُّعَاسًۭا يَغْشَىٰ طَآئِفَةًۭ مِّنكُمْ ۖ وَطَآئِفَةٌۭ قَدْ أَهَمَّتْهُمْ أَنفُسُهُمْ يَظُنُّونَ بِٱللَّهِ غَيْرَ ٱلْحَقِّ ظَنَّ ٱلْجَٰهِلِيَّةِ ۖ يَقُولُونَ هَل لَّنَا مِنَ ٱلْأَمْرِ مِن شَىْءٍۢ ۗ قُلْ إِنَّ ٱلْأَمْرَ كُلَّهُۥ لِلَّهِ ۗ يُخْفُونَ فِىٓ أَنفُسِهِم مَّا لَا يُبْدُونَ لَكَ ۖ يَقُولُونَ لَوْ كَانَ لَنَا مِنَ ٱلْأَمْرِ شَىْءٌۭ مَّا قُتِلْنَا هَٰهُنَا ۗ قُل لَّوْ كُنتُمْ فِى بُيُوتِكُمْ لَبَرَزَ ٱلَّذِينَ كُتِبَ عَلَيْهِمُ ٱلْقَتْلُ إِلَىٰ مَضَاجِعِهِمْ ۖ وَلِيَبْتَلِىَ ٱللَّهُ مَا فِى صُدُورِكُمْ وَلِيُمَحِّصَ مَا فِى قُلُوبِكُمْ ۗ وَٱللَّهُ عَلِيمٌۢ بِذَاتِ ٱلصُّدُورِ. ﴿154﴾
155 (ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮ್ಮ ಪೈಕಿ ಬೆನ್ನು ತೋರಿಸಿ ಓಡಿದವರು ಯಾರೋ—ಅವರು ಮಾಡಿದ ಕೆಲವು ದುಷ್ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ಜಾರಿಕೊಳ್ಳುವಂತೆ ಮಾಡಿದ್ದನು. ಅಲ್ಲಾಹು ಅವರನ್ನು ಕ್ಷಮಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ. إِنَّ ٱلَّذِينَ تَوَلَّوْا۟ مِنكُمْ يَوْمَ ٱلْتَقَى ٱلْجَمْعَانِ إِنَّمَا ٱسْتَزَلَّهُمُ ٱلشَّيْطَٰنُ بِبَعْضِ مَا كَسَبُوا۟ ۖ وَلَقَدْ عَفَا ٱللَّهُ عَنْهُمْ ۗ إِنَّ ٱللَّهَ غَفُورٌ حَلِيمٌۭ. ﴿155﴾
156 ಓ ಸತ್ಯವಿಶ್ವಾಸಿಗಳೇ! ಸತ್ಯವನ್ನು ನಿಷೇಧಿಸಿದವರು ಮತ್ತು ತಮ್ಮ ಸಹೋದರರು ಪ್ರಯಾಣ ಹೊರಟಾಗ ಅಥವಾ ಯುದ್ಧಕ್ಕೆ ಹೊರಟಾಗ, “ಇವರು ನಮ್ಮ ಬಳಿಯಿರುತ್ತಿದ್ದರೆ ಸಾಯುತ್ತಿರಲಿಲ್ಲ ಮತ್ತು ಕೊಲೆಯಾಗುತ್ತಿರಲಿಲ್ಲ” ಎಂದು ಹೇಳುವವರಂತೆ ನೀವಾಗಬೇಡಿ. ಈ ಕಲ್ಪನೆಯನ್ನು ಅಲ್ಲಾಹು ಅವರ ಹೃದಯಗಳಲ್ಲಿನ ವ್ಯಥೆಗೆ ಕಾರಣವಾಗಿ ಮಾಡುತ್ತಾನೆ. ಅಲ್ಲಾಹನೇ ಜೀವ ಮತ್ತು ಮರಣವನ್ನು ನೀಡುವವನು. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ. يَٰٓأَيُّهَا ٱلَّذِينَ ءَامَنُوا۟ لَا تَكُونُوا۟ كَٱلَّذِينَ كَفَرُوا۟ وَقَالُوا۟ لِإِخْوَٰنِهِمْ إِذَا ضَرَبُوا۟ فِى ٱلْأَرْضِ أَوْ كَانُوا۟ غُزًّۭى لَّوْ كَانُوا۟ عِندَنَا مَا مَاتُوا۟ وَمَا قُتِلُوا۟ لِيَجْعَلَ ٱللَّهُ ذَٰلِكَ حَسْرَةًۭ فِى قُلُوبِهِمْ ۗ وَٱللَّهُ يُحْىِۦ وَيُمِيتُ ۗ وَٱللَّهُ بِمَا تَعْمَلُونَ بَصِيرٌۭ. ﴿156﴾
157 ನೀವು ಅಲ್ಲಾಹನ ಮಾರ್ಗದಲ್ಲಿ ಕೊಲೆಯಾದರೆ ಅಥವಾ ಸಾವನ್ನಪ್ಪಿದರೆ ಅಲ್ಲಾಹನ ಕಡೆಯ ಕ್ಷಮೆ ಮತ್ತು ದಯೆಯು ಅವರು ಸಂಗ್ರಹಿಸಿಡುವ ಎಲ್ಲಾ ವಸ್ತುಗಳಿಗಿಂತಲೂ ಶ್ರೇಷ್ಠವಾಗಿದೆ. وَلَئِن قُتِلْتُمْ فِى سَبِيلِ ٱللَّهِ أَوْ مُتُّمْ لَمَغْفِرَةٌۭ مِّنَ ٱللَّهِ وَرَحْمَةٌ خَيْرٌۭ مِّمَّا يَجْمَعُونَ. ﴿157﴾
158 ನೀವು ಕೊಲೆಯಾದರೂ ಅಥವಾ ಸಾವನ್ನಪ್ಪಿದರೂ ನಿಶ್ಚಯವಾಗಿಯೂ ನಿಮ್ಮನ್ನು ಅಲ್ಲಾಹನ ಬಳಿಗೇ ಒಟ್ಟುಗೂಡಿಸಲಾಗುವುದು. وَلَئِن مُّتُّمْ أَوْ قُتِلْتُمْ لَإِلَى ٱللَّهِ تُحْشَرُونَ. ﴿158﴾
159 (ಓ ಪ್ರವಾದಿಯವರೇ!) ಅಲ್ಲಾಹನ ಕಡೆಯ ದಯೆಯಿಂದಲೇ ನೀವು ಅವರೊಡನೆ ನಯವಾಗಿ ವರ್ತಿಸುತ್ತಿದ್ದೀರಿ. ನೀವು ಒರಟನೋ ಕಠೋರ ಹೃದಯಿಯೋ ಆಗಿದ್ದರೆ ಅವರು ನಿಮ್ಮ ಬಳಿಯಿಂದ ಚದುರಿಬಿಡುತ್ತಿದ್ದರು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು ಅವರಿಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ಕಾರ್ಯನಿರ್ವಹಣೆಯ ಬಗ್ಗೆ ಅವರೊಡನೆ ಸಮಾಲೋಚನೆ ಮಾಡಿರಿ. ನಂತರ ನೀವು ದೃಢ ನಿರ್ಧಾರ ಕೈಗೊಂಡರೆ ಅಲ್ಲಾಹನಲ್ಲಿ ಭರವಸೆಯಿಡಿರಿ. ನಿಶ್ಚಯವಾಗಿಯೂ ಅಲ್ಲಾಹನ ಮೇಲೆ ಭರವಸೆಯಿಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ. فَبِمَا رَحْمَةٍۢ مِّنَ ٱللَّهِ لِنتَ لَهُمْ ۖ وَلَوْ كُنتَ فَظًّا غَلِيظَ ٱلْقَلْبِ لَٱنفَضُّوا۟ مِنْ حَوْلِكَ ۖ فَٱعْفُ عَنْهُمْ وَٱسْتَغْفِرْ لَهُمْ وَشَاوِرْهُمْ فِى ٱلْأَمْرِ ۖ فَإِذَا عَزَمْتَ فَتَوَكَّلْ عَلَى ٱللَّهِ ۚ إِنَّ ٱللَّهَ يُحِبُّ ٱلْمُتَوَكِّلِينَ. ﴿159﴾
160 ಅಲ್ಲಾಹು ನಿಮಗೆ ಸಹಾಯ ಮಾಡಿದರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಅವನೇನಾದರೂ ನಿಮ್ಮನ್ನು ಕೈಬಿಟ್ಟರೆ, ಅವನ ನಂತರ ನಿಮಗೆ ಸಹಾಯ ಮಾಡುವವರು ಯಾರು? ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ. إِن يَنصُرْكُمُ ٱللَّهُ فَلَا غَالِبَ لَكُمْ ۖ وَإِن يَخْذُلْكُمْ فَمَن ذَا ٱلَّذِى يَنصُرُكُم مِّنۢ بَعْدِهِۦ ۗ وَعَلَى ٱللَّهِ فَلْيَتَوَكَّلِ ٱلْمُؤْمِنُونَ. ﴿160﴾
161 ಪ್ರವಾದಿಯು ಮೋಸ ಮಾಡುವುದು ಅಸಂಭವ.[1] ಯಾರು ಮೋಸ ಮಾಡುತ್ತಾನೋ ಅವನು ಪುನರುತ್ಥಾನ ದಿನದಂದು ತಾನು ಮಾಡಿದ ಮೋಸದೊಂದಿಗೆ ಬರುತ್ತಾನೆ. ನಂತರ ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮದ ಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
[1] ಉಹುದ್ ಯುದ್ಧದ ಆರಂಭದಲ್ಲಿ ವೈರಿಗಳು ದಿಕ್ಕಾಪಾಲಾಗಿ ಓಡಿ ಮುಸಲ್ಮಾನರಿಗೆ ಗೆಲುವು ಸಿಕ್ಕಿದಾಗ ಅವರು ವೈರಿಗಳು ಬಿಟ್ಟುಹೋದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸತೊಡಗಿದರು. ಆಗ ಗುಡ್ಡ ಮೇಲಿದ್ದ ಮುಸ್ಲಿಮರಿಗೆ ನಾವು ಹೋಗಿ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸದಿದ್ದರೆ ಅವೆಲ್ಲವೂ ಅವರ ಪಾಲಾಗಿ ನಮಗೆ ಏನೂ ದೊರೆಯುವುದಿಲ್ಲ ಎಂದು ಭಾವಿಸಿ ಗುಡ್ಡದ ಮೇಲಿಂದ ಇಳಿದು ಬಂದು ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸತೊಡಗಿದರು. ಇವರ ಈ ಭಾವನೆಯನ್ನು ಈ ವಚನದಲ್ಲಿ ತಿದ್ದಲಾಗಿದೆ. ಅಂದರೆ ಈ ಯುದ್ಧವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಯಕತ್ವದಲ್ಲಿ ನಡೆಯುತ್ತಿದೆ. ಯುದ್ಧದಲ್ಲಿ ದೊರೆತ ಸಾಮಗ್ರಿಗಳನ್ನು ಅವರು ಯೋಧರ ನಡುವೆ ನ್ಯಾಯಯುತವಾಗಿ ಪಾಲು ಮಾಡುವುದಿಲ್ಲ ಎಂದು ನೀವು ಭಾವಿಸುತ್ತೀರಾ? ನಿಮ್ಮ ಭಾವನೆ ತಪ್ಪು. ಒಬ್ಬ ಪ್ರವಾದಿ ಯಾವತ್ತೂ ಮೋಸ ಮಾಡುವುದು ಸಾಧ್ಯವಿಲ್ಲ.
وَمَا كَانَ لِنَبِىٍّ أَن يَغُلَّ ۚ وَمَن يَغْلُلْ يَأْتِ بِمَا غَلَّ يَوْمَ ٱلْقِيَٰمَةِ ۚ ثُمَّ تُوَفَّىٰ كُلُّ نَفْسٍۢ مَّا كَسَبَتْ وَهُمْ لَا يُظْلَمُونَ. ﴿161﴾
162 ಅಲ್ಲಾಹನ ಸಂಪ್ರೀತಿಯನ್ನು ಅನುಸರಿಸುವವನು ಅಲ್ಲಾಹನ ಕೋಪಕ್ಕೆ ಪಾತ್ರನಾಗಿ ನರಕವನ್ನು ವಾಸಸ್ಥಳವಾಗಿ ಮಾಡಿಕೊಂಡವನಂತೆ ಆಗುವನೇ? ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ. أَفَمَنِ ٱتَّبَعَ رِضْوَٰنَ ٱللَّهِ كَمَنۢ بَآءَ بِسَخَطٍۢ مِّنَ ٱللَّهِ وَمَأْوَىٰهُ جَهَنَّمُ ۚ وَبِئْسَ ٱلْمَصِيرُ. ﴿162﴾
163 ಅವರಿಗೆ ಅಲ್ಲಾಹನ ಬಳಿ ವಿವಿಧ ಪದವಿಗಳಿವೆ. ಅಲ್ಲಾಹು ಅವರು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ. هُمْ دَرَجَٰتٌ عِندَ ٱللَّهِ ۗ وَٱللَّهُ بَصِيرٌۢ بِمَا يَعْمَلُونَ. ﴿163﴾
164 ಅಲ್ಲಾಹನ ವಚನಗಳನ್ನು ಓದಿಕೊಡುವ, ಅವರನ್ನು ಶುದ್ದೀಕರಿಸುವ, ಅವರಿಗೆ ಗ್ರಂಥ ಮತ್ತು ವಿವೇಕವನ್ನು ಕಲಿಸಿಕೊಡುವ ಒಬ್ಬ ಸಂದೇಶವಾಹಕರನ್ನು ಅವರಿಂದಲೇ ಅವರಿಗೆ ಕಳುಹಿಸುವ ಮೂಲಕ ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಗೆ ಮಹಾ ಉಪಕಾರವನ್ನು ಮಾಡಿದ್ದಾನೆ. ಇದಕ್ಕೆ ಮೊದಲು ಅವರು ಸ್ಪಷ್ಟ ದುರ್ಮಾರ್ಗದಲ್ಲಿದ್ದರು. لَقَدْ مَنَّ ٱللَّهُ عَلَى ٱلْمُؤْمِنِينَ إِذْ بَعَثَ فِيهِمْ رَسُولًۭا مِّنْ أَنفُسِهِمْ يَتْلُوا۟ عَلَيْهِمْ ءَايَٰتِهِۦ وَيُزَكِّيهِمْ وَيُعَلِّمُهُمُ ٱلْكِتَٰبَ وَٱلْحِكْمَةَ وَإِن كَانُوا۟ مِن قَبْلُ لَفِى ضَلَٰلٍۢ مُّبِينٍ. ﴿164﴾
165 (ಉಹುದ್ ಯುದ್ಧದ ಸಂದರ್ಭ) ನಿಮಗೊಂದು ಅನಾಹುತ ಸಂಭವಿಸಿತು. ಆದರೆ ನೀವು ಶತ್ರುಗಳಿಗೆ (ಬದ್ರ್ ಯುುದ್ಧದ ಸಂದರ್ಭ) ಅದರ ಇಮ್ಮಡಿ ಅನಾಹುತವನ್ನು ಮಾಡಿದ್ದೀರಿ. ಹಾಗಿದ್ದೂ ಸಹ ನೀವು “ಇದು ಎಲ್ಲಿಂದ ಸಂಭವಿಸಿತು?” ಎಂದು ಕೇಳುತ್ತಿದ್ದೀರಿ! ಹೇಳಿರಿ: “ಅದು ನಿಮ್ಮ ತಪ್ಪಿನಿಂದಲೇ ಸಂಭವಿಸಿದೆ.” ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. أَوَلَمَّآ أَصَٰبَتْكُم مُّصِيبَةٌۭ قَدْ أَصَبْتُم مِّثْلَيْهَا قُلْتُمْ أَنَّىٰ هَٰذَا ۖ قُلْ هُوَ مِنْ عِندِ أَنفُسِكُمْ ۗ إِنَّ ٱللَّهَ عَلَىٰ كُلِّ شَىْءٍۢ قَدِيرٌۭ. ﴿165﴾
166 (ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮಗೆ ಸಂಭವಿಸಿದ ಅನಾಹುತವು ಅಲ್ಲಾಹನ ಅಪ್ಪಣೆಯಿಂದಲೇ ಆಗಿದೆ. ಅದು ಸತ್ಯವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿದೆ. وَمَآ أَصَٰبَكُمْ يَوْمَ ٱلْتَقَى ٱلْجَمْعَانِ فَبِإِذْنِ ٱللَّهِ وَلِيَعْلَمَ ٱلْمُؤْمِنِينَ. ﴿166﴾
167 ಮತ್ತು ಕಪಟವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿ. ಆ ಕಪಟವಿಶ್ವಾಸಿಗಳೊಡನೆ “ಬನ್ನಿ! ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ ಅಥವಾ (ಕನಿಷ್ಠ) ರಕ್ಷಣೆಯನ್ನಾದರೂ ಮಾಡಿ” ಎಂದು ಹೇಳಲಾದಾಗ, ಅವರು ಹೇಳಿದರು: “ಯುದ್ಧ ಸಂಭವಿಸುತ್ತದೆಯೆಂದು ತಿಳಿದಿದ್ದರೆ ನಾವು ನಿಮ್ಮ ಹಿಂದೆ ಬರುತ್ತಿದ್ದೆವು.” ಅಂದು ಅವರು ಸತ್ಯವಿಶ್ವಾಸಕ್ಕಿಂತಲೂ ಸತ್ಯನಿಷೇಧಕ್ಕೆ ಹೆಚ್ಚು ಹತ್ತಿರವಾಗಿದ್ದರು. ಅವರ ಹೃದಯಗಳಲ್ಲಿಲ್ಲದ ವಿಷಯವನ್ನು ಅವರು ಬಾಯಿ ಮೂಲಕ ಹೇಳುತ್ತಾರೆ. ಅವರು ಮುಚ್ಚಿಡುವ ಸಂಗತಿಗಳು ಏನೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. وَلِيَعْلَمَ ٱلَّذِينَ نَافَقُوا۟ ۚ وَقِيلَ لَهُمْ تَعَالَوْا۟ قَٰتِلُوا۟ فِى سَبِيلِ ٱللَّهِ أَوِ ٱدْفَعُوا۟ ۖ قَالُوا۟ لَوْ نَعْلَمُ قِتَالًۭا لَّٱتَّبَعْنَٰكُمْ ۗ هُمْ لِلْكُفْرِ يَوْمَئِذٍ أَقْرَبُ مِنْهُمْ لِلْإِيمَٰنِ ۚ يَقُولُونَ بِأَفْوَٰهِهِم مَّا لَيْسَ فِى قُلُوبِهِمْ ۗ وَٱللَّهُ أَعْلَمُ بِمَا يَكْتُمُونَ. ﴿167﴾
168 ಅವರು ಯಾರೆಂದರೆ, (ಯುದ್ಧಕ್ಕೆ ತೆರಳದೆ) ಮನೆಯಲ್ಲೇ ಕುಳಿತು (ಯುದ್ಧಕ್ಕೆ ಹೊರಟ) ತಮ್ಮ ಸಹೋದರರ ಬಗ್ಗೆ, “ಅವರು ನಮ್ಮ ಮಾತನ್ನು ಕೇಳುತ್ತಿದ್ದರೆ ಖಂಡಿತ ಕೊಲೆಯಾಗುತ್ತಿರಲಿಲ್ಲ” ಎಂದು ಹೇಳಿದವರಾಗಿದ್ದಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುತ್ತಿದ್ದರೆ ನಿಮಗೆ ಸಾವು ಬರುವುದನ್ನು ತಡೆಗಟ್ಟಿರಿ.” ٱلَّذِينَ قَالُوا۟ لِإِخْوَٰنِهِمْ وَقَعَدُوا۟ لَوْ أَطَاعُونَا مَا قُتِلُوا۟ ۗ قُلْ فَٱدْرَءُوا۟ عَنْ أَنفُسِكُمُ ٱلْمَوْتَ إِن كُنتُمْ صَٰدِقِينَ. ﴿168﴾
169 ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು 'ಸತ್ತವರು' ಎಂದು ಭಾವಿಸಬೇಡಿ. ಅವರು ಜೀವಂತವಾಗಿದ್ದಾರೆ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಆಹಾರವನ್ನು ನೀಡಲಾಗುತ್ತಿದೆ. وَلَا تَحْسَبَنَّ ٱلَّذِينَ قُتِلُوا۟ فِى سَبِيلِ ٱللَّهِ أَمْوَٰتًۢا ۚ بَلْ أَحْيَآءٌ عِندَ رَبِّهِمْ يُرْزَقُونَ. ﴿169﴾
170 ಅಲ್ಲಾಹು ಅವನ ಔದಾರ್ಯದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಸಂತೋಷವಾಗಿದ್ದಾರೆ. ತಮ್ಮೊಂದಿಗೆ ಇನ್ನೂ ಸೇರದ, ತಮ್ಮ ಹಿಂದೆ (ಇಹಲೋಕದಲ್ಲಿ) ಜೀವಿಸುತ್ತಿರುವ ಸತ್ಯವಿಶ್ವಾಸಿಗಳ ಬಗ್ಗೆ, ಅವರಿಗೆ ಯಾವುದೇ ಭಯವಿಲ್ಲ ಮತ್ತು ಅವರು ದುಃಖಿಸುವುದೂ ಇಲ್ಲವೆಂದು ತಿಳಿದು ಅವರು ಸಂತೋಷಪಡುತ್ತಿದ್ದಾರೆ. فَرِحِينَ بِمَآ ءَاتَىٰهُمُ ٱللَّهُ مِن فَضْلِهِۦ وَيَسْتَبْشِرُونَ بِٱلَّذِينَ لَمْ يَلْحَقُوا۟ بِهِم مِّنْ خَلْفِهِمْ أَلَّا خَوْفٌ عَلَيْهِمْ وَلَا هُمْ يَحْزَنُونَ. ﴿170﴾
171 ಅಲ್ಲಾಹನ ಅನುಗ್ರಹ ಮತ್ತು ಔದಾರ್ಯದಿಂದ; ಮತ್ತು ಅಲ್ಲಾಹು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ ಎಂಬುದರಿಂದ ಅವರು ಸಂತೋಷಪಡುತ್ತಿದ್ದಾರೆ. ۞ يَسْتَبْشِرُونَ بِنِعْمَةٍۢ مِّنَ ٱللَّهِ وَفَضْلٍۢ وَأَنَّ ٱللَّهَ لَا يُضِيعُ أَجْرَ ٱلْمُؤْمِنِينَ. ﴿171﴾
172 ಅವರು ಯಾರೆಂದರೆ ಗಾಯಾಳುಗಳಾದ ಬಳಿಕವೂ ಅಲ್ಲಾಹು ಮತ್ತು ಸಂದೇಶವಾಹಕರ ಕರೆಗೆ ಉತ್ತರಿಸಿದವರು. ಅವರಲ್ಲಿ ಒಳಿತು ಮಾಡಿದವರಿಗೆ ಮತ್ತು ದೇವಭಯವುಳ್ಳವರಿಗೆ ಮಹಾ ಪ್ರತಿಫಲವಿದೆ. ٱلَّذِينَ ٱسْتَجَابُوا۟ لِلَّهِ وَٱلرَّسُولِ مِنۢ بَعْدِ مَآ أَصَابَهُمُ ٱلْقَرْحُ ۚ لِلَّذِينَ أَحْسَنُوا۟ مِنْهُمْ وَٱتَّقَوْا۟ أَجْرٌ عَظِيمٌ. ﴿172﴾
173 “ನಿಶ್ಚಯವಾಗಿಯೂ ಆ ಜನರು (ಶತ್ರುಗಳು) ನಿಮ್ಮ ವಿರುದ್ಧ ಸೈನ್ಯವನ್ನು ಜಮಾವಣೆಗೊಳಿಸಿದ್ದಾರೆ; ಆದ್ದರಿಂದ ಅವರನ್ನು ಭಯಪಡಿರಿ” ಎಂದು ಜನರು ಅವರೊಡನೆ ಹೇಳಿದಾಗ ಅದು ಅವರ ವಿಶ್ವಾಸವನ್ನು ಹೆಚ್ಚಿಸಿತು. ಅವರು ಹೇಳಿದರು: “ನಮಗೆ ಅಲ್ಲಾಹು ಸಾಕು. ಭರವಸೆಯಿಡಲು ಅವನು ಅತ್ಯುತ್ತಮನಾಗಿದ್ದಾನೆ.”[1]
[1] ಉಹುದ್ ಯುದ್ಧದಿಂದ ಮರಳಿದ ಸತ್ಯನಿಷೇಧಿಗಳ ಮುಖಂಡ ಅಬೂಸುಫ್ಯಾನ್ ಕೆಲವು ಗೋತ್ರದವರಿಗೆ ಆಮಿಷ ನೀಡಿ ಕುರೈಷರು ದೊಡ್ಡ ಸೇನೆಯನ್ನು ಜಮಾವಣೆಗೊಳಿಸಿ ಮದೀನದ ಮೇಲೆ ದಂಡೆತ್ತಿ ಬರಲು ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದರು. ಉಹುದ್ ಯುದ್ಧದ ಆಘಾತದಿಂದ ಹೊರಬರದ ಮುಸಲ್ಮಾನರು ಈ ಸುದ್ದಿಯನ್ನು ಕೇಳಿ ಎದೆಗುಂದುತ್ತಾರೆಂದು ಅವರು ಭಾವಿಸಿದ್ದರು. ಹಮ್ರಾವುಲ್ ಅಸದ್ ಎಂಬ ಸ್ಥಳದಲ್ಲಿದ್ದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಮುಸಲ್ಮಾನರು ಈ ಸುದ್ದಿಯನ್ನು ಕೇಳಿದಾಗ ಅವರ ವಿಶ್ವಾಸವು ಇಮ್ಮಡಿಯಾಯಿತೇ ವಿನಾ ಅವರು ಎದೆಗುಂದಲಿಲ್ಲ.
ٱلَّذِينَ قَالَ لَهُمُ ٱلنَّاسُ إِنَّ ٱلنَّاسَ قَدْ جَمَعُوا۟ لَكُمْ فَٱخْشَوْهُمْ فَزَادَهُمْ إِيمَٰنًۭا وَقَالُوا۟ حَسْبُنَا ٱللَّهُ وَنِعْمَ ٱلْوَكِيلُ. ﴿173﴾
174 ಆದ್ದರಿಂದ ಅವರು ಅಲ್ಲಾಹನ ಕಡೆಯ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಅವರು ಅಲ್ಲಾಹನ ಸಂಪ್ರೀತಿಯನ್ನು ಹಿಂಬಾಲಿಸಿದರು. ಅಲ್ಲಾಹು ಮಹಾ ಔದಾರ್ಯವುಳ್ಳವನಾಗಿದ್ದಾನೆ. فَٱنقَلَبُوا۟ بِنِعْمَةٍۢ مِّنَ ٱللَّهِ وَفَضْلٍۢ لَّمْ يَمْسَسْهُمْ سُوٓءٌۭ وَٱتَّبَعُوا۟ رِضْوَٰنَ ٱللَّهِ ۗ وَٱللَّهُ ذُو فَضْلٍ عَظِيمٍ. ﴿174﴾
175 ಅದು (ನಿಮ್ಮನ್ನು ಹೆದರಿಸಿದ್ದು) ಶೈತಾನನಾಗಿದ್ದನು. ಅವನು ಅವನ ಮಿತ್ರರ ಬಗ್ಗೆ ಹೆದರಿಸುತ್ತಾನೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ. إِنَّمَا ذَٰلِكُمُ ٱلشَّيْطَٰنُ يُخَوِّفُ أَوْلِيَآءَهُۥ فَلَا تَخَافُوهُمْ وَخَافُونِ إِن كُنتُم مُّؤْمِنِينَ. ﴿175﴾
176 ಸತ್ಯನಿಷೇಧದಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುವವರನ್ನು ಕಂಡು ನೀವು ಬೇಸರಿಸಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅಲ್ಲಾಹು ಅವರಿಗೆ ಪರಲೋಕದಲ್ಲಿ ಯಾವುದೇ ಪಾಲು ನೀಡದಿರಲು ಉದ್ದೇಶಿಸಿದ್ದಾನೆ. ಅವರಿಗೆ ಕಠಿಣವಾದ ಶಿಕ್ಷೆಯಿದೆ. وَلَا يَحْزُنكَ ٱلَّذِينَ يُسَٰرِعُونَ فِى ٱلْكُفْرِ ۚ إِنَّهُمْ لَن يَضُرُّوا۟ ٱللَّهَ شَيْـًۭٔا ۗ يُرِيدُ ٱللَّهُ أَلَّا يَجْعَلَ لَهُمْ حَظًّۭا فِى ٱلْءَاخِرَةِ ۖ وَلَهُمْ عَذَابٌ عَظِيمٌ. ﴿176﴾
177 ನಿಶ್ಚಯವಾಗಿಯೂ ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಖರೀದಿಸಿದವರು ಯಾರೋ—ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. إِنَّ ٱلَّذِينَ ٱشْتَرَوُا۟ ٱلْكُفْرَ بِٱلْإِيمَٰنِ لَن يَضُرُّوا۟ ٱللَّهَ شَيْـًۭٔا وَلَهُمْ عَذَابٌ أَلِيمٌۭ. ﴿177﴾
178 ಸತ್ಯನಿಷೇಧಿಗಳಿಗೆ ನಾವು ಕಾಲಾವಕಾಶ ನೀಡುವುದು ಅವರ ಪಾಲಿಗೆ ಒಳಿತೆಂದು ಅವರೆಂದೂ ಭಾವಿಸದಿರಲಿ. ನಾವು ಅವರಿಗೆ ಕಾಲಾವಕಾಶ ನೀಡುವುದು ಅವರು ಪಾಪಗಳನ್ನು ಹೆಚ್ಚಿಸಲಿಕ್ಕಾಗಿದೆ. ಅವರಿಗೆ ಅವಮಾನಕರ ಶಿಕ್ಷೆಯಿದೆ. وَلَا يَحْسَبَنَّ ٱلَّذِينَ كَفَرُوٓا۟ أَنَّمَا نُمْلِى لَهُمْ خَيْرٌۭ لِّأَنفُسِهِمْ ۚ إِنَّمَا نُمْلِى لَهُمْ لِيَزْدَادُوٓا۟ إِثْمًۭا ۚ وَلَهُمْ عَذَابٌۭ مُّهِينٌۭ. ﴿178﴾
179 ಶುದ್ಧ ಮತ್ತು ಅಶುದ್ಧವನ್ನು ಬೇರ್ಪಡಿಸಿ ತೋರಿಸುವ ತನಕ ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಬಿಟ್ಟುಬಿಡುವುದಿಲ್ಲ. ಅಲ್ಲಾಹು ನಿಮಗೆ ಅದೃಶ್ಯ ಜ್ಞಾನವನ್ನು ತಿಳಿಸಿಕೊಡುವುದೂ ಇಲ್ಲ. ಆದರೆ ಅಲ್ಲಾಹು ಅವನ ಸಂದೇಶವಾಹಕರುಗಳಲ್ಲಿ ಅವನು ಇಚ್ಛಿಸುವವರನ್ನು ಆರಿಸುತ್ತಾನೆ. ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ನೀವು ವಿಶ್ವಾಸವಿಟ್ಟರೆ ಮತ್ತು ದೇವಭಯದಿಂದ ಜೀವಿಸಿದರೆ ನಿಮಗೆ ಮಹಾ ಪ್ರತಿಫಲವಿದೆ. مَّا كَانَ ٱللَّهُ لِيَذَرَ ٱلْمُؤْمِنِينَ عَلَىٰ مَآ أَنتُمْ عَلَيْهِ حَتَّىٰ يَمِيزَ ٱلْخَبِيثَ مِنَ ٱلطَّيِّبِ ۗ وَمَا كَانَ ٱللَّهُ لِيُطْلِعَكُمْ عَلَى ٱلْغَيْبِ وَلَٰكِنَّ ٱللَّهَ يَجْتَبِى مِن رُّسُلِهِۦ مَن يَشَآءُ ۖ فَـَٔامِنُوا۟ بِٱللَّهِ وَرُسُلِهِۦ ۚ وَإِن تُؤْمِنُوا۟ وَتَتَّقُوا۟ فَلَكُمْ أَجْرٌ عَظِيمٌۭ. ﴿179﴾
180 ಅಲ್ಲಾಹು ತನ್ನ ಔದಾರ್ಯದಿಂದ ದಯಪಾಲಿಸಿದ ಧನದಲ್ಲಿ ಜಿಪುಣತೆ ತೋರುವವರು ಯಾರೋ—ಅದು ಅವರಿಗೆ ಒಳಿತೆಂದು ಅವರು ಭಾವಿಸದಿರಲಿ. ಅಲ್ಲ, ವಾಸ್ತವವಾಗಿ ಅದು ಅವರಿಗೆ ಕೆಡುಕಾಗಿದೆ. ಪುನರುತ್ಥಾನ ದಿನದಂದು ಅವರು ಜಿಪುಣತೆ ತೋರಿದ ವಸ್ತುವನ್ನು ಅವರ ಕೊರಳಿಗೆ ಹಾರವಾಗಿ ತೊಡಿಸಲಾಗುವುದು. ಭೂಮ್ಯಾಕಾಶಗಳ ವಾರಸುಹಕ್ಕು ಅಲ್ಲಾಹನಿಗೆ ಸೇರಿದ್ದು. ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿಯುವವನಾಗಿದ್ದಾನೆ. وَلَا يَحْسَبَنَّ ٱلَّذِينَ يَبْخَلُونَ بِمَآ ءَاتَىٰهُمُ ٱللَّهُ مِن فَضْلِهِۦ هُوَ خَيْرًۭا لَّهُم ۖ بَلْ هُوَ شَرٌّۭ لَّهُمْ ۖ سَيُطَوَّقُونَ مَا بَخِلُوا۟ بِهِۦ يَوْمَ ٱلْقِيَٰمَةِ ۗ وَلِلَّهِ مِيرَٰثُ ٱلسَّمَٰوَٰتِ وَٱلْأَرْضِ ۗ وَٱللَّهُ بِمَا تَعْمَلُونَ خَبِيرٌۭ. ﴿180﴾
181 ಅಲ್ಲಾಹು ಬಡವನು ಮತ್ತು ನಾವು ಶ್ರೀಮಂತರು ಎಂದು ಹೇಳಿದವರ (ಯಹೂದಿಗಳ) ಮಾತನ್ನು ಅಲ್ಲಾಹು ಖಂಡಿತ ಕೇಳಿದ್ದಾನೆ.[1] ಅವರು ಹೇಳಿದ ಮಾತನ್ನು ಮತ್ತು ಅವರು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ್ದನ್ನು ನಾವು ದಾಖಲಿಸಿಡುತ್ತೇವೆ. ಉರಿಯುವ ನರಕ ಶಿಕ್ಷೆಯ ರುಚಿಯನ್ನು ನೋಡಿರಿ ಎಂದು ನಾವು ಅವರೊಡನೆ ಹೇಳುವೆವು.
[1] ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಪ್ರೋತ್ಸಾಹಿಸುತ್ತಾ, “ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವರು ಯಾರು?” ಎಂಬ ವಚನವು ಅವತೀರ್ಣವಾದಾಗ ಯಹೂದಿಗಳು “ಓ ಮುಹಮ್ಮದ್! ನಿಮ್ಮ ದೇವರು ಬಡವನಾಗಿ ಬಿಟ್ಟಿದ್ದಾನೆ. ಅವನು ಅವನ ಸೃಷ್ಟಿಗಳಿಂದ ಹಣ ಕೇಳುತ್ತಿದ್ದಾನೆ.” ಎಂದು ತಮಾಷೆ ಮಾಡತೊಡಗಿದರು. ಆಗ ಈ ವಚನವು ಅವತೀರ್ಣವಾಯಿತು.
لَّقَدْ سَمِعَ ٱللَّهُ قَوْلَ ٱلَّذِينَ قَالُوٓا۟ إِنَّ ٱللَّهَ فَقِيرٌۭ وَنَحْنُ أَغْنِيَآءُ ۘ سَنَكْتُبُ مَا قَالُوا۟ وَقَتْلَهُمُ ٱلْأَنۢبِيَآءَ بِغَيْرِ حَقٍّۢ وَنَقُولُ ذُوقُوا۟ عَذَابَ ٱلْحَرِيقِ. ﴿181﴾
182 ಅದು ನಿಮ್ಮ ಕೈಗಳು ಮಾಡಿದ ದುಷ್ಕರ್ಮಗಳ ಫಲವಾಗಿದೆ. ಅಲ್ಲಾಹು ತನ್ನ ದಾಸರಿಗೆ ಅನ್ಯಾಯ ಮಾಡುವವನಲ್ಲ. ذَٰلِكَ بِمَا قَدَّمَتْ أَيْدِيكُمْ وَأَنَّ ٱللَّهَ لَيْسَ بِظَلَّامٍۢ لِّلْعَبِيدِ. ﴿182﴾
183 ಅವರು ಯಾರೆಂದರೆ, “ನಮ್ಮ ಮುಂದೆ ಒಂದು ಬಲಿ ನೀಡಿ ಅದನ್ನು ಅಗ್ನಿಯು ಭಕ್ಷಿಸುವುದನ್ನು (ಕಣ್ಣಾರೆ ನೋಡುವ) ತನಕ ನಾವು ಯಾವುದೇ ಸಂದೇಶವಾಹಕನಲ್ಲಿ ವಿಶ್ವಾಸವಿಡಬಾರದು ಎಂದು ಅಲ್ಲಾಹು ನಮ್ಮಿಂದ ಕರಾರು ಪಡೆದಿದ್ದಾನೆ” ಎಂದು ಹೇಳಿದವರು.[1] ಹೇಳಿರಿ: “ನನಗಿಂತ ಮೊದಲು ಹಲವಾರು ಸಂದೇಶವಾಹಕರುಗಳು ಸ್ಪಷ್ಟ ಪುರಾವೆಗಳೊಂದಿಗೆ ಮತ್ತು ನೀವು ಹೇಳುತ್ತಿರುವ ಪವಾಡಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ಹಾಗಿದ್ದೂ ನೀವು ಸತ್ಯವಂತರಾಗಿದ್ದರೆ ನೀವೇಕೆ ಅವರನ್ನು ಕೊಲೆ ಮಾಡಿದಿರಿ?”
[1] ಇಲ್ಲಿ ಯಹೂದಿಗಳು ಹೇಳಿದ ಇನ್ನೊಂದು ಸುಳ್ಳನ್ನು ಕೂಡ ಅನಾವರಣಗೊಳಿಸಲಾಗಿದೆ. ಅದೇನೆಂದರೆ ಅವರು ಹೇಳುತ್ತಿದ್ದರು: “ಒಬ್ಬ ವ್ಯಕ್ತಿ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಪ್ರಾರ್ಥಿಸಿದಾಗ ಆಕಾಶದಿಂದ ಬೆಂಕಿ ಸುರಿದು ನೀವು ಅಲ್ಲಾಹನಿಗೆ ಕುರ್ಬಾನಿ ಮಾಡಿದ ಪ್ರಾಣಿಯನ್ನು ಅದು ಭಕ್ಷಿಸಿದರೆ ಮಾತ್ರ ಆ ವ್ಯಕ್ತಿಯನ್ನು ಪ್ರವಾದಿಯೆಂದು ನಂಬಿರಿ. ಇಲ್ಲದಿದ್ದರೆ ನಂಬಬೇಡಿ ಎಂದು ಅಲ್ಲಾಹು ನಮ್ಮೊಡನೆ ಕರಾರು ಪಡೆದಿದ್ದಾನೆ. ನೀವು ಆ ಪವಾಡವನ್ನು ತೋರಿಸಿಲ್ಲ. ಆದ್ದರಿಂದ ನಾವು ನಿಮ್ಮಲ್ಲಿ ವಿಶ್ವಾಸವಿಡುವುದಿಲ್ಲ.” ಆದರೆ ಇದು ಅವರು ಹೇಳುವ ಒಂದು ನೆಪ ಮಾತ್ರ. ಏಕೆಂದರೆ ಇದಕ್ಕಿಂತ ಮೊದಲು ಇಂತಹ ಅನೇಕ ಪವಾಡಗಳನ್ನು ತೋರಿಸಿದ ಪ್ರವಾದಿಗಳನ್ನು ಇವರ ಪೂರ್ವಜರು ತಿರಸ್ಕರಿಸಿದ್ದರು ಮತ್ತು ನಿರ್ದಯವಾಗಿ ಕೊಂದು ಹಾಕಿದ್ದರು.
ٱلَّذِينَ قَالُوٓا۟ إِنَّ ٱللَّهَ عَهِدَ إِلَيْنَآ أَلَّا نُؤْمِنَ لِرَسُولٍ حَتَّىٰ يَأْتِيَنَا بِقُرْبَانٍۢ تَأْكُلُهُ ٱلنَّارُ ۗ قُلْ قَدْ جَآءَكُمْ رُسُلٌۭ مِّن قَبْلِى بِٱلْبَيِّنَٰتِ وَبِٱلَّذِى قُلْتُمْ فَلِمَ قَتَلْتُمُوهُمْ إِن كُنتُمْ صَٰدِقِينَ. ﴿183﴾
184 ಅವರು ನಿಮ್ಮನ್ನು ನಿಷೇಧಿಸುವುದಾದರೆ ನಿಮಗಿಂತ ಮೊದಲು ಸ್ಪಷ್ಟ ಪುರಾವೆಗಳೊಂದಿಗೆ, ಹೊತ್ತಗೆಗಳೊಂದಿಗೆ ಮತ್ತು ಪ್ರಕಾಶ ಬೀರುವ ಗ್ರಂಥದೊಂದಿಗೆ ಬಂದ ಸಂದೇಶವಾಹಕರು ಕೂಡ ನಿಷೇಧಿಸಲ್ಪಟ್ಟಿದ್ದರು. فَإِن كَذَّبُوكَ فَقَدْ كُذِّبَ رُسُلٌۭ مِّن قَبْلِكَ جَآءُو بِٱلْبَيِّنَٰتِ وَٱلزُّبُرِ وَٱلْكِتَٰبِ ٱلْمُنِيرِ. ﴿184﴾
185 ಎಲ್ಲಾ ಆತ್ಮಗಳೂ ಸಾವಿನ ರುಚಿಯನ್ನು ನೋಡಲಿವೆ. ನಿಮ್ಮ ಪ್ರತಿಫಲಗಳನ್ನು ಪುನರುತ್ಥಾನ ದಿನದಂದು ನಿಮಗೆ ಪೂರ್ಣವಾಗಿ ನೀಡಲಾಗುವುದು. ಆಗ ಯಾರು ನರಕದಿಂದ ದೂರವಾಗಿ, ಸ್ವರ್ಗಕ್ಕೆ ಪ್ರವೇಶ ಪಡೆಯುತ್ತಾನೋ ಅವನು ಜಯಶಾಲಿಯಾದನು. ಇಹಲೋಕ ಜೀವನವು ಮರುಳುಗೊಳಿಸುವ ಆನಂದ ಮಾತ್ರವಾಗಿದೆ. كُلُّ نَفْسٍۢ ذَآئِقَةُ ٱلْمَوْتِ ۗ وَإِنَّمَا تُوَفَّوْنَ أُجُورَكُمْ يَوْمَ ٱلْقِيَٰمَةِ ۖ فَمَن زُحْزِحَ عَنِ ٱلنَّارِ وَأُدْخِلَ ٱلْجَنَّةَ فَقَدْ فَازَ ۗ وَمَا ٱلْحَيَوٰةُ ٱلدُّنْيَآ إِلَّا مَتَٰعُ ٱلْغُرُورِ. ﴿185﴾
186 ನಿಶ್ಚಯವಾಗಿಯೂ ನಿಮ್ಮ ತನು-ಧನಗಳಲ್ಲಿ ನಿಮ್ಮನ್ನು ಪರೀಕ್ಷಿಸಲಾಗುವುದು. ನಿಮಗಿಂತ ಮೊದಲು ಗ್ರಂಥ ನೀಡಲಾದವರಿಂದ ಮತ್ತು ಬಹುದೇವಾರಾಧಕರಿಂದ ನೀವು ಅನೇಕ ಚುಚ್ಚು ಮಾತುಗಳನ್ನು ಕೇಳುವಿರಿ. ನೀವು ತಾಳ್ಮೆ ವಹಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟು ಜೀವಿಸಿದರೆ ನಿಶ್ಚಯವಾಗಿಯೂ ಅದು ದೃಢಸಂಕಲ್ಪದಲ್ಲಿ ಸೇರಿದ ವಿಷಯವಾಗಿದೆ. ۞ لَتُبْلَوُنَّ فِىٓ أَمْوَٰلِكُمْ وَأَنفُسِكُمْ وَلَتَسْمَعُنَّ مِنَ ٱلَّذِينَ أُوتُوا۟ ٱلْكِتَٰبَ مِن قَبْلِكُمْ وَمِنَ ٱلَّذِينَ أَشْرَكُوٓا۟ أَذًۭى كَثِيرًۭا ۚ وَإِن تَصْبِرُوا۟ وَتَتَّقُوا۟ فَإِنَّ ذَٰلِكَ مِنْ عَزْمِ ٱلْأُمُورِ. ﴿186﴾
187 “ನಿಶ್ಚಯವಾಗಿಯೂ ನೀವು ಅದನ್ನು (ಗ್ರಂಥವನ್ನು) ಜನರಿಗೆ ವಿವರಿಸಿಕೊಡಬೇಕು ಮತ್ತು ಅದನ್ನು ಬಚ್ಚಿಡಬಾರದು” ಎಂದು ಅಲ್ಲಾಹು ಗ್ರಂಥ ನೀಡಲಾದವರಿಂದ ಕರಾರು ಪಡೆದ ಸಂದರ್ಭ. ಆದರೆ ಅವರು ಅದನ್ನು (ಗ್ರಂಥವನ್ನು) ತಮ್ಮ ಬೆನ್ನ ಹಿಂದಕ್ಕೆ ಎಸೆದರು ಮತ್ತು ಅದನ್ನು ಅಲ್ಪ ಬೆಲೆಗೆ ಮಾರಾಟ ಮಾಡಿದರು. ಅವರು ಮಾಡಿದ ಮಾರಾಟವು ಬಹಳ ನಿಕೃಷ್ಟವಾಗಿದೆ! وَإِذْ أَخَذَ ٱللَّهُ مِيثَٰقَ ٱلَّذِينَ أُوتُوا۟ ٱلْكِتَٰبَ لَتُبَيِّنُنَّهُۥ لِلنَّاسِ وَلَا تَكْتُمُونَهُۥ فَنَبَذُوهُ وَرَآءَ ظُهُورِهِمْ وَٱشْتَرَوْا۟ بِهِۦ ثَمَنًۭا قَلِيلًۭا ۖ فَبِئْسَ مَا يَشْتَرُونَ. ﴿187﴾
188 ತಾವು ಮಾಡಿದ ಕರ್ಮಗಳ ಬಗ್ಗೆ ಸಂತೋಷಪಡುವವರು ಮತ್ತು ತಾವು ಮಾಡದ ಕರ್ಮಗಳ ಹೆಸರಿನಲ್ಲಿ ಪ್ರಶಂಸೆ ಪಡೆಯಲು ಇಷ್ಟಪಡುವವರು ಯಾರೋ—ಅವರು ಶಿಕ್ಷೆಯಿಂದ ಮುಕ್ತರೆಂದು ನೀವೆಂದೂ ಭಾವಿಸಬೇಡಿ. ಅವರಿಗೆ ಯಾತನಾಮಯ ಶಿಕ್ಷೆಯಿದೆ. لَا تَحْسَبَنَّ ٱلَّذِينَ يَفْرَحُونَ بِمَآ أَتَوا۟ وَّيُحِبُّونَ أَن يُحْمَدُوا۟ بِمَا لَمْ يَفْعَلُوا۟ فَلَا تَحْسَبَنَّهُم بِمَفَازَةٍۢ مِّنَ ٱلْعَذَابِ ۖ وَلَهُمْ عَذَابٌ أَلِيمٌۭ. ﴿188﴾
189 ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. وَلِلَّهِ مُلْكُ ٱلسَّمَٰوَٰتِ وَٱلْأَرْضِ ۗ وَٱللَّهُ عَلَىٰ كُلِّ شَىْءٍۢ قَدِيرٌ. ﴿189﴾
190 ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯಲ್ಲಿ ಮತ್ತು ರಾತ್ರಿ ಹಗಲುಗಳ ಬದಲಾವಣೆಯಲ್ಲಿ ಬುದ್ಧಿವಂತರಿಗೆ ಅನೇಕ ದೃಷ್ಟಾಂತಗಳಿವೆ. إِنَّ فِى خَلْقِ ٱلسَّمَٰوَٰتِ وَٱلْأَرْضِ وَٱخْتِلَٰفِ ٱلَّيْلِ وَٱلنَّهَارِ لَءَايَٰتٍۢ لِّأُو۟لِى ٱلْأَلْبَٰبِ. ﴿190﴾
191 ಅವರು ಯಾರೆಂದರೆ, ನಿಂತುಕೊಂಡು, ಕುಳಿತುಕೊಂಡು ಮತ್ತು ಪಾರ್ಶ್ವಕ್ಕೆ ಸರಿದು (ಮಲಗಿಕೊಂಡು) ಅಲ್ಲಾಹನನ್ನು ಸ್ಮರಿಸುವವರು ಮತ್ತು ಭೂಮ್ಯಾಕಾಶಗಳ ಸೃಷ್ಟಿಯ ಬಗ್ಗೆ ಆಲೋಚಿಸುವವರು. (ಅವರು ಹೇಳುತ್ತಾರೆ): “ಓ ನಮ್ಮ ಪರಿಪಾಲಕನೇ! ನೀನು ಇದನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಿಶುದ್ಧನು. ಆದ್ದರಿಂದ ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು. ٱلَّذِينَ يَذْكُرُونَ ٱللَّهَ قِيَٰمًۭا وَقُعُودًۭا وَعَلَىٰ جُنُوبِهِمْ وَيَتَفَكَّرُونَ فِى خَلْقِ ٱلسَّمَٰوَٰتِ وَٱلْأَرْضِ رَبَّنَا مَا خَلَقْتَ هَٰذَا بَٰطِلًۭا سُبْحَٰنَكَ فَقِنَا عَذَابَ ٱلنَّارِ. ﴿191﴾
192 ಓ ನಮ್ಮ ಪರಿಪಾಲಕನೇ! ನೀನು ಯಾರನ್ನು ನರಕಕ್ಕೆ ತಳ್ಳುತ್ತೀಯೋ ಅವನನ್ನು ನೀನು ಅವಮಾನಿಸಿರುವೆ. ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ. رَبَّنَآ إِنَّكَ مَن تُدْخِلِ ٱلنَّارَ فَقَدْ أَخْزَيْتَهُۥ ۖ وَمَا لِلظَّٰلِمِينَ مِنْ أَنصَارٍۢ. ﴿192﴾
193 ಓ ನಮ್ಮ ಪರಿಪಾಲಕನೇ! ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡಿ ಎಂದು ಹೇಳುತ್ತಾ ಸತ್ಯವಿಶ್ವಾಸಕ್ಕೆ ಕರೆ ನೀಡುವವನ ಕರೆಯನ್ನು ಕೇಳಿ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಓ ನಮ್ಮ ಪರಿಪಾಲಕನೇ! ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ದೋಷಗಳನ್ನು ನಮ್ಮಿಂದ ಅಳಿಸು; ನಮ್ಮನ್ನು ನೀತಿವಂತರೊಂದಿಗೆ ಮರಣಹೊಂದುವಂತೆ ಮಾಡು. رَّبَّنَآ إِنَّنَا سَمِعْنَا مُنَادِيًۭا يُنَادِى لِلْإِيمَٰنِ أَنْ ءَامِنُوا۟ بِرَبِّكُمْ فَـَٔامَنَّا ۚ رَبَّنَا فَٱغْفِرْ لَنَا ذُنُوبَنَا وَكَفِّرْ عَنَّا سَيِّـَٔاتِنَا وَتَوَفَّنَا مَعَ ٱلْأَبْرَارِ. ﴿193﴾
194 ಓ ನಮ್ಮ ಪರಿಪಾಲಕನೇ! ನಿನ್ನ ಸಂದೇಶವಾಹಕರ ಮೂಲಕ ನೀನು ವಾಗ್ದಾನ ಮಾಡಿದ್ದನ್ನು ನಮಗೆ ದಯಪಾಲಿಸು ಮತ್ತು ಪುನರುತ್ಥಾನ ದಿನದಂದು ನಮ್ಮನ್ನು ಅವಮಾನಿಸದಿರು. ನಿಶ್ಚಯವಾಗಿಯೂ ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.” رَبَّنَا وَءَاتِنَا مَا وَعَدتَّنَا عَلَىٰ رُسُلِكَ وَلَا تُخْزِنَا يَوْمَ ٱلْقِيَٰمَةِ ۗ إِنَّكَ لَا تُخْلِفُ ٱلْمِيعَادَ. ﴿194﴾
195 ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಉತ್ತರಿಸಿದನು: “ಪುರುಷನಾಗಲಿ ಸ್ತ್ರೀಯಾಗಲಿ ನಿಮ್ಮಲ್ಲಿ ಕರ್ಮವೆಸಗಿದ ಯಾರ ಕರ್ಮವನ್ನೂ ನಾನು ನಿಷ್ಫಲಗೊಳಿಸುವುದಿಲ್ಲ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾದವರು. ಆದ್ದರಿಂದ ವಲಸೆ (ಹಿಜ್ರ) ಮಾಡಿದವರು, ತಮ್ಮ ಮನೆಗಳಿಂದ ಹೊರಹಾಕಲಾದವರು, ನನ್ನ ಮಾರ್ಗದಲ್ಲಿ ತೊಂದರೆಯನ್ನು ಅನುಭವಿಸಿದವರು, (ನನ್ನ ಮಾರ್ಗದಲ್ಲಿ) ಯುದ್ಧ ಮಾಡಿದವರು ಮತ್ತು ಕೊಲೆಯಾದವರು (ಹುತಾತ್ಮರು) ಯಾರೋ—ಅವರ ಪಾಪಗಳನ್ನು ನಾನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುವೆನು. ಇದು ಅಲ್ಲಾಹನ ಕಡೆಯ ಪ್ರತಿಫಲವಾಗಿದೆ. ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಿದೆ. فَٱسْتَجَابَ لَهُمْ رَبُّهُمْ أَنِّى لَآ أُضِيعُ عَمَلَ عَٰمِلٍۢ مِّنكُم مِّن ذَكَرٍ أَوْ أُنثَىٰ ۖ بَعْضُكُم مِّنۢ بَعْضٍۢ ۖ فَٱلَّذِينَ هَاجَرُوا۟ وَأُخْرِجُوا۟ مِن دِيَٰرِهِمْ وَأُوذُوا۟ فِى سَبِيلِى وَقَٰتَلُوا۟ وَقُتِلُوا۟ لَأُكَفِّرَنَّ عَنْهُمْ سَيِّـَٔاتِهِمْ وَلَأُدْخِلَنَّهُمْ جَنَّٰتٍۢ تَجْرِى مِن تَحْتِهَا ٱلْأَنْهَٰرُ ثَوَابًۭا مِّنْ عِندِ ٱللَّهِ ۗ وَٱللَّهُ عِندَهُۥ حُسْنُ ٱلثَّوَابِ. ﴿195﴾
196 ಊರುಗಳಲ್ಲಿ ಸತ್ಯನಿಷೇಧಿಗಳ ಮೆರೆದಾಟವು ನಿಮ್ಮನ್ನು ಮರುಳುಗೊಳಿಸದಿರಲಿ. لَا يَغُرَّنَّكَ تَقَلُّبُ ٱلَّذِينَ كَفَرُوا۟ فِى ٱلْبِلَٰدِ. ﴿196﴾
197 ಅದು ತಾತ್ಕಾಲಿಕ ಆನಂದವಾಗಿದೆ. ನಂತರ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಆ ವಾಸಸ್ಥಳ ಬಹಳ ನಿಕೃಷ್ಟವಾಗಿದೆ! مَتَٰعٌۭ قَلِيلٌۭ ثُمَّ مَأْوَىٰهُمْ جَهَنَّمُ ۚ وَبِئْسَ ٱلْمِهَادُ. ﴿197﴾
198 ಆದರೆ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಯಾರೋ—ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹನ ಕಡೆಯ ಔತಣವಾಗಿದೆ. ನೀತಿವಂತರಿಗೆ ಅಲ್ಲಾಹನ ಬಳಿಯಿರುವುದೇ ಅತ್ಯುತ್ತಮವಾಗಿದೆ. لَٰكِنِ ٱلَّذِينَ ٱتَّقَوْا۟ رَبَّهُمْ لَهُمْ جَنَّٰتٌۭ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَا نُزُلًۭا مِّنْ عِندِ ٱللَّهِ ۗ وَمَا عِندَ ٱللَّهِ خَيْرٌۭ لِّلْأَبْرَارِ. ﴿198﴾
199 ನಿಶ್ಚಯವಾಗಿಯೂ ಗ್ರಂಥದವರಲ್ಲಿ ಕೆಲವರಿದ್ದಾರೆ. ಅವರು ಅಲ್ಲಾಹನಲ್ಲಿ, ನಿಮಗೆ ಅವತೀರ್ಣವಾಗಿರುವುದರಲ್ಲಿ ಮತ್ತು ಅವರಿಗೆ ಅವತೀರ್ಣವಾಗಿರುವುದರಲ್ಲಿ ವಿಶ್ವಾಸವಿಡುತ್ತಾರೆ. ಅವರು ಅಲ್ಲಾಹನಿಗೆ ವಿಧೇಯತೆಯಿಂದ ಶರಣಾಗಿದ್ದಾರೆ. ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರುವುದಿಲ್ಲ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ. وَإِنَّ مِنْ أَهْلِ ٱلْكِتَٰبِ لَمَن يُؤْمِنُ بِٱللَّهِ وَمَآ أُنزِلَ إِلَيْكُمْ وَمَآ أُنزِلَ إِلَيْهِمْ خَٰشِعِينَ لِلَّهِ لَا يَشْتَرُونَ بِـَٔايَٰتِ ٱللَّهِ ثَمَنًۭا قَلِيلًا ۗ أُو۟لَٰٓئِكَ لَهُمْ أَجْرُهُمْ عِندَ رَبِّهِمْ ۗ إِنَّ ٱللَّهَ سَرِيعُ ٱلْحِسَابِ. ﴿199﴾
200 ಓ ಸತ್ಯವಿಶ್ವಾಸಿಗಳೇ! ತಾಳ್ಮೆಯಿಂದಿರಿ, ಪರಸ್ಪರ ಸ್ಥೈರ್ಯವನ್ನು ತೋರಿರಿ ಮತ್ತು ಪ್ರತಿರೋಧ ಸನ್ನದ್ಧರಾಗಿರಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ. يَٰٓأَيُّهَا ٱلَّذِينَ ءَامَنُوا۟ ٱصْبِرُوا۟ وَصَابِرُوا۟ وَرَابِطُوا۟ وَٱتَّقُوا۟ ٱللَّهَ لَعَلَّكُمْ تُفْلِحُونَ. ﴿200﴾